Breaking

Wednesday, 20 October 2021

Today Top-10 General Knowledge Question Answers in Kannada for All Competitive Exams-22

Today Top-10 General Knowledge Question Answers in Kannada for All Competitive Exams-22

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಕುರಿತು ಇದೊಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣತಂತ್ರ ವ್ಯವಸ್ಥೆಯ ಜಾತಕ ಎಂದು ಹೇಳಿದವರು
ಎ) ಎರನೆಸ್ಟ್ ಬಾರ್ಕರ್
ಬಿ) ಕೆ ಎಮ್ ಮುನ್ಸಿ
ಸಿ) ಠಾಕೂರ್‌ದಾಸ್ ಭಾರ್ಗವ್
ಡಿ) ಎಂ ಹಿದಾಯಿತ್ವುಲ್ಲಾ 


ಸರಿಯಾದ ಉತ್ತರ: ಬಿ) ಕೆ ಎಮ್ ಮುನ್ಸಿ  



2. ಈ ಕೆಳಗಿನ ಯಾವ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಪ್ರಸ್ತಾವನೆಯು ಸಂವಿಧಾನದ ಭಾಗವಲ್ಲವೆಂದು ತೀರ್ಪು ನೀಡಿತು?
ಎ) ಬೇರುಬಾರಿ ಮೊಕದ್ದಮೆ
ಬಿ) ಕೇಶವಾನಂದ ಭಾರತಿ ಮೊಕದ್ದಮೆ
ಸಿ) ಮಿನರ್ವಾ ಮಿಲ್ ಮೊಕದ್ದಮೆ
ಡಿ) ಎಲ್‌ಐಸಿ ಆಫ್ ಇಂಡಿಯಾ ಮೊಕದ್ದಮೆ


ಸರಿಯಾದ ಉತ್ತರ: ಎ) ಬೇರುಬಾರಿ ಮೊಕದ್ದಮೆ   



3. ಯಾವ ರಾಜ್ಯವನ್ನು ಪ್ರತ್ಯೇಕಿಸಿ 27ನೇ ರಾಜ್ಯವನ್ನಾಗಿ ಉತ್ತರಾಖಂಡ್‌ನ್ನು ರಚಿಸಲಾಯಿತು?
ಎ) ಬಿಹಾರ
ಬಿ) ಉತ್ತರ ಪ್ರದೇಶ
ಸಿ) ಮಧ್ಯ ಪ್ರದೇಶ
ಡಿ) ಪಂಜಾಬ್


ಸರಿಯಾದ ಉತ್ತರ: ಬಿ) ಉತ್ತರ ಪ್ರದೇಶ     




4. ಭಾರತ ಸಂವಿಧಾನದ ಯಾವ ವಿಧಿಯು ಭಾರತ ದೇಶದ ಅಧಿಕೃತ ಹೆಸರು ಮತ್ತು ರಾಜಕೀಯ ವ್ಯವಸ್ಥೆಯನ್ನು ವಿವರಿಸುತ್ತದೆ?
ಎ) 3ನೇ ವಿಧಿ
ಬಿ) 4ನೇ ವಿಧಿ
ಸಿ) 2ನೇ ವಿಧಿ
ಡಿ) 1ನೇ ವಿಧಿ 

ಸರಿಯಾದ ಉತ್ತರ: ಡಿ) 1ನೇ ವಿಧಿ 




5. ಮ್ಯಾಂಡಮಸ್ ಎಂಬುದು ಲ್ಯಾಟಿನ್ ಭಾಷೆಯ ಪದವಾಗಿದೆ. ಹಾಗಾದರೆ ಇದರ ಅರ್ಥ
ಎ) To have a body
ಬಿ) We command or We order
ಸಿ) To be certified
ಡಿ) By what authority


