Type Here to Get Search Results !

19 October 2021 Detailed Daily Current Affairs in Kannada for All Competitive Exams

       

19 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Click here to Read Daily Current Affairs in Kannada  


ಭೂಪೇಶ್ ಬಾಘೇಲ್‌ಗೆ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಪಟ್ಟ


ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ದೇಶದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಐಎಎನ್ ಎಸ್ ಸಿ ವೋಟರ್ ಗವರ್ನನ್ಸ್‌ ಸೂಚ್ಯಂಕದ ಪ್ರಕಾರ ಛತ್ತೀಸ್‌ಗಡ ಮುಖ್ಯಮಂತ್ರಿ ಬಾಘೇಲ್ ಅವರು ಪ್ರಥಮ ಸ್ಥಾನ ಪಡೆದರೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ 2ನೇ ಸ್ಥಾನ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 3ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಹಾಗೂ ಪಂಜಾಬ್ ಮುಖ್ಯಮಂತ್ರಿಗಳು ಗೌರವಯುತ ಸ್ಥಾನವನ್ನು ಅಲಂಕರಿಸಿದ್ದಾರೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಮುಖ್ಯಮಂತ್ರಿ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


  • ರಾಜ್ಯಪಾಲರು ನಾಮಮಾತ್ರ ಕಾರ್ಯಾಂಗವಾದರೆ ಮುಖ್ಯಮಂತ್ರಿಯ ನೇತೃತ್ವದ ಮಂತ್ರಿಮಂಡಲ ಚಿಮಂಡಲ ನೈಜ ಕಾರ್ಯಾಂಗವಾಗಿರುತ್ತದೆ.
  • ಸಂವಿಧಾನದ 163(1) ನೇ ವಿಧಿಯು ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಕಲ್ಪಿಸಿದೆ.
  • 164ನೇ ವಿಧಿಯು ಮುಖ್ಯಮಂತ್ರಿಯವರು ರಾಜ್ಯಪಾಲರಿಂದ ನೇಮಕಗೊಳ್ಳಲು ಅನುವು ಮಾಡಿಕೊಡುತ್ತದೆ.
  • 163(1) ನೇ ವಿಧಿಯ ಪ್ರಕಾರ ಮುಖ್ಯಮಂತ್ರಿಯವರು ಸಚಿವ ಸಂಪುಟದ ನಾಯಕರಾಗಿರುತ್ತಾರೆ.
  • 164(1) ನೇ ವಿಧಿಯ ಪ್ರಕಾರ ಮುಖ್ಯಮಂತ್ರಿಯು ಕೂಡ ವೈಯಕ್ತಿಕವಾಗಿ ರಾಜ್ಯಪಾಲರಿಗೆ ಹೊಣೆಯಾಗಿರುತ್ತಾರೆ.

ಅರ್ತ್ ಶಾರ್ಟ್ ಪ್ರಶಸ್ತಿ ಪ್ರಕಟ


ದೆಹಲಿ ಮೂಲದ ಉದ್ಯಮಿ ವಿದ್ಯುತ್ ಮೋಹನ್ ಅವರ ಕೃಷಿತಾಜ್ಯ ಮರುಬಳಕೆಯ ಯೋಜನೆಯ ಆವಿಷ್ಕಾರಕ್ಕೆ ಬಿಬಿಸಿಯ ಪ್ರತಿಷ್ಠಿತ “ಅರ್ತ್ ಶಾರ್ಟ್” ಪ್ರಶಸ್ತಿ ದೊರೆತಿದೆ. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಟಕಾಚಾರ್” ಸಂಸ್ಥೆಯು ಅಗ್ಗದ ತಂತ್ರಜ್ಞಾನದ ಆವಿಷ್ಕಾರಕ್ಕೆ 10.34 ಕೋಟಿ ರೂ ಬಹುಮಾನವನ್ನು ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ ಘೋಷಿಸಿದರು.


