Type Here to Get Search Results !

13 October 2021 Detailed Daily Current Affairs in Kannada for All Competitive Exams

    

13 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 


ನಾಗಮೋಹನದಾಸ್ ಗೆ ತೋಂಟದ ಶ್ರೀ ರಾಷ್ಟ್ರೀಯ ಪ್ರಶಸ್ತಿ


ಗದಗದ ತೋಂಟದಾರ್ಯ ಸಂಸ್ಥಾನ ಮಠದಿಂದ ನೀಡಲಾಗುವ “ಡಾ।। ತೋಂಟದ ಸಿದ್ಧಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿ'ಗೆ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

  • ಈ ಪ್ರಶಸ್ತಿಯು 5 ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
  • 2019 ರಲ್ಲಿ ಈ ಪ್ರಶಸ್ತಿ ಆರಂಭಿಸಲಾಗಿದ್ದು, ಮೊದಲ ಪ್ರಶಸ್ತಿ ಪುರಸ್ಕೃತರು - ಈ ಕೃಷ್ಣಪ್ಪ
  • ಪ್ರಸ್ತುತ ಈ ಪ್ರಶಸ್ತಿಯು ಎರಡನೇ ಆವೃತ್ತಿಯದಾಗಿದೆ.

ನಾಗಮೋಹನದಾಸ್ ಅವರ ಕುರಿತು 

  • ಜನನ - ಫೆಬ್ರುವರಿ 12, 1952
  • ಜನ್ಮಸ್ಥಳ - ಕೋಲಾರ
  • ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.
  • 2004 ರ ಅಕ್ಟೋಬರ್‌ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ.
  • 2014 ರಲ್ಲಿ ದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ನೇಮಕ.
  • ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಧಾನ ಮಂತ್ರಿ ಸಲಹೆಗಾರರಾಗಿ ಅಮಿತ್‌ ಖರೆ ನೇಮಕ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ನೇಮಕಗೊಂಡಿದ್ದಾರೆ.
  • ಸಂಪುಟದ ಮಾಜಿ ಕಾರೈದರ್ಶಿ ಪಿ.ಕೆ.ಸಿನ್ಹಾ & ಮಾಜಿ ಕಾರ್ಯದರ್ಶಿ ಅಮರ್ಜಿತ್ ಸಿನ್ಹಾ ಅವರು ಈ ವರ್ಷ ಪ್ರಧಾನಮಂತ್ರಿ ಸಲಹೆಗಾರರ ಸ್ಥಾನವನ್ನು ತೊರೆದಿದ್ದು ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ - 2020” ಮುನ್ನೆಡೆಸಿದ್ದರು.
  • ಪ್ರಸ್ತುತ ಇವರು ಡಿಜಿಟಲ್ ಮಾಧ್ಯಮಗಳ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾಹಿತಿ & ಪ್ರಸಾರ ಸಚಿವಾಲಯದಲ್ಲಿ ಬದಲಾವಣೆಗಳನ್ನು ತಂದಿದ್ದರು.

ಅಮಿತ್‌ ಖರೆ ಕುರಿತು

  • ಜನನ - 1956
  • 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
  • 2019 ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಣದ ಕುರಿತು ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದರು.
  • ದೇಶದ ಗಮನ ಸೆಳೆದಿದ್ದ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ರವರ ಮೇವು ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಧಾನ ಮಂತ್ರಿ ಹುದ್ದೆಯ ಕುರಿತಾದ ಮಹತ್ವದ ಮಾಹಿತಿ ಇಲ್ಲಿದೆ


