Type Here to Get Search Results !

10, 11 October 2021 Detailed Daily Current Affairs in Kannada for All Competitive Exams

  

10, 11 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 


ಅಂತರರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ


ಹೆಣ್ಣು ಮಗುವಿನ ಹಕ್ಕುಗಳು & ಆಕೆ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತನೆ ಮಾಡುವುದಕ್ಕಾಗಿ & ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣಿಗೆ ಸಮಾನ ಅವಕಾಶ ಹಾಗೂ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಪ್ರತಿವರ್ಷ “ಅಕ್ಟೋಬರ್ 11 ರಂದು ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನ' ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ 'ಯುನೆಸ್ಕೋ' ಈ ದಿನಾಚರಣೆಯನ್ನು ಆಚರಣೆ ಮಾಡುತ್ತ ಬಂದಿದೆ.
* 2021 ರ ಥೀಮ್: Digital Generation, our Generation

ಸೂಚನೆ: ಪ್ರತಿವರ್ಷ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಬ್ರಿಟಿಷ್ ಹೈ ಕಮಿಷನರ್ ಕಚೇರಿಯು 'ಹೈ ಕಮಿಷನರ್ ಫಾರ್ ಎ ಡೇ' ವಾರ್ಷಿಕ ಸ್ಪರ್ಧೆಯನ್ನು ಆಯೋಜಿಸುತ್ತದೆ.

ಅಪರೂಪದ ಭಾರತೀಯ ರಣಹದ್ದು ಪ್ರತ್ಯಕ್ಷ

“ಆಪ್ಲಿ ಪಿಟಿಡೆ' ಕುಟುಂಬಕ್ಕೆ ಸೇರಿದ ಅಳಿವಿನಂಚಿನಲ್ಲಿರುವ “ಭಾರತೀಯ ರಣಹದ್ದು' ಇತ್ತೀಚೆಗೆ ಗಜೇಂದ್ರಗಡ ಬೆಟ್ಟದ ವಲಯದಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

* ಪ್ರಸ್ತುತ ಗಜೇಂದ್ರಗಡ ಬೆಟ್ಟದ ಪ್ರದೇಶದಲ್ಲಿ ಇಂಡಿಯನ್ ಲಾಂಗ್ ಬಿಲ್ಡ್ ವೆಲ್ಡರ್‌' ಬಹು ವರ್ಷಗಳ ನಂತರ ಪತ್ತೆಯಾಗಿದೆ.
ಇದು ಭಾರತ, ನೇಪಾಳ, ಪಾಕಿಸ್ತಾನ ಮೂಲದ ರಣಹದ್ದಾಗಿದ್ದು, ಇದರ ವೈಜ್ಞಾನಿಕ ಹೆಸರು 'ಜಿಪ್ಸ್ ಇಂಡಿಕಸ್' ಈ ಹದ್ದು ರೆಕ್ಕೆ ಬಡಿಯದೇ ಆಕಾಶದಲ್ಲಿ ಬಹು ಕಾಲದವರೆಗೆ ಹಾರಾಡಬಲ್ಲದು. ಇದರ ದೃಷ್ಟಿ ಮಾನವನ ದೃಷ್ಟಿಗಿಂತ 8 ಪಟ್ಟು ಸೂಕ್ಷ್ಮವಾಗಿದೆ.

ವಿಶೇಷತೆ :

  • ಈ ಸಂತತಿಯ ರಣಹದ್ದುಗಳು 12 ಕಿಮೀ ಗಿಂತ ಎತ್ತರದಲ್ಲಿ ಹಾರುತ್ತವೆ. ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಾವಿರಾರು ಕಿ.ಮಿ. ಗಸ್ತು ತಿರುಗುವ ವಿಶೇಷತೆ ಹೊಂದಿವೆ.
  • ಪ್ರಪಂಚದಲ್ಲಿರುವ 23 ಜಾತಿಯ ರಣಹದ್ದುಗಳ ಪೈಕಿ 16 ಜಾತಿಯ ರಣ ಹದ್ದುಗಳು ಅಳಿವಿನಂಚಿಗೆ ಬಂದು ತಲುಪಿವೆ.
  • ಭಾರತದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ರಾಜ್ಯದ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ ಏಕೈಕ ಪ್ರದೇಶವಾಗಿದೆ.

ರಿಲಯನ್ಸ್ ತೆಕ್ಕೆಗೆ ಆರ್‌ಇಸಿ ಸೋಲಾರ್ ಕಂಪನಿ


ನಾರ್ವೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಆರ್‌ಇಸಿ ಗ್ರೂಪ್ (ಆರ್‌ಇಸಿ ಸೋಲಾರ್ ಹೊಲ್ಡಿಂಗ್) ಅನ್ನು ರಿಲಯನ್ಸ್ [Reliance Industries Limited] ಇಂಡಸ್ಟ್ರಿಯಲ್ ಲಿಮಿಟೆಡ್ (ಆರ್‌ಐಎಲ್) 771 ದಶ ಲಕ್ಷ ಡಾಲರ್ (ಅಂದಾಜು 5,800 ಕೋಟಿ ರೂಪಾಯಿ) ಗೆ ಚೀನಾ ಇಂಟರ್‌ನ್ಯಾಷಲ್ ಸ್ಟಾರ್ ಕಂಪನಿಯಿಂದ ಖರೀದಿ ಮಾಡಿದೆ.