ಕೃಷಿ ತ್ಯಾಜ್ಯವನ್ನು ಮರುಬಳಸಲು “ಟಕಾಚಾರ್” ನ ತಂತ್ರಜ್ಞಾನವು ಉಪಯುಕ್ತವಾಗಿದ್ದು ಇದರ ಮೂಲಕ ಹೊಗೆಯ ಹೊರಸೂಸುವಿಕೆಯ ಪ್ರಮಾಣವನ್ನು ಶೇ.98 ರಷ್ಟು ಕಡಿಮೆ ಮಾಡಬಹುದು ಅಲ್ಲದೇ ಇದು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

  • ಟಕಾಚಾರ್ ತಂತ್ರಜ್ಞಾನ ಬಳಕೆಯಿಂದ ವರ್ಷಕ್ಕೆ 10 ಲಕ್ಷ ಟನ್ ಕಾರ್ಬನ್ ಡೈ ಆಕ್ಸಿಡ್‌ನ್ನು ಕಡಿಮೆಗೊಳಿಸಬಹುದು.
  • ಟಕಾಚಾರ್ ಸಣ್ಣ ಪ್ರಮಾಣದ ಪೋರ್ಟೆಬಲ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದ ತೋಟ ಹಾಗೂ ಹೊಲಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ಇದನ್ನು ಜೋಡಿಸಲಾಗುತ್ತದೆ.
  • ಈ ಯಂತ್ರವು ಕೃಷಿ ತ್ಯಾಜ್ಯವನ್ನು ಇಂಧನ & ಗೊಬ್ಬರದಂತಹ ಮಾರಾಟ ಮಾಡಬಹುದಾದ ಜೈವಿಕ ಉತ್ಪನ್ನವನ್ನಾಗಿ ಪರಿವರ್ತಿಸುತ್ತದೆ.


ಇ-ಸಂಜೀವಿನಿ ಸೇವೆ ಅನುಷ್ಠಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನ


ಕೇಂದ್ರ ಸರ್ಕಾರದ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯಾದ “ಇ-ಸಂಜೀವಿನಿ” ಯನ್ನು ಪ್ರಸ್ತುತ ದ ವರೆಗೆ 1.4 ಕೋಟಿ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.


  • ಕೇಂದ್ರ ಆರೋಗ್ಯ ಸಚಿವಾಲಯ ಈ ವರದಿಯನ್ನು ಬಿಡುಗಡೆ ಮಾಡಿದೆ.
  • ಕರ್ನಾಟಕದಲ್ಲಿ ಇ-ಸಂಜೀವಿನಿಯಡಿ 25.73 ಲಕ್ಷ ಕನ್ಸಲ್ಟೇಷನ್‌ಗಳು ನಡೆದಿವೆ. ಇ-ಸಂಜೀವಿನಿ, ಎಬಿ-ಎಚ್
  • ಇ-ಸಂಜೀವಿನಿ, ಎಬಿ-ಎಚ್ ಡಬ್ಲೂಸಿ & ಸಂಜೀವಿನಿ-ಒಪಿಡಿ ಎಂಬ ಎರಡು ಮಾದರಿಗಳಲ್ಲಿ ಈ ಸೇವೆ ಲಭ್ಯವಿದ್ದ ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಆರೋಗ್ಯ ಸೇವೆಗಳನ್ನು ನೀಡಬೇಕೆಂದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.


ಈ ಸೇವೆಯನ್ನು ಅತಿ ಹೆಚ್ಚಾಗಿ ಬಳಸಿರುವ ರಾಜ್ಯಗಳೆಂದರೆ

  1. ಆಂಧ್ರಪ್ರದೇಶ (47,28,131)
  2. ಕರ್ನಾಟಕ (25,73,609)
  3. ತಮಿಳುನಾಡು (16,30,795)
  4. ಉತ್ತರ ಪ್ರದೇಶ (14,13,257)
  5. ಗುಜರಾತ್ (5.11,338)
  6. ಬಿಹಾರ್ (4,74,955)
  7. ಮಧ್ಯಪ್ರದೇಶ (471,509)
  8. ಪಶ್ಚಿಮ ಬಂಗಾಳ (4,60,167)
  9. ಮಹಾರಾಷ್ಟ್ರ (4,29,558)
  10. ಉತ್ತರಾಖಂಡ (2,86,012)

ಸಾಸಿವೆ ಜಾತಿ ಗಿಡದಿಂದ ಜೆಟ್ ಇಂಧನ ಉತ್ಪಾದನೆ


ಸಾಸಿವೆ ಗಿಡದ ಜಾತಿಗೆ ಸೇರಿದ ಬೇರೊಂದು ಗಿಡವೊಂದರಿಂದ ಉತ್ಪಾದಿಸಲಾಗುವ “ಪೆಟ್ರೋಲಿಯಂ ಆಧಾರಿತ ಏವಿಯೇಷನ್ ಡ್ಯೂಯೆಲ್” ಇಂಧನವು ಜೆಟ್ ಇಂಧನದಿಂದ ಉಂಟಾಗುವ ವಾಯು ಮಾಲಿನ್ಯವನ್ನು ಶೇ 68 ರಷ್ಟು ಇಳಿಕೆ ಮಾಡುತ್ತದೆ ಎಂಬುದನ್ನು ಸಂಶೋಧನೆ ಮೂಲಕ ಭಾರತ ಮೂಲದ ಅಮೇರಿಕ ತಜ್ಞ “ಪುನೀತ್ ದ್ವಿವೇದಿ” ಸ್ಪಷ್ಟಪಡಿದಿದ್ದಾರೆ.