  • ಸಂವಿಧಾನದ 74(1)ನೇ ವಿಧಿಯು ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅವಕಾಶ ಕಲ್ಪಿಸಿದೆ.
  • ಸಂವಿಧಾನದ 75ನೇ ವಿಧಿಯ ಅನ್ವಯ ಪ್ರಧಾನ ಮಂತ್ರಿ ರಾಷ್ಟ್ರಾಧ್ಯಕ್ಷರಿಂದ ನೇಮಕವಾಗುತ್ತಾರೆ. ಪ್ರಧಾನಮಂತ್ರಿಗಳಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಬೋಧಿಸುತ್ತಾರೆ.
  • ಸಂವಿಧಾನದ 85ನೇ ವಿಧಿ ಅನ್ವಯ ಪ್ರಧಾನ ಮಂತ್ರಿಗಳು ಲೋಕಸಭೆಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಯವರಿಗೆ ಸಲಹೆ ನೀಡುತ್ತಾರೆ.

ಪಿ.ಎಂ.ಜೆ.ವೈ ಕ್ಲೋನ್ ಕವರ್ ಯೋಜನೆ


ಆರೋಗ್ಯ ವಿಮೆ ವ್ಯಾಪ್ತಿಯಿಂದ ಹೊರಗೆ ಇರುವ ಸುಮಾರು 40 ಕೋಟಿ ಮಂದಿಗೆ ವಿಶೇಷ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆದಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಈ ಯೋಜನೆ ಇರಲಿದೆ ಪ್ರಸ್ತುತ ಇರುವ ಜನ ಆರೋಗ್ಯ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ ವಿಮೆ ನೀಡಲಾಗುತ್ತಿದೆ. ಈ ಆರೋಗ್ಯ ವಿಮೆಯಿಂದ ವಂಚಿತರಾಗಿರುವವರಿಗೆ “ಪಿ.ಎಂ.ಜೆ.ವೈ ಕ್ಲೋನ್ ಕವರ್ ಯೋಜನೆ” ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದಾರೆ. 

ಕ್ಲೋನ್ ಕವರ್ ಯೋಜನೆ


ಸುಮಾರು ಕೋಟಿ ಮಂದಿ ಆರ್ಥಿಕ ಸಂಕಷ್ಟದಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಈ ಯೋಜನೆ ಜಾರಿಗೆ ತರಲಾಗಿದ್ದು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಇರಲಿದೆ.

• ಸರ್ಕಾರವು ಈಗಾಗಲೇ ಗುರುತಿಸಿರುವ 21 ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿ ಮಾಡಲಾಗುತ್ತಿದೆ.

ಪ್ರಮುಖ ಕಂಪನಿಗಳೆಂದರೆ


1. ಮ್ಯಾಕ್ಸ್ ಬೂಪಾ ಆರೋಗ್ಯ ವಿಮಾ ಕಂಪನಿ
2. ರಾಯಲ್ ಸುಂದರಂ ಜನರಲ್ ಇನ್ಸುರೆನ್ಸ್ ಕಂಪನಿ


ಕಿಮ್ಮನೆ ಗಾಲ್ಫ್ ರೆಸಾರ್ಟ್‌ಗೆ ಪ್ರಶಸ್ತಿ ಗರಿ


ಇತ್ತೀಚೆಗಷ್ಟೆ ಆರಂಭವಾಗಿರುವ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿರುವ ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ “ಬೆಸ್ಟ್ ಗಾಲ್ಫ್ ರೆಸಾರ್ಟ್ ಇನ್ ಏಷ್ಯಾ-2021” ಪ್ರಶಸ್ತಿಗೆ ಪಾತ್ರವಾಗಿದೆ.
* ಇಂಟರ್ ನ್ಯಾಷನಲ್ ಟ್ರಾವೆಲ್ ಆವಾರ್ಡ್ಸ್ ಆಯೋಜಕ ಸಮಿತಿಯು ವಿಶ್ವ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆ & ಸೌಲಭ್ಯವನ್ನು ಪರಿಗಣಿಸಿ 2021 ನೇ ಸಾಲಿಗೆ ಈ ಪ್ರಶಸ್ತಿಯನ್ನು ಘೋಷಿಸಿದೆ.