ಸರಿಯಾದ ಉತ್ತರ: ಬಿ) We command or We order 



6. ಸಾರ್ವತ್ರಿಕ ಶಿಕ್ಷಣವನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ 2000 ದಲ್ಲಿ ಜಾರಿಗೆ ತಂದ ಕಾರ್ಯಕ್ರಮ
ಎ) ರಾಷ್ಟ್ರೀಯ ಶಿಕ್ಷಣ ನೀತಿ
ಬಿ) ಡಿ ಪಿ ಇ ಪಿ
ಸಿ) ಸರ್ವಶಿಕ್ಷಣ ಅಭಿಯಾನ
ಡಿ) ರಾಷ್ಟ್ರೀಯ ಸಾಕ್ಷರತಾ ಮಿಷನ್

ಸರಿಯಾದ ಉತ್ತರ: ಸಿ) ಸರ್ವಶಿಕ್ಷಣ ಅಭಿಯಾನ  



7. ಅಫಘಾನಿಸ್ತಾನದಲ್ಲಿ ಯುದ್ಧದಿಂದ ಹಾನಿಗೊಳಗಾದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಭಾರತ ಯಾವ ಹೆಸರನ್ನು ನೀಡಿದೆ?
ಎ) ಆಪರೇಷನ್ ದೇವಿ ಶಕ್ತಿ
ಬಿ) ಆಪರೇಷನ್ ಸ್ಥಲ್ ಶಕ್ತಿ
ಸಿ) ಆಪರೇಷನ್ ವಿಜಯ ಶಕ್ತಿ
ಡಿ) ಆಪರೇಷನ್ ಸಮುದ್ರಸೇತು

ಸರಿಯಾದ ಉತ್ತರ: ಎ) ಆಪರೇಷನ್ ದೇವಿ ಶಕ್ತಿ    



8. 'ಸುಡೊಕು' ಪಝಲ್ (ಒಗಟು)ನ ಪಿತಾಮಹ ಮಕಿ ಕಾಜಿ ಇತ್ತೀಚೆಗೆ ನಿಧನರಾದರು, ಅವರು ಯಾವ ದೇಶದವರು?
ಎ) ದಕ್ಷಿಣ ಕೊರಿಯಾ 
ಬಿ) ತೈವಾನ್
ಸಿ) ಜಪಾನ
ಡಿ) ಫಿಲಿಫೈನ್ಸ್


ಸರಿಯಾದ ಉತ್ತರ: ಸಿ) ಜಪಾನ 



9. 2020ರ ಪ್ಯಾರಾಲಿಂಪಿಕ್ಸ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಹೊಂದಿಸಿ?

               ಪಟ್ಟಿ-01                       ಪಟ್ಟಿ-02
p) ಧ್ವಜ ಧಾರಕ (ಉದ್ಘಾಟನೆ)     1) ಟೆಕ್‌ಚಂದ್
q) ಧ್ವಜ ಧಾರಕ (ಮುಕ್ತಾಯ)       2) ಅವನಿ ಲೇಖರ್‌
r) ಭಾರತದ ಶ್ರೇಣಿ                    3) 19
s) ಭಾರತದ ಒಟ್ಟು ಪದಕಗಳು     4) 6
t) ಭಾರತದ ಚಿನ್ನದ ಪದಕಗಳು    5) 24
                                             6) 5
ಎ) 1 2 3 6 4 
ಬಿ) 2 1 5 3 4
ಸಿ) 2 1 5 3 6
ಡಿ) 1 2 5 3 6

ಸರಿಯಾದ ಉತ್ತರ: ಡಿ) 1 2 5 3 6



10.  'ದಿ ಅರ್ಥಸ್ಪಿನ್ನರ್' ಎಂಬ ಕಾದಂಬರಿಯನ್ನು ಬರೆದವರು ಯಾರು?
ಎ) ಅನುರಾಧಾ ರಾಮ್
ಬಿ) ವಿಕ್ರಮ್ ಸೇಠ್
ಸಿ) ರನ್ ಬಾಂಡ್
ಡಿ) ಖುಷ್ವಂತ್ ಸಿಂಗ್

ಸರಿಯಾದ ಉತ್ತರ : ಎ) ಅನುರಾಧಾ ರಾಮ್      



 ಇವುಗಳನ್ನೂ ಓದಿ 

























No comments:

Post a Comment

Important Notes

Random Posts

Important Notes

Popular Posts