“ಬ್ರಝಾಲಿಕ ಕಾರಿಟಾನಾ” ಎಂದು ಕರೆಯಲಾಗುವ ಗಿಡದಿಂದ ಎಣ್ಣೆಯನ್ನು ತೆಗೆದು ಅದನ್ನು ಶುದ್ಧಿಕರಿಸಿ ಅದನ್ನು ಈ ಸುಸ್ಥಿರ ವೈಮಾನಿಕ ಇಂಧನವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಈ ಪ್ರಕಾರದ ಸಸ್ಯಗಳು “ದಕ್ಷಿಣ ಅಮೇರಿಕದಲ್ಲಿ” ಹೇರಳವಾಗಿ ಬೆಳೆಯುವುದರಿಂದ ಇಲ್ಲಿ ಈ ಇಂಧನವನ್ನು ಯಥೇಚ್ಛವಾಗಿ ಉತ್ಪಾದಿಸಬಹುದು.

* ಪ್ರಪಂಚದ ಒಟ್ಟಾರೆ ವಾಯು ಮಾಲಿನ್ಯದ ಶೇ 2.5% ರಷ್ಟು ಮಾಲಿನ್ಯ ಈಗಿರುವ ಜೆಟ್ ಇಂಧನ ತಯಾರಕರಿಂದ ಆಗುತ್ತಿದೆ.

* ಗಿಡಮೂಲಿಕೆ ಇಂಧನದ ಬಳಕೆ ಹೆಚ್ಚಾದರೆ ಮಾಲಿನ್ಯ ಪ್ರಮಾಣ ಕುಗ್ಗುತ್ತದೆ. ಸಾಂಪ್ರದಾಯಿಕ ಜೆಟ್ ಇಂಧನಕ್ಕೆ ಹೋಲಿಸಿದರೆ ಇದರ ಉತ್ಪಾದನಾ ವೆಚ್ಚವೂ ಕಡಿಮೆಯಾಗಲಿದೆ.


ಬಿ.ಎಸ್.ಯಡಿಯೂರಪ್ಪಗೆ ಶರಣಶ್ರೀ ಪ್ರಶಸ್ತಿ ಪ್ರಧಾನ


ಚಿತ್ರದುರ್ಗ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಹಾಗೂ ಡಾ|| ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ಮೂರನೇ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ “ಶರಣ” ಹಾಗೂ ಮುಖ್ಯಮಂತ್ರಿ “ಬಸವರಾಜ ಬೊಮ್ಮಾಯಿ ಅವರಿಗೆ “ಬಸವಭೂಷಣ” ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಪ್ರಧಾನಮಂತ್ರಿ ದಕ್ಷ ಯೋಜನೆ


ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020-21 ನೇ ಸಾಲಿನಿಂದ ಪ್ರಧಾನ ಮಂತ್ರಿ ದಕ್ಷತಾ ಔರ್‌ ಕೌಶಲ್ಯತಾ ಸಂಪನ್ನ ಹಿತಗ್ರಾಹಿ (PM-DAKSHA) ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು, ಮದ್ಯಪಾನ ಮತ್ತು ಮಾದಕ ವ್ಯಸನಕ್ಕೆ ಬಲಿಯಾದವರು, ಚರ್ಮದ ಕೆಲಸ ಮಾಡುವವರು, ನೈರ್ಮಲ್ಯ ಕಾರ್ಮಿಕರು ಮುಂತಾದವರಿಗೆ ಅಲ್ಪಾವಧಿಯ ಕೌಶಲ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ.


* ಈ ತರಬೇತಿ ಕಾರ್ಯಕ್ರಮಗಳನ್ನು ಸರ್ಕಾರಿ ತರಬೇತಿ ಸಂಸ್ಥೆಗಳು ಕೌಶಲ ಅಭಿವೃದ್ಧಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಸ್ಥಾಪಿಸಿದ ವಲಯ ಕೌಶಲ ಮಂಡಳಿಗಳು ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇತ್ತೀಚೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು

* 'ಪಿಎಂ ದಕ್ಷ' ಮೊಬೈಲ್ ಅಪ್ಲಿಕೇಶನ್‌ಗಳಿಗೆ ಚಾಲನೆ ನೀಡಿದರು.


