Today Top-10 General Knowledge Question Answers in Kannada for All Competitive Exams-17
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಈ ಕೆಳಗಿನ ಯಾವ ಬ್ರಿಟಿಷ್ ಕಾಯ್ದೆಯು ನಿಯಂತ್ರಣ ಮಂಡಳಿ ಮತ್ತು ನಿರ್ದೇಶಕರುಗಳ ಮಂಡಳಿಗಳನ್ನು ರದ್ದುಗೊಳಿಸುವ ಮೂಲಕ ದ್ವಿ-ಸರ್ಕಾರ ಪದ್ದತಿಯನ್ನು ಅಂತ್ಯಗೊಳಿಸಿತು?
ಎ) ಭಾರತ ಸರ್ಕಾರ ಕಾಯ್ದೆ-1858
ಬಿ) ಭಾರತ ಕೌನ್ಸಿಲ್ ಕಾಯ್ದೆ-1861
ಸಿ) ಭಾರತ ಕೌನ್ಸಿಲ್ ಕಾಯ್ದೆ-1892
ಡಿ) ಭಾರತ ಕೌನ್ಸಿಲ್ ಕಾಯ್ದೆ-1909
ಸರಿಯಾದ ಉತ್ತರ : ಎ) ಭಾರತ ಸರ್ಕಾರ ಕಾಯ್ದೆ-1858
2. ಒಳನಾಡಿನ (Inland) ನೀರಿನ ಅಧ್ಯಯನವನ್ನು ಹೀಗೆಂದು ಕರೆಯಲಾಗುತ್ತದೆ.
ಎ) ಓಶಿಯಾನಾಲಜಿ
ಬಿ) ಮರಿಯಾಲಜಿ
ಸಿ) ಕಾರ್ಟೋಗ್ರಾಫ್
ಡಿ) ಲಿಮ್ನೋಲಾಜಿ
ಸರಿಯಾದ ಉತ್ತರ: ಡಿ) ಲಿಮ್ನೋಲಾಜಿ
3. ಗಾಂಧೀಜಿಯ ದಂಡಿ ಮೆರವಣಿಗೆಯ ಸಮಯದಲ್ಲಿ ಭಾರತದ ವೈಸರಾಯ್ ಯಾರಾಗಿದ್ದರು?
ಎ) ಲಾರ್ಡ್ ಲಿನ್ಲಿತ್ಗೊ
ಬಿ) ಲಾರ್ಡ್ ರೀಡಿಂಗ್
ಸಿ) ಲಾರ್ಡ್ ಇರ್ವಿನ್
ಡಿ) ಲಾರ್ಡ್ ವಿಲ್ಲಿಂಗ್ಡನ್
ಸರಿಯಾದ ಉತ್ತರ : ಸಿ) ಲಾರ್ಡ್ ಇರ್ವಿನ್
4. "ನಾಸಾ' ಉಡಾವಣೆ ಮಾಡಿರುವ 'ಡೀಪ್ ಇಂಪ್ಯಾಕ್ಟ್' ಹೆಸರಿನ ಅಂತರಿಕ್ಷ ನೌಕೆಯು ಯಾವುದನ್ನು ಅಧ್ಯಯನ ಮಾಡುತ್ತದೆ?
ಎ) ಗುರುಗ್ರಹದ ಉಪಗ್ರಹಗಳು
ಬಿ) ಹೇಲ್-ಬಾಪ್ ಧೂಮಕೇತು
ಸಿ) ಶನಿಗ್ರಹದ ಬಳೆಗಳು
ಡಿ) ಕುದ್ರಗ್ರಹಗಳು
ಸರಿಯಾದ ಉತ್ತರ : ಸಿ) ಶನಿಗ್ರಹದ ಬಳೆಗಳು
5. ಕತ್ತರಿಸಿದ ಸೇಬುಹಣ್ಣಿನ ಬಣ್ಣ ತುಸು ಹೊತ್ತಿನಲ್ಲಿ ಕೆಂಪುಮಿಶ್ರಿತ ಕಂದು ಬಣ್ಣವಾಗಲು ಕಾರಣವೇನು?
ಎ) ಫೆರಸ್ ಇದ್ದದ್ದು ಫೆರಿಕ್ಗೆ ಪರಿವರ್ತನೆ ಹೊಂದುತ್ತದೆ
ಬಿ) ಫೆರಿಕ್ ಕ್ಲೋರೈಡ್ ರೂಪುಗೊಳ್ಳುತ್ತದೆ.
