Type Here to Get Search Results !

15 December 2021 Today Top-10 General Knowledge Question Answers in Kannada for All Competitive Exams

15 December 2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಮೈಸೂರಿನಲ್ಲಿ ಹಸ್ತ ಪ್ರತಿಗಳ ಸಂಗ್ರಹಾಲಯ ಓರಿಯಂಟಲ್ ಮ್ಯಾನು ಸ್ಕ್ರಿಪ್ಟ್ ಲೈಬ್ರರಿ ಸ್ಥಾಪಿಸಿದವರು ಯಾರು?
ಎ) ಕೆ. ಶೇಷಾದ್ರಿ ಅಯ್ಯರ್
ಬಿ) ರಂಗಾಚಾರ್ಯ
ಸಿ) ಮಿರ್ಜಾ ಇಸ್ಮಾಯಲ್
ಡಿ) ಪೂರ್ಣಯ್ಯ

ಸರಿಯಾದ ಉತ್ತರ:  ಎ) ಕೆ. ಶೇಷಾದ್ರಿ ಅಯ್ಯರ್ 



2. ಆರ್ಯನ್ ಪೇಶ್ವ ಎಂದು ಯಾರನ್ನು ಕರೆಯುತ್ತಾರೆ ?
ಎ) 2ನೇ ಸಾಯಜಿರಾವ್ ಗಾಯಕ್ವಾಡ್
ಬಿ) ರಾಜಮಹೇಂದ್ರ ಪ್ರತಾಪಸಿಂಹ
ಸಿ) ಶ್ಯಾಮಜಿ ಕೃಷ್ಣಶರ್ಮ
ಡಿ) ಮನಬೇಂದ್ರನಾಥ್ ರಾಯ್

ಸರಿಯಾದ ಉತ್ತರ: ಬಿ) ರಾಜಮಹೇಂದ್ರ ಪ್ರತಾಪಸಿಂಹ 


3. ಕೆಳಗಿನ ಯಾವ ವ್ಯಕ್ತಿಗೆ 'ಸಾಚ್ ಬಾದ್ ಷಾ' ಎಂಬ ಬಿರುದು ಇದೆ ?
ಎ) ಗುರು ಗೋವಿಂದ ಸಿಂಗ್
ಬಿ) ಅರ್ಜುನದೇವ
ಸಿ) ಹರಗೋವಿಂದ 
ಡಿ) ರಾಮದಾಸ 

ಸರಿಯಾದ ಉತ್ತರ: ಸಿ) ಹರಗೋವಿಂದ   




4. ಈ ಕೆಳಗಿನ ಯಾವ ವ್ಯಕ್ತಿಗೆ ಭಾರತದಲ್ಲಿ ದಾರ್-ಉಲ್-ಇಸ್ಲಾಂ ಅಂದರೆ ಇಸ್ಲಾಮಿಕ್ ನಾಡನ್ನು ಸ್ಥಾಪಿಸುವುದೇ ಜೀವಮಾನದ ಆಸೆಯಾಗಿತ್ತು ?
ಎ) ಬಾಬರ್
ಬಿ) ಔರಂಗ್‌ಜೇಬ್
ಸಿ) ಜಹಂಗೀರ್
ಡಿ)ಷಹಜಹಾನ್

ಸರಿಯಾದ ಉತ್ತರ: ಬಿ) ಔರಂಗ್‌ಜೇಬ್    




5. 2ನೇ ಅಲೆಕ್ಸಾಂಡರ್ ಎಂದು ತನ್ನ ನಾಣ್ಯಗಳ ಮೇಲೆ ಟಂಕಿಸಿದ ಬಹುಮನಿ ಅರಸ ಯಾರು ?
ಎ) 2ನೇ ಮಹಮದ್ ಷಾ
ಬಿ) ಪಿರೋಜಷಾ
ಸಿ) ಅಲ್ಲಾವುದ್ದೀನ ಹಸನಗಂಗ್
ಡಿ) ಮಹಮದ ಗವಾನ್   