ಅನುಷ್ಠಾನ


ಈ ಯೋಜನೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿಯಲ್ಲಿ ಬರುವ ಮೂರು ನಿಗಮಗಳು ಅನುಷ್ಠಾನಗೊಳಿಸುತ್ತವೆ. ಅವುಗಳೆಂದರೆ.


  • ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ
  • ರಾಷ್ಟ್ರೀಯ ಸಫಾಯಿ ಕರ್ಮಾಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ


2021-22ರ ಅವಧಿಯಲ್ಲಿ ಈ ಮೂರು ನಿಗಮಗಳ ಮೂಲಕ ಮೇಲಿನ ಗುಂಪುಗಳ ಸುಮಾರು 50,000 ಜನರಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.


ಮಹತ್ವ


  • ಉದ್ದೇಶಿತ ಗುಂಪಿನವರಿಗೆ ಸೂಕ್ತ ಕೌಶಲ ತರಬೇತಿ ನೀಡುವುದರ ಮೂಲಕ ಅವರ ಸಾಮರ್ಥ್ಯಗಳನ್ನು ಹೆಚ್ಚಿಸಿ ಆರ್ಥಿಕ ಸಬಲೀಕರಣಗೊಳಿಸುವುದು.
  • ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಗಿರುವುದರಿಂದ ಗ್ರಾಮೀಣ ಭಾಗದ ಕುಶಲ ಕರ್ಮಿಗಳಿಗೆ ತರಬೇತಿ ನೀಡಿ ಅವರ ಆರ್ಥಿಕ ಮಟ್ಟವನ್ನು ಸುಧಾರಿಸುವುದು.
  • ಈ ಉದ್ದೇಶಿತ ಗುಂಪುಗಳ ಮಹಿಳೆಯರಿಗೂ ಸೂಕ್ತವಾದ ಕೌಶಲ ತರಬೇತಿಯನ್ನು ನೀಡುವುದರ ಮೂಲಕ ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ತಡೆಯುವುದು.


ಕೌಶಲ ಅಭಿವೃದ್ಧಿಗೆ ಸಂಬಂಧಿಸಿದ ಇತರ ಯೋಜನೆಗಳು


* ಪ್ರಧಾನ್ ಮಂತ್ರಿ ಕೌಶಲ ವಿಕಾಸ ಯೋಜನೆ 3.0 : ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು 2021 ರಲ್ಲಿ ದೇಶದ ಯುವಕರಿಗೆ 300 ಕ್ಕಿಂತಲೂ ಹೆಚ್ಚಿನ ಕೌಶಲ ಕೋರ್ಸ್‌ಗಳು ಲಭ್ಯವಾಗುವಂತೆ ಪ್ರಾರಂಭಿಸಿರುವ ಯೋಜನೆಯಾಗಿದೆ.


ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ : ನೋಂದಾಯಿತ ಉದ್ಯೋಗಕಾಂಕ್ಷಿಗಳಿಗೆ ಉಚಿತ ಆನ್‌ಲೈನ್ ವೃತ್ತಿ ಕೌಶಲ ತರಬೇತಿಯನ್ನು ನೀಡುವ ಯೋಜನೆಯಾಗಿದ್ದು, ಇದನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ 2015 ರಲ್ಲಿ ಪ್ರಾರಂಭಿಸಲಾಯಿತು.

  • Skills Acquisition and Knowledge Awareness for Livelihood (SANKALP)
  • Scheme for Higher Education Youth in Apprenticeship and Skills (SHREYAS)
  • Atmanirbhar Skilled Employee Employer Mapping (ASEEM)

ಗೋಬರ್ ಧನ್ ಯೋಜನೆ


ಗೋಬರ್-ಧನ್ ಎಂದರೆ ಸಾವಯವ ಜೈವಿಕ-ಕೃಷಿ ಸಂಪನ್ಮೂಲ ಧನ ಎಂದು ಅರ್ಥ (Galvanizing Organic Bio-Agro Resources (GOBAR-Dhan) 2018ರ ಬಜೆಟ್ ಭಾಷಣದಲ್ಲಿ ಅಂದಿನ ಹಣಕಾಸು ಸಚಿವರು ಗೋಬರ್ ಧನ್ ಯೋಜನೆಯನ್ನು ಘೋಷಣೆ ಮಾಡಿದರು. ಜಾನುವಾರು ತ್ಯಾಜ್ಯ, ಕೃಷಿ ತ್ಯಾಜ್ಯ, ಹಸಿ ತ್ಯಾಜ್ಯವನ್ನು ಬಯೋಗ್ಯಾಸ್ /ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಹಳ್ಳಿಗರ ಜೀವನ ಮಟ್ಟವನ್ನು ಸುಧಾರಿಸಲು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು.


