Type Here to Get Search Results !

Today Top-10 General Knowledge Question Answers with Explanation in Kannada for All Competitive Exams-08

Today Top-10 General Knowledge Question Answers with Explanation in  Kannada for All Competitive Exams-08

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


01. ಜಂಟಿ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?
ಎ) ರಾಜ್ಯಪಾಲರು
ಬಿ) ರಾಜ್ಯ ಶಾಸಕಾಂಗ
ಸಿ) ಸಂಸತ್ತು
ಡಿ) ರಾಷ್ಟ್ರಪತಿ


ಸರಿಯಾದ ಉತ್ತರ : ಡಿ) ರಾಷ್ಟ್ರಪತಿ 

02. ಗದರ್ ಪಕ್ಷದ ಸ್ಥಾಪನೆಯ ಅಧ್ಯಕ್ಷರು ಯಾರಾಗಿದ್ದರು?
ಎ) ಲಾಲಾ ಹರ್‌ದಯಾಳ್
ಬಿ) ಸಂತೋಖ ಸಿಂಗ್
ಸಿ) ಸೋಹನ್‌ಸಿಂಗ್ ಭಕಾನಾ
ಡಿ) ಮೇಲಿನ ಯಾರೂ ಅಲ್ಲ


ಸರಿಯಾದ ಉತ್ತರ: ಸಿ) ಸೋಹನ್‌ಸಿಂಗ್ ಭಕಾನಾ 

03. ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡುತ್ತದೆ?
ಎ) ಆರ್ಥಿಕ ಸಲಹೆಗಾರರ ಕಛೇರಿ
ಬಿ) ಕೇಂದ್ರ ಸಂಖ್ಯಾಶಾಸ್ತ್ರೀಯ ಕಛೇರಿ
ಸಿ) ಅಂಕಿ-ಅಂಶಗಳ ಸಚಿವಾಲಯ
ಡಿ) ಹಣಕಾಸು ಸಚಿವಾಲಯ


ಸರಿಯಾದ ಉತ್ತರ : ಬಿ) ಕೇಂದ್ರ ಸಂಖ್ಯಾಶಾಸ್ತ್ರೀಯ ಕಛೇರಿ 

04. ಭಾರತವು ಯಾವ ರೀತಿಯ ವಾಯುಗುಣವನ್ನು ಹೊಂದಿದೆ?
ಎ) ಉಷ್ಣ
ಬಿ) ಶೀತ
ಸಿ) ಸಮಶೀತೋಷ್ಣ
ಡಿ) ಉಷ್ಣವಲಯದ ಮಾನ್ಸೂನ್


ಸರಿಯಾದ ಉತ್ತರ : ಡಿ) ಉಷ್ಣವಲಯದ ಮಾನ್ಸೂನ್ 

05. ಪಟ್ಟಿ-1ರಲ್ಲಿ ದ್ವೀಪಗಳನ್ನು ಪಟ್ಟಿ-2ರಲ್ಲಿ ಅವು ಇರುವ ರಾಜ್ಯಗಳನ್ನೂ ಕೊಡಲಾಗಿದೆ. ಇವುಗಳನ್ನು ಸರಿ ಹೊಂದಿಸಿ ಬರೆಯಿರಿ
    ಪಟ್ಟಿ-1                 ಪಟ್ಟಿ-2
1. ಭವಾನಿ            ಎ. ಕೇರಳ
2. ಅಬ್ದುಲ್‌ಕಲಾಂ  ಬಿ. ಆಂಧ್ರಪ್ರದೇಶ
3. ಮನರೊಯಿ     ಸಿ. ಪಶ್ಚಿಮ ಬಂಗಾಳ
4. ಲೋಪಚಾರ     ಡಿ. ಒಡಿಶಾ

ಎ) 1-ಎ, 2ಬಿ, 3-ಡಿ, 4-ಸಿ
ಬಿ) 1-ಸಿ, 2-ಬಿ, 3-ಡಿ, 4-ಎ
ಸಿ) 1-ಬಿ, 2-ಡಿ, 3-ಎ, 4-ಸಿ
ಡಿ) 1-ಡಿ, 2-ಬಿ, 3-ಎ, 4-ಸಿ


ಸರಿಯಾದ ಉತ್ತರ: ಸಿ) 1-ಬಿ, 2-ಡಿ, 3-ಎ, 4-ಸಿ

06. ನವಸೇವಾ ಬಂದರಿನ ಇನ್ನೊಂದು ಹೆಸರೇನು?
ಎ) ಶಿವಾಜಿ ಬಂದರು
ಬಿ) ಜವಾಹರ್‌ಲಾಲ್ ನೆಹರೂ ಬಂದರು
ಸಿ) ಸರ್ದಾರ್ ಪಟೇಲ್ ಬಂದರು
ಡಿ) ಸುಭಾಶ್ಚಂದ್ರ ಭೋಸ್ ಬಂದರು


ಸರಿಯಾದ ಉತ್ತರ : ಬಿ) ಜವಾಹರ್‌ಲಾಲ್ ನೆಹರೂ ಬಂದರು  

07. ಭಾರತದ ಸಮಯ ರೇಖೆಯು ಈ ಕೆಳಗಿನ ಯಾವ ರಾಜ್ಯದಲ್ಲಿ ಹಾದು ಹೋಗುವುದಿಲ್ಲ?
ಎ) ಉತ್ತರ ಪ್ರದೇಶ
ಬಿ) ಮಧ್ಯಪ್ರದೇಶ
ಸಿ) ಬಿಹಾರ
ಡಿ) ಛತ್ತೀಸಗಢ


ಸರಿಯಾದ ಉತ್ತರ: ಸಿ) ಬಿಹಾರ 

08. ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಸ್ಥಳ ಯಾವುದು?
ಎ) ರಾಣಿಗಂಜ್
ಬಿ) ಗಂಗಾನಗರ
ಸಿ) ಪ್ರಯಾಗ್‌ರಾಜ್‌
ಡಿ) ಭೋಪಾಲ್

ಸರಿಯಾದ ಉತ್ತರ: ಬಿ) ಗಂಗಾನಗರ 

09. ಮೌಸಿಮ್ ಎಂದರೆ ಅರೇಬಿಕ್ ಭಾಷೆಯಲ್ಲಿ ಅರ್ಥವೇನು?
ಎ) ಮಳೆ
ಬಿ) ತಂಪು
ಸಿ) ಬಿಸಿಲು
ಡಿ) ಋತು


ಸರಿಯಾದ ಉತ್ತರ: ಡಿ) ಋತು  

10. ಭಾರತದ ವಾಯುಗುಣವನ್ನು ನಿರ್ಧರಿಸುವ ಪ್ರಮುಖ ಅಂಶ ಯಾವುದು?
ಎ) ಮಾನ್ಸೂನ್ ಮಾರುತಗಳು
ಬಿ) ಏಕರ್ಕಾಟಕ ಸಂಕ್ರಾಂತಿ ವೃತ್ತ
ಸಿ) ಹಿಮಾಲಯ
ಡಿ) ಸಮುದ್ರಗಳು 


ಸರಿಯಾದ ಉತ್ತರ : ಎ) ಮಾನ್ಸೂನ್ ಮಾರುತಗಳು 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section