ಆರ್‌ಇಸಿ ಗ್ರೂಪ್ ಮುಂಚೂಣಿಯಲ್ಲಿರುವ ಅಂತರರಾಷ್ಟ್ರೀಯ ಸೋಲಾರ್ ಎನರ್ಜಿ ಕಂಪನಿಯಾಗಿದೆ. ಇದು ಕೈಗೆಟಕುವ ಮತ್ತು ಸ್ವಚ್ಛ ಸೌರ ಶಕ್ತಿ ಕ್ಷೇತ್ರದಲ್ಲಿ ಗರಿಷ್ಠ ಕಾರ್ಯಕ್ಷಮತೆ, ದೀರ್ಘ ಬಾಳಿಕೆಯ ಸೌರ ಕೋಶಗಳು ಮತ್ತು ಪ್ಯಾನೆಲ್‌ಗಳಿಗೆ ಹೆಸರುವಾಗಿಯಾಗಿದೆ. ಆರ್‌ಇಸಿ ಗ್ರೂಪ್‌ನಲ್ಲಿ ಈಗ 1,300 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಪರಮಾಣು ವಿಜ್ಞಾನಿ ಎ.ಕ್ಯೂ. ಖಾನ್ ನಿಧನ


ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬ್ ಪಿತಾಮಹ ಎಂದೇ ಖ್ಯಾತರಾಗಿದ್ದ ಪರಮಾಣು ವಿಜ್ಞಾನಿ ಎ.ಕ್ಯೂ. ಖಾನ್ ನಿಧನರಾಗಿದ್ದಾರೆ. ಪಾಕಿಸ್ತಾನವನ್ನು ಅಣುಬಾಂಬ್ ಶಕ್ತ ಮೊದಲ ಮುಸ್ಲಿಂ ದೇಶವನ್ನಾಗಿ ಮಾಡಿದ ಕೀರ್ತಿ ಖಾನ್ ಅವರದ್ದಾಗಿದೆ. ಆದರೆ ದುರುದ್ದೇಶಪೂರಿತ ದೇಶಗಳಿಗೆ ಪರಮಾಣು ತಂತ್ರಜ್ಞಾನವನ್ನು ಕಳ್ಳಸಾಗಾಟ ಮಾಡಿದ ಅಪಾಯಕಾರಿ ಪ್ರತಿಗಾಮಿ ವ್ಯಕ್ತಿ ಎಂದು ಪಾಶ್ಚಿಮಾತ್ಯ ದೇಶಗಳು ಖಾನ್‌ರನ್ನು ಪರಿಗಣಿಸಿದ್ದವು.
* ಪರಮಾಣು ಬಾಂಬ್ ತಂತ್ರಜ್ಞಾನವನ್ನು ಇರಾನ್, ಲಿಬಿಯಾ ಮತ್ತು ಉತ್ತರ ಕೊರಿಯಾಕ್ಕೆ ಕಾನೂನು ಬಾಹಿರವಾಗಿ ವರ್ಗಾಯಿಸಿದ್ದ ಆರೋಪ ಖಾನ್ ಮೇಲಿತ್ತು. ಅದನ್ನು ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು 2004 ರಲ್ಲಿ ಇಸ್ಲಾಮಾಬಾದ್‌ನಲ್ಲಿ ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು.

ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ


ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಭಾರತೀಯ ಮೂಲದ ಆರು ವರ್ಷದ ಬಾಲಕಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೈನಂದಿನ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
* ಅಲಿಷಾ ಗಾಂಧಿಯಾ ಅವರು ಯುಕೆ ಮೂಲದ ಲಾಭ ರಹಿತ ಕೂಲ್ ಅರ್ಥ್‌ನ ಹವಾಮಾನ ಕಾರ್ಯಕರ್ತೆ ಮತ್ತು ಮಿನಿ ರಾಯಭಾರಿಯಾಗಿದ್ದಾರೆ. ಇದು ಅರಣ್ಯ ನಾಶ ನಿಲ್ಲಿಸಲು ಮತ್ತು ವ್ಯವಹಾರಗಳನ್ನು ಸಮರ್ಥನೀಯವಾಗಿ ಸೃಷ್ಟಿಸಲು ಕೆಲಸ ಮಾಡುತ್ತದೆ. ಅವಳು ತನ್ನ ಶಾಲೆಯಲ್ಲಿ ಹವಾಮಾನ ಬದಲಾವಣೆ ಕ್ಲಬ್ ಅನ್ನು ಸ್ಥಾಪಿಸಿದ್ದಾಳೆ.

ಇತರರನ್ನು ಪರಿಸರ ಸಂರಕ್ಷಿಸುವಂತೆ ಪ್ರೋತ್ಸಾಹಿಸುತ್ತಾಳೆ ಹಾಗೂ ಕಸ ತೆಗೆಯುವುದು ಮತ್ತು ಮರಗಳನ್ನು ನೆಡುವುದು ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದಾಳೆ.