ಸರಿಯಾದ ಉತ್ತರ: ಸಿ) ಅಲ್ಲಾವುದ್ದೀನ ಹಸನಗಂಗ್ 


6. ರಾಜ್ಯಸಭೆಯು ಹಣಕಾಸು ಮಸೂದೆಗೆ ತನ್ನ ಒಪ್ಪಿಗೆಯನ್ನು ಎಷ್ಟು ದಿನಗಳವರೆಗೆ ತಡೆಹಿಡಿಯಬಹುದು?
ಎ) 14 ದಿನಗಳು
ಬಿ) 15 ದಿನಗಳು
ಸಿ) 30 ದಿನಗಳು
ಡಿ) 6 ತಿಂಗಳು   

ಸರಿಯಾದ ಉತ್ತರ: ಎ) 14 ದಿನಗಳು 



7. ಈ ಮುಂದಿನ ಯಾವುದು Ex-Situ ಸಂರಕ್ಷಣೆಯಾಗುತ್ತದೆ.
ಎ) ವನ್ಯಜೀವಿಧಾಮ
ಬಿ) ಸೀಡ್ ಬ್ಯಾಂಕ್
ಸಿ) ಸೇಕ್ರೆಡ್ ಗ್ರುಫ್ಟ್
ಡಿ) ರಾಷ್ಟ್ರೀಯ ಉದ್ಯಾನವನ

ಸರಿಯಾದ ಉತ್ತರ: ಬಿ) ಸೀಡ್ ಬ್ಯಾಂಕ್ 



8. ಡೈನೋಸಾರಗಳು ಈ ಯುಗದಲ್ಲಿದ್ದವು ?
ಎ) ಪೇಲಿಯೊಜೋಯಿಕ್ ಯುಗ
ಬಿ) ಸಿನೋಜೋಯಿಕ್ ಯುಗ
ಸಿ) ಮೀಸೊಜೋಯಿಕ್ ಯುಗ
ಡಿ) ಪ್ರೊಟೆರೊಜೋಯಿಕ್ ಯುಗ

ಸರಿಯಾದ ಉತ್ತರ: ಸಿ) ಮೀಸೊಜೋಯಿಕ್ ಯುಗ   


9. ಭಾರತದಲ್ಲಾದ ಪ್ರಮುಖ ಕೃಷಿ ಕ್ರಾಂತಿಗಳನ್ನು ಹೊಂದಿಸಿ ಬರೆಯಿರಿ
ಎ) ಚಿನ್ನದ ಕ್ರಾಂತಿ         1. ಮೀನಿನ ಉತ್ಪಾದನೆ
ಬಿ) ಬೂದು ಕ್ರಾಂತಿ        2. ತೈಲಬೀಜಗಳ ಉತ್ಪಾದನೆ
ಸಿ) ನೀಲಿ ಕ್ರಾಂತಿ          3. ಸಿಗಡಿ ಉತ್ಪಾದನೆ
ಡಿ) ಹಳದಿ ಕ್ರಾಂತಿ        4. ಆಲುಗಡ್ಡೆ ಉತ್ಪಾದನೆ
ಇ) ಗುಲಾಬಿ ಕ್ರಾಂತಿ     5. ಹಣ್ಣಿನ ಉತ್ಪಾದನೆ
ಎಫ್) ದುಂಡುಕ್ರಾಂತಿ   6. ರಸಗೊಬ್ಬರ ಉತ್ಪಾದನೆ
    ಎ ಬಿ ಸಿ ಡಿ ಇ ಎಫ್
ಎ) 3 4 2 5 1 6
ಬಿ) 5 6 1 2 3 4
ಸಿ) 4 3 2 1 6 5
ಡಿ) 5 6 3 4 2 1   

ಸರಿಯಾದ ಉತ್ತರ: ಬಿ) 5 6 1 2 3 4



10. ಭಾರತದ ಸಂವಿಧಾನದ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ದೇಶದ ಆಡಳಿತಕ್ಕೆ ಆಧಾರವಾಗಿದೆ ?
ಎ) ಮೂಲಭೂತ ಹಕ್ಕುಗಳು
ಬಿ) ಮೂಲಭೂತ ಕರ್ತವ್ಯಗಳು
ಸಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು
ಡಿ) ಮೂಲಭೂತ ಹಕ್ಕುಗಳು & ಮೂಲಭೂತ ಕರ್ತವ್ಯಗಳು 

ಸರಿಯಾದ ಉತ್ತರ: ಸಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು   



 ಇವುಗಳನ್ನೂ ಓದಿ December 2021 






 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section