ಸಿ) ಫೆರಿಕ್ ಪೆರಸ್ಗೆ ಪರಿವರ್ತನೆ ಹೊಂದುತ್ತದೆ
ಡಿ) ಯಾವುದೂ ಅಲ್ಲ.
ಸರಿಯಾದ ಉತ್ತರ: ಎ) ಫೆರಸ್ ಇದ್ದದ್ದು ಫೆರಿಕ್ಗೆ ಪರಿವರ್ತನೆ ಹೊಂದುತ್ತದೆ
6. ಭಾರತದಲ್ಲಿ ಮೌರ್ಯ ವಂಶದ ಆಡಳಿತದ ಬಹುಮುಖ್ಯ ಲಕ್ಷಣ ಯಾವುದು?
ಎ) ಭೂಕಂದಾಯವನ್ನು ಪ್ರಥಮವಾಗಿ ತೆಗೆದು ಹಾಕಿದ್ದು.
ಬಿ) ಸಿಂಧೂ ಹಾಗೂ ಪಂಜಾಬ್ಗಳಿಂದ ಆಕ್ರಮಣವನ್ನು ಹೊರಗಟ್ಟಿದ್ದು.
ಸಿ) ಆಡಳಿತ ವಿಕೇಂದ್ರೀಕರಣ ಮಾಡಿದ್ದು
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ : ಸಿ) ಆಡಳಿತ ವಿಕೇಂದ್ರೀಕರಣ ಮಾಡಿದ್ದು
7. ಯಾವ ಚಕ್ರವರ್ತಿಯ ತನ್ನನ್ನು ಸಿಕಂದರ್-ಇ-ಸಾನಿ (ಎರಡನೇ ಅಲೆಕ್ಸಾಂಡರ್) ಎಂದು ಕರೆಸಿಕೊಂಡಿದ್ದಾನೆ?
ಎ) ಚಂದ್ರಗುಪ್ತ ಮೌರ್ಯ
ಬಿ) ಸಮುದ್ರಗುಪ್ತ
ಸಿ) ಇಲ್ತಮಷ್
ಡಿ) ಅಲ್ಲಾವುದ್ದೀನ್ ಖಿಲ್ಜಿ
ಸರಿಯಾದ ಉತ್ತರ: ಡಿ) ಅಲ್ಲಾವುದ್ದೀನ್ ಖಿಲ್ಜಿ
8. ಬೆನ್ನು ಮೂಳೆ ಹೊಂದಿರದ ಜೀವಿಗಳನ್ನು ಅಕಶೇರುಕಗಳು ಎಂದು ಕರೆಯುವರು. ಹಾಗಾದರೆ ಇವುಗಳಲ್ಲಿ ಯಾವುದು ಅಕಶೇರುಕಗಳ ಗುಂಪಿಗೆ ಸೇರಿಲ್ಲ?
ಎ) ಸ್ಪಾಂಜ್
ಬಿ) ವಲಯವಂತುಗಳು
ಸಿ) ಸಂಧಿಪದಿಗಳು
ಡಿ) ಸರೀಸೃಪಗಳು
ಸರಿಯಾದ ಉತ್ತರ: ಡಿ) ಸರೀಸೃಪಗಳು
9. 'ಇಂಟರ್ನಲ್ ಸೆಕ್ಯುರಿಟಿ ಅಕಾಡೆಮಿ' ಎಲ್ಲಿದೆ?
ಎ) ನಾಸಿಕ್
ಬಿ) ಮೌಂಟ್ ಅಬು
ಸಿ) ಹೈದರಾಬಾದ್
ಡಿ) ಪುಣೆ
ಸರಿಯಾದ ಉತ್ತರ: ಬಿ) ಮೌಂಟ್ ಅಬು
10. ಇವುಗಳಲ್ಲಿ ಯಾವುದು ಅಣು ಸ್ಥಾವರವಲ್ಲ?
ಎ) ಕೊರ್ಬಾ-ಛತ್ತೀಸಗಡ
ಬಿ) ಕಲ್ಪಕಂ-ತಮಿಳುನಾಡು
ಸಿ) ನರೋರ್ ಉತ್ತರ ಪ್ರದೇಶ
ಡಿ) ಕೈಗಾ - ಕರ್ನಾಟಕ
ಸರಿಯಾದ ಉತ್ತರ : ಎ) ಕೊರ್ಬಾ-ಛತ್ತೀಸಗಡ