13-11-2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಈ ಕೆಳಗಿನ ಕವಿಯು "ತಿರುಕನ ಕನಸು" ಎಂಬ ಪದ್ಯವನ್ನು ರಚಿಸಿದ್ಯಾರೆ?
A. ಮುಪ್ಪಿನ ಷಡಕ್ಷರಿ
B. ನಿಜಗುಣನಂದ ಶಿವಯೋಗಿ
C. ಗೋವಿಂದ ಪೈ
D. ದಿನಕರ ದೇಸಾಯಿ
ಸರಿಯಾದ ಉತ್ತರ: A. ಮುಪ್ಪಿನ ಷಡಕ್ಷರಿ
2. "ಕರ್ಣಾಟಕ ಭಾರತ ಕಥಾಮಂಜರಿ" ಕೃತಿಯು ಯಾವ ಷಟ್ಪದಿಯಲ್ಲಿ ರಚಿಸಲಾಗಿದೆ?
A. ಪರಿವರ್ಧಿನಿ ಷಟ್ಪದಿ
B. ಭಾಮಿನಿ ಷಟ್ಪದಿ
C. ಕುಸುಮ ಷಟ್ಪದಿ
D. ಭೋಗ ಷಟ್ಪದಿ
ಸರಿಯಾದ ಉತ್ತರ: B. ಭಾಮಿನಿ ಷಟ್ಪದಿ
3. "ಮೊಸರಿನ ಮಂಗಮ್ಮ” ಎಂಬ ಕೃತಿಯ ಕರ್ತೃ ಯಾರು?
A. ಶಿವರಾಮ್ ಕಾರಂತ್
B. ಅರವಿಂದ ಮಾಲಗತ್ತಿ
C. ಸಾರಾ ಅಬೂಬುಕರ್
D. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸರಿಯಾದ ಉತ್ತರ: D. ಮಾಸ್ತಿ ವೆಂಕಟೇಶ ಅಯ್ಯಂಗಾರ್
4. "ದುಡಿತವೇ ನನ್ನ ದೇವರು" ಇದು ಯಾರ ಆತ್ಮಕಥೆಯಾಗಿದೆ?
A. ಕಯ್ಯಾರ ಕಿಞ್ಞಣ್ಣ ರೈ
B. ಅರವಿಂದ ಮಾಲಗತ್ತಿ
C. ಹಾ. ಮಾ. ನಾಯಕ್
D. ಮೇಲಿನ ಯಾರೂ ಅಲ್ಲ
ಸರಿಯಾದ ಉತ್ತರ: A. ಕಯ್ಯಾರ ಕಿಞ್ಞಣ್ಣ ರೈ
5. ರಾಜ್ಯ ಯೋಜನಾ ಮಂಡಳಿಯ ಪುಸ್ತುತ ಉಪಾಧ್ಯಕ್ಷರು ಯಾರು ?
A. ಬಸವರಾಜ್ ಬೊಮ್ಮಯಿ
B. ಕೆ ಕಸ್ತೂರಿರಂಗನ್
C. ಗೋವಿಂದ ಕಾರ್ಜೊಳ
D. ಬಿ ಜೆ ಪುಟ್ಟಸ್ವಾಮಿ
ಸರಿಯಾದ ಉತ್ತರ: D. ಬಿ ಜೆ ಪುಟ್ಟಸ್ವಾಮಿ
6. ಯಾವ ಎರೆಡು ಬ್ಯಾಂಕ್ ಗಳು "ಬ್ಯಾಂಕ್ ಆಫ್ ಬರೋಡಾ'ದೊಂದಿಗೆ ವಿಲೀನಗೊಳಿಸಲಾಗಿದೆ ?
A. ಕಾರ್ಪೊರೇಶನ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್
B. ಆಂಧು ಬ್ಯಾಂಕ್ ಮತ್ತು ವಿಜಯ ಬ್ಯಾಂಕ್
C. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್
D. ದೇನಾ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್
ಸರಿಯಾದ ಉತ್ತರ: C. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್
7. 1972 ರಲ್ಲಿ ನಡೆದ ಸಿಮ್ಯಾ ಒಪ್ಪಂದವು ಇಂದಿರಾಗಾಂಧಿ- ಇವರ ಮಧ್ಯೆ ನಡೆಯಿತು ?
A. ಅಯೂಬ್ ಖಾನ್
B. ಜುಲ್ಪಿಕರ್ ಅಲಿ ಭುಟ್ಟೊ
C. ಪಜಲ್ ಇಲೆ ಚೌದಿ
D. ವಾಸೀಂ ಸದ್
ಸರಿಯಾದ ಉತ್ತರ: B. ಜುಲ್ಪಿಕರ್ ಅಲಿ ಭುಟ್ಟೊ
8. ಯಾರ ಜನ್ಮದಿನದ ಪ್ರಯುಕ್ತ "ವಿಶ್ವ ವಿದ್ಯಾರ್ಥಿ ದಿನ" ವನ್ನು ಆಚರಿಸಲಾಗುತ್ತದೆ?
A. ಲಾಲ್ ಬಹದೂರ್ ಶಾಸ್ತ್ರಿ
B. ಎಪಿಜೆ ಅಬ್ದುಲ್ ಕಲಾಂ
C. ಮೊರಾರ್ಜಿ ದೇಸಾಯಿ
D. ಜವಹರ್ ಲಾಲ್ ನೆಹರು
ಸರಿಯಾದ ಉತ್ತರ: B. ಎಪಿಜೆ ಅಬ್ದುಲ್ ಕಲಾಂ
9. ಯಾವ ವರ್ಷವನ್ನು ವಿಶ್ವ ಸಂಸ್ಥೆಯು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದೆ?
A. 2023
B. 2020
C. 2024
D. 2025
ಸರಿಯಾದ ಉತ್ತರ: A. 2023
10. ಭಾರತ ಸಂವಿಧಾನದಲ್ಲಿ ತುರ್ತುಪರಿಸ್ಥಿತಿಯನ್ನು ಎಷ್ಟನೇ ಭಾಗದಲ್ಲಿ ತಿಳಿಸಲಾಗಿದೆ ?
A. 19 ನೇ ಭಾಗ
B. 18 ನೇ ಭಾಗ
C. 20 ನೇ ಭಾಗ
D. 17 ನೇ ಭಾಗv
ಸರಿಯಾದ ಉತ್ತರ: B. 18 ನೇ ಭಾಗ