Type Here to Get Search Results !

28-11-2021 Today Top-10 General Knowledge Question Answers in Kannada for All Competitive Exams

28-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.   'ಉದ್ಗೋತ್ರಿ' ಎಂದು ಯಾರನ್ನು ಕರೆಯುತ್ತಾರೆ?
ಎ) ಋಗ್ವೇದದ ಮುಖ್ಯ ಪುರೋಹಿತ
ಬಿ) ಸಾಮವೇದದ ಮುಖ್ಯ ಪುರೋಹಿತ
ಸಿ) ಯಜುರ್ವೇದದ ಮುಖ್ಯ ಪುರೋಹಿತ
ಡಿ) ಯಾವುದೂ ಅಲ್ಲ

ಸರಿಯಾದ ಉತ್ತರ:  ಬಿ) ಸಾಮವೇದದ ಮುಖ್ಯ ಪುರೋಹಿತ 



2. ಸಾರನಾಥ ಶಾಸನ ಯಾರ ಆಡಳಿತದ ಬಗ್ಗೆ ತಿಳಿಸುತ್ತದೆ?
ಎ) 2ನೇ ಚಂದ್ರಗುಪ್ತ
ಬಿ) ಅಶೋಕ
ಸಿ) 2ನೇ ಪುಲಿಕೇಶಿ
ಡಿ) ಕನಿಷ್ಕ 

ಸರಿಯಾದ ಉತ್ತರ: ಡಿ) ಕನಿಷ್ಕ 



3. 'ಕಂಠೀರವ ಪಣ' ಎಂಬ ಚಿನ್ನದ ನಾಣ್ಯವನ್ನು ಟಂಕಿಸಿ ಚಲಾವಣೆಗೆ ತಂದವರು ಯಾರು?
ಎ) 1ನೇ ರಾಜ ಒಡೆಯರ್
ಬಿ) ಚಿಕ್ಕ ದೇವರಾಜ ಒಡೆಯರ್
ಸಿ) ರಣಧೀರ ಕಂಠೀರವ ನರಸರಾಜ
ಡಿ) 6ನೇ ಚಾಮರಾಜ ಒಡೆಯರ್

ಸರಿಯಾದ ಉತ್ತರ: ಸಿ) ರಣಧೀರ ಕಂಠೀರವ ನರಸರಾಜ 




4. ಟೊಮ್ಯಾಟೊದಲ್ಲಿರುವ ಆಮ್ಲ ಯಾವುದು?
ಎ) ಸಿಟ್ರಿಕ್ ಆಮ್ಲ
ಬಿ) ಫಾರ್ಮಿಕ್ ಆಮ್ಲ
ಸಿ) ಆಕ್ಸಿಲಿಕ್ ಆಮ್ಲ
ಡಿ) ಟಾರ್ಟಾರಿಕ್ ಆಮ್ಲ

ಸರಿಯಾದ ಉತ್ತರ: ಸಿ) ಆಕ್ಸಿಲಿಕ್ ಆಮ್ಲ 




5. 'ಪ್ರತಿಭಾ ಕಿರಣ ಯೋಜನೆ' ಯಾವುದಕ್ಕೆ ಸಂಬಂಧಿಸಿದೆ?
ಎ) ಮಧ್ಯಪ್ರದೇಶ ಸರ್ಕಾರ ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸುವ ಯೋಜನೆ.
ಬಿ) ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯಿಂದ ಜೀವನ ಮಟ್ಟವನ್ನು ಏರಿಸುವ ಯೋಜನೆ.
ಸಿ) ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವ ಯೋಜನೆ.
ಡಿ) ವೇಶ್ಯಾವಾಟಿಕೆ ಮತ್ತು ಲೈಂಗಿಕ ಶೋಷಣೆಯಂತಹ ಕೃತ್ಯಗಳಿಗೆ ಬಲಿಯಾದ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಮತ್ತು ಪುನರ್ ವಸತಿ ಒದಗಿಸುವ ಯೋಜನೆ.

ಸರಿಯಾದ ಉತ್ತರ: ಎ) ಮಧ್ಯಪ್ರದೇಶ ಸರ್ಕಾರ ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸುವ ಯೋಜನೆ. 



6. ಸೋಡಿಯಂ ಬೆಂಜೋಯೆಟ್ ಅನ್ನು ಯಾವುದರಲ್ಲಿ ಬಳಸುತ್ತಾರೆ?
ಎ) ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ
ಬಿ) ರೆಫ್ರಿಜರೇಟರ್‌ಗಳಲ್ಲಿ ಬಳಸುತ್ತಾರೆ
ಸಿ) ಫೋಟೊಗ್ರಫಿಯಲ್ಲಿ ಬಳಸುತ್ತಾರೆ
ಡಿ) ಶುಷ್ಕ ಕೋಶದಲ್ಲಿ ಬಳಸುತ್ತಾರೆ

ಸರಿಯಾದ ಉತ್ತರ: ಎ) ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ   



7. ಉತ್ತರಪ್ರದೇಶದ ಐತಿಹಾಸಿಕ ನಗರ ಅಲಹಾಬಾದ್‌ಗೆ ಏನೆಂದು ಮರುನಾಮಕರಣ ಮಾಡಲಾಗಿದೆ?
ಎ) ಅಮರಾವತಿ
ಬಿ) ಪ್ರಯಾಗ್ ರಾಜ್
ಸಿ) ವಡೋದರ
ಡಿ) ವಾರಾಣಸಿ

ಸರಿಯಾದ ಉತ್ತರ: ಬಿ) ಪ್ರಯಾಗ್ ರಾಜ್ 



8. ಬುಧ ಗ್ರಹದ ಪರಿಭ್ರಮಣದ ಅವಧಿ ಎಷ್ಟು?
ಎ) 87.97 ದಿನಗಳು
ಬಿ) 58.65 ದಿನಗಳು
ಸಿ) 686.98 ದಿನಗಳು
ಡಿ) 60.190 ದಿನಗಳು

ಸರಿಯಾದ ಉತ್ತರ: ಎ) 87.97 ದಿನಗಳು 

9. “ತಲಕಾಡುಗೊಂಡ' ಎಂಬ ಬಿರುದುನ್ನು ಹೊಂದಿದ್ದವರು ಯಾರು?
ಎ) ಮೂರನೇ ವೀರ ಬಲ್ಲಾಳ
ಬಿ) ಮೂರನೇ ಕುಲೋತ್ತುಂಗ ಚೋಳ
ಸಿ) ವಿಷ್ಣುವರ್ಧನ
ಡಿ) ಎರಡನೇ ನರಸಿಂಹ

ಸರಿಯಾದ ಉತ್ತರ: ಸಿ) ವಿಷ್ಣುವರ್ಧನ 



10. ಭಾರತದ ಸಿಲಿಕಾನ್ ಕಣಿವೆ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ) ಬೆಂಗಳೂರು
ಬಿ) ಚೆನ್ನೈ
ಸಿ) ಹೈದರಾಬಾದ್
ಡಿ) ಮುಂಬೈ

ಸರಿಯಾದ ಉತ್ತರ: ಎ) ಬೆಂಗಳೂರು 



 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section