ವಿಶೇಷವಾಗಿ ಹಳ್ಳಿಗಳಲ್ಲಿನ ಜಾನುವಾರು ತ್ಯಾಜ್ಯ, ಕೃಷಿ ತ್ಯಾಜ್ಯ, ಹಸಿ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಗ್ರಾಮಗಳನ್ನು ಸ್ವಚ್ಛವಾಗಿರಿಸುವುದು ಈ ಯೋಜನೆಯ ಉದ್ದೇಶವಾಗಿದೆ.


ಭೌತ ವಿಜ್ಞಾನಿ “ಸುಬ್ರಹ್ಮಣ್ಯಂ ಚಂದ್ರಶೇಖರ್” ಜನ್ಮದಿನ


  • ಇಂದು ಭಾರತೀಯ ಮೂಲದ ಅಮೇರಿಕ ದೇಶದ ನೊಬೆಲ್ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯಂ ಚಂದ್ರಶೇಖರ್ ರವರ ಜನ್ಮದಿನ ವಾಗಿದೆ.
  • 1983ರಲ್ಲಿ “ಸುಬ್ರಹ್ಮಣ್ಯಂ ಚಂದ್ರಶೇಖರ್” ಮತ್ತು ಅಮೇರಿಕಾದ “ಎಲ್ಲಿ ಫೌಲರ್” ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡರು.
  • ಸುಬ್ರಹ್ಮಣ್ಯಂ ಚಂದ್ರಶೇಖರ್‌ರವರು ಅಕ್ಟೋಬರ್ 19, 1910 ರಲ್ಲಿ ಲಾಹೋರಿನಲ್ಲಿ ಜನಿಸಿದರು.
  • 1938-44 ರವರೆಗೆ ಇವರು ನಕ್ಷತ್ರಗಳ ಚಲನಶಾಸ್ತ್ರ ಮತ್ತು ಚಲನ ಘರ್ಷಣೆಯ ಬಗ್ಗೆ ಸಂಶೋಧನೆ ನಡೆಸಿದರು.
  • 1952 ರಿಂದ 1971 ರವರೆಗೆ “ಅಸ್ಟೋಫಿಸಿಕಲ್ ಜರ್ನಲ್'ನ ವ್ಯವಸ್ಥಾಪಕ ಸಂಪಾದಕರಾಗಿದ್ದರು.
  • 1934ರಲ್ಲಿ “ಶ್ವೇತ ಕುಬ್ಜಗಳ” ಹಾಗೂ ಮಿತಿರಾಶಿಯುಳ್ಳ ರಾಶಿ ಕುರಿತ ರಷ್ಯಾದ “ಪುಲ್ಕವೋ” ಗ್ರಹ ವೀಕ್ಷಣಾಲಯದಲ್ಲಿ ಉಪನ್ಯಾಸಗಳನ್ನು ನೀಡಿದರು.


* ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು :


1) 1942 ರಲ್ಲಿ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಿಂದ ಡಿ.ಎಸ್.ಸಿ. ಪದವಿ

2) 1944 ಇಂಗ್ಲೆಂಡ್‌ನ ರಾಯಲ್ ಸೊಸೈಟಿಗೆ ಆಯ್ಕೆ.

3) 1950ರಲ್ಲಿ ಪ್ರಕಟವಾದ “ರೇಡಿಯೋ ಆ್ಯಕ್ಟಿವ್ ಟ್ರಾನ್ಸ್ಫರ್” ಪುಸ್ತಕಕ್ಕೆ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ಅತ್ಯುನ್ನತ ಪ್ರಶಸ್ತಿಯಾದ “ಅಡಮ್ ಬಹುಮಾನ” ದೊರಕಿತು.

4) 1952 ಬ್ರೂಸ್ ಪದಕ

5) 1953 ರಾಯಲ್ ಅಸ್ಟ್ರಾನಾಮಿಕ್ ಸೊಸೈಟಿಯ ಚಿನ್ನದ ಪದಕ

6) 1957 ರಂಫರ್ಡ್ ಪ್ರಶಸ್ತಿ

7) 1968 ರಲ್ಲಿ ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ

8) 1983 ರಲ್ಲಿ ಶ್ವೇತ ಕುಬ್ಜಗಳ ಕುರಿತ ಸಂಶೋಧನೆಗೆ ನೊಬೆಲ್ ಪ್ರಶಸ್ತಿ.



 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section