Type Here to Get Search Results !

Today Top-10 General Knowledge Question Answers in Kannada for All Competitive Exams-19

Today Top-10 General Knowledge Question Answers in Kannada for All Competitive Exams-19

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಜಗದ್ವಿಖ್ಯಾತವಾದ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹವನ್ನು ಗಂಗರಸ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕೆತ್ತಿಸಿದ ವರ್ಷ
ಎ) 981
ಬಿ) 990
ಸಿ) 985
ಡಿ) 988


ಸರಿಯಾದ ಉತ್ತರ: ಎ) 981



2. 2ನೇ ಬೌದ್ಧ ಮಹಾಸಭೆ ನಡೆದ ಸ್ಥಳ
ಎ) ರಾಜಗೃಹ
ಬಿ) ವೈಶಾಲಿ
ಸಿ) ಪಾಟಲಿಪುತ್ರ
ಡಿ) ಕಾಶ್ಮೀರ


ಸರಿಯಾದ ಉತ್ತರ: ಬಿ) ವೈಶಾಲಿ    



3. ಕ್ರಿ ಪೂ 261 ರಲ್ಲಿ ನಡೆದ ಕಳಿಂಗ ಯುದ್ಧದ ವಿನಾಶವನ್ನು ಮತ್ತು ಪರಿಣಾಮಗಳನ್ನು ವಿವರಿಸುವ ಅಶೋಕನ ಶಿಲಾಶಾಸನ ವಿದ್ಯಾರಿ
ಎ) 12ನೇ ಶಿಲಾಶಾಸನ
ಬಿ) 10ನೇ ಶಿಲಾಶಾಸನ
ಸಿ) 13ನೇ ಶಿಲಾಶಾಸನ
ಡಿ) 11ನೇ ಶಿಲಾಶಾಸನ


ಸರಿಯಾದ ಉತ್ತರ : ಸಿ) 13ನೇ ಶಿಲಾಶಾಸನ   




4. ಪಾಂಡ್ಯರ ರಾಜಧಾನಿ ಮಧುರೆಯನ್ನು ಆಕ್ರಮಿಸಿಕೊಂಡು ಮಧುರೈಕೊಂಡ ಎಂಬ ಬಿರುದನ್ನು ಹೊಂದಿದ ಚೋಳ ದೊರೆ
ಎ) ಆದಿತ್ಯ ಚೋಳ
ಬಿ) 1ನೇ ಪರಾಂತಕ
ಸಿ) ರಾಜರಾಜ ಚೋಳ
ಡಿ) ರಾಜೇಂದ್ರ ಚೋಳ

ಸರಿಯಾದ ಉತ್ತರ : ಬಿ) 1ನೇ ಪರಾಂತಕ   




5. ಪೋಲೋ ಆಟ ಆಡುತ್ತಿದ್ದಾಗ ಕುದುರೆಯಿಂದ ಬಿದ್ದು ದುರ್ಮರಣಕ್ಕೆ ಒಳಗಾದ ಸುಲ್ತಾನ
ಎ) ಇಲ್ತಮಷ್
ಬಿ) ಬಲ್ಬನ್
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಕುತ್ಬುದ್ದೀನ್ ಐಬಕ್ 


ಸರಿಯಾದ ಉತ್ತರ: ಡಿ) ಕುತ್ಬುದ್ದೀನ್ ಐಬಕ್  



6. ಆಸ್ಥಾನದಲ್ಲಿ ಪ್ರತಿಯೊಬ್ಬರು ನೆಲಮುಟ್ಟಿ ಸುಲ್ತಾನನಿಗೆ ನಮಸ್ಕಾರ ಮಾಡುವುದನ್ನು ಕಡ್ಡಾಯಗೊಳಿಸಿದ ಸುಲ್ತಾನ
ಎ) ಬಲ್ಬನ್
ಬಿ) ಜಲಾಲುದ್ದೀನ್ ಖಿಲ್ಜಿ
ಸಿ) ಔರಂಗಜೇಬ್
ಡಿ) ಅಕ್ಟರ್‌

ಸರಿಯಾದ ಉತ್ತರ : ಎ) ಬಲ್ಬನ್ 



7. ಲೋದಿ ಸಂತತಿಯ ಕೊನೆಯ ದೊರೆ
ಎ) ಸಿಕಂದರ್ ಲೋದಿ
ಬಿ) ಇಬ್ರಾಹಿಂ ಲೋದಿ
ಸಿ) ಬಹಲಾಲ್ ಖಾನ್ ಲೋದಿ
ಡಿ) ದೌಲತ್ ಖಾನ್ ಲೋದಿ

ಸರಿಯಾದ ಉತ್ತರ: ಬಿ) ಇಬ್ರಾಹಿಂ ಲೋದಿ  



8. ವಿಜಯ ನಗರ ಸಾಮ್ರಾಜ್ಯದ ಈ ಕೆಳಗಿನ ಯಾವ ಅರಸನನ್ನು 'ವೈದಿಕ ಮಾರ್ಗ ಪ್ರವರ್ತಕ' ಎಂದು ಕರೆಯಲಾಗುತ್ತಿತ್ತು?
ಎ) 1ನೇ ಬುಕ್ಕ
ಬಿ) 1ನೇ ಹರಿಹರ
ಸಿ) 2ನೇ ಹರಿಹರ
ಡಿ) 1ನೇ ದೇವರಾಯ


ಸರಿಯಾದ ಉತ್ತರ: ಸಿ) 2ನೇ ಹರಿಹರ    



9. ಮೊಜಾವೆ ಮರುಭೂಮಿಯು ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
ಎ) ಅಮೆರಿಕ
ಬಿ) ಸುಡಾನ್
ಸಿ) ಇರಾನ್ 
ಡಿ) ಸೌದಿ ಅರೇಬಿಯಾ

ಸರಿಯಾದ ಉತ್ತರ: ಎ) ಅಮೆರಿಕ 



10. ಭಾರತದಲ್ಲಿ 3ನೇ ಪಂಚವಾರ್ಷಿಕ ಯೋಜನೆ ಮತ್ತು 4ನೇ ಪಂಚವಾರ್ಷಿಕ ಯೋಜನೆಯ ನಡುವಿನ ಅಂತರವು
ಎ) 2 ವರ್ಷಗಳು
ಬಿ) 3 ವರ್ಷಗಳು
ಸಿ) 4 ವರ್ಷಗಳು
ಡಿ) ಅಂತರವಿಲ್ಲ

ಸರಿಯಾದ ಉತ್ತರ : ಬಿ) 3 ವರ್ಷಗಳು      



 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section