ಬ್ರಿಟನ್


  • ರಾಜಧಾನಿ : ಲಂಡನ್
  • ಕರೆನ್ಸಿ : ರೌಂಡ್
  • ರಾಣಿ : ಎರಡನೇ ಎಲಿಜಬೆತ್
  • ಪ್ರಧಾನ ಮಂತ್ರಿ : ಬೋರಿಸ್ ಜಾನ್ಸನ್

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ


ದೇಶದ ಆಡಳಿತ ಕ್ಷೇತ್ರದಲ್ಲಿ ಅಪಾರ ಬದಲಾವಣೆ ತರಲು ನೆರವಾಗುವ 'ಪ್ರಧಾನಮಂತ್ರಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್” ಗೆ ಪ್ರಧಾನಿ ನರೇಂದ್ರ ಮೋದಿ ಅ. 13 ರಂದು ಚಾಲನೆ ನೀಡಲಿದ್ದಾರೆ. ಇದು ಕೇಂದ್ರ ಸರ್ಕಾರದ 16 ಇಲಾಖೆಗಳನ್ನು ಸುಗಮ ಆಡಳಿತ ನಿರ್ವಹಣೆಗಾಗಿ ಒಂದೇ ಡಿಜಿಟಲ್ ವೇದಿಕೆಯ ವ್ಯಾಪ್ತಿಗೆ ತರುವ ಮೆಗಾ ಯೋಜನೆಯಾಗಿದೆ. 2025 ರ ವರೆಗಿನ ಮೂಲ ಸೌಕರ್ಯ ಸಂಪರ್ಕಿಸುವ ಯೋಜನೆಗಳನ್ನು 'ಗತಿಶಕ್ತಿ' ನಿರ್ವಹಿಸಲಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಗೆ ಬರುವ ಭಾಸ್ಕರಾಚಾರ್ಯ ರಾಷ್ಟ್ರೀಯ ಬಾಹ್ಯಾಕಾಶ ಅನ್ವಯಿಕ ಮತ್ತು ಜಿಯೋ-ಇನ್‌ಫ ರ್ಮ್ಯಾಟಿಕ್ಸ್ ಸಂಸ್ಥೆ ಇಡೀ ದೇಶದ ಜಿಐಎಸ್ ಮ್ಯಾಪಿಂಗ್‌ಗಾಗಿ ಜಿಯೋ-ಸೋಷಿಯಲ್ ಡಿಜಿಟ್ ವೇದಿಕೆಯನ್ನು ರೂಪಿಸಿದೆ.

ಯೋಜನೆಯಲ್ಲಿ ಈಗಾಗಲೇ 2020-21 ರ ವರೆಗೆ ನಿರ್ಮಿಸಲಾದ ಎಲ್ಲ ಯೋಜನೆಗಳ ವಿವರಗಳಿವೆ. 2025 ರವರೆಗೆ ನಿರ್ಮಿಸಲಾಗುವ ಇಲಾಖೆಗಳ ಎಲ್ಲ ಯೋಜನಾ ವಿವರಗಳನ್ನು ಕೂಡ ಅದಕ್ಕೆ ಫೀಡ್ ಮಾಡಲಾಗಿದೆ. 

ಯಾವ ಇಲಾಖೆಗಳು?


ಪ್ರಧಾನಿ ಮೋದಿ ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತಿಶಕ್ತಿ ೧೦ ಜನರನ್ನು ಅನಾವರಣಗೊಳಿಸಿದ್ದರು. ರೈಲ್ವೆ ರಸ್ತೆ ಮತ್ತು ಹೆದ್ದಾರಿ, ಪೆಟ್ರೋಲಿಯಂ ಮತ್ತು ಅನಿಲ, ಇಂಧನ ದೂರಸಂಪರ್ಕ, ನೌಕಾಯಾನ, ವಿಮಾನಯಾನ ಮೊದಲಾದ 16 ಇಲಾಖೆಗಳು ಈ ಯೋಜನೆಯಡಿ ಬರುತ್ತವೆ.

3 ಡಿ ಡಿಜಿಟಲ್ ನಕ್ಷೆ


ಗತಿಶಕ್ತಿ ಡಿಜಿಟಲ್ ಟೂಲ್‌ನಲ್ಲಿ ಪ್ಲಾಟ್ ಮಟ್ಟದವರೆಗಿನ ಇಡೀ ದೇಶದ 3 ಡಿ ಡಿಜಿಟಲ್ ನಕ್ಷೆಯಿದೆ. ಯೋಜನೆಗಳನ್ನು ರೂಪಿಸಲು ಇದು ಮಹತ್ವದ ನೆರವು ನೀಡುತ್ತದೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಶ್ಲೇಷಣಾತ್ಮಕ ಸಾಧನವಾಗಿಯೂ ಆಡಳಿತಗಾರರಿಗೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.
* ಗತಿಶಕ್ತಿ 2 ಮೂಲ ಸೌಕರ್ಯ ಒದಗಿಸುವುದು.


 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section