ಸಹ್ಯಾದ್ರಿ ಕಥನಕ್ಕೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ


  • ಡಾ. ಕೇಶವ ಎಚ್. ಕೊರ್ಸೆಯವರ 'ಸಹ್ಯಾದ್ರಿ ಕಥನ' ಪುಸ್ತಕವನ್ನು 'ಕರ್ನಾಟಕ ವಿಜ್ಞಾನ & ತಂತ್ರಜ್ಞಾನ “ಅಕಾಡೆಮಿಯು 2020-21 ನೇ ಸಾಲಿನ ಅತ್ಯುತ್ತಮ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದೆ.
  • ವಿಜ್ಞಾನ & ತಂತ್ರಜ್ಞಾನ ವಿಭಾಗದಲ್ಲಿ ಡಾ. ಕೇಶವ್ ಎಚ್. ಕೊರ್ಸೆಯವರಿಗೆ ಈ ಪ್ರಶಸ್ತಿ ಸಂದಿದೆ.
  • ಇವರ ಜೊತೆಯಲ್ಲಿ, ಡಾ. ಬಿ. ರೇವತಿ ನಂದನ್, ಡಾ. ವಸಂತ ತುಮಲಾಪುರ, ಡಾ. ಕಿರಣ್ ಐಎಸ್ ಇವರು ಕೂಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ಸ್ಮೃತಿ ಪ್ರಕಾಶನ ಪ್ರಕಟಿಸಿರುವ ಡಾ. ಕೇಶವ ಎಚ್ ಕೊರ್ಸೆಯವರು 'ಸಹ್ಯಾದ್ರಿ ಕಥನ' ಗ್ರಂಥ ಮಲೆನಾಡಿನ ನೈಸರ್ಗಿಕ ಸಂಪನ್ಮೂಲ ಉಗಮ ಹರವು, ಗುಣ ವಿಶೇಷಗಳು ಬದುಕನ್ನು ಅವು ಘೋಷಿಸುವ ಪರಿ ವಿಶ್ಲೇಷಿಸುವ ಬಹು-ಆಯಾಮದ ಸಮಾಜೋ-ವೈಜ್ಞಾನಿಕ ಬರಹಗಳ ಸಂಕಲನವಾಗಿದೆ.

ಐ.ಐ.ಎಸ್.ಸಿ. ಪ್ರಶಸ್ತಿ ಪ್ರಕಟ


ಅಪ್ರತಿಮ ಸಾಧನೆಗೈದ ಐವರು ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಭಾರತೀಯ ವಿಜ್ಞಾನ ಸಂಸ್ಥೆ ಹಳೆಯ ವಿದ್ಯಾರ್ಥಿಗಳಿಗೆ ಕೊಡ ಮಾಡುವ ಪ್ರಶಸ್ತಿಯನ್ನು ಪ್ರಕಟಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆಯು ಹಳೆಯ ವಿದ್ಯಾರ್ಥಿಯಾಗಿ ಅವರವರ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದವರಿಗೆ ಪ್ರತಿವರ್ಷವೂ ಗುರುತಿಸಿ ಈ ಗೌರವ ನೀಡಲಾಗುತ್ತದೆ.

ಪ್ರಸಕ್ತ ಸಾಲಿನ ಐ ಐ ಎಸ್ ಸಿ ವಿಜೇತರು


1) ಡಾ. ಅನುರಾಧ ಅಣ್ಣಸ್ವಾಮಿ
2) ಪ್ರೊ ಸಜ್ಜಲ್ ಕೆ. ದಾಸ್
3) ಪ್ರೊ.ಟಿ. ಪ್ರದೀಪ್
4) ಪ್ರೊ. ಸಿ.ಎಸ್. ರಾಘವೇಂದ್ರ
5) ಡಾ. ರಿತು ಶ್ರೀವಾಸ್ತವ


ಭಾರತೀಯ ವಿಜ್ಞಾನ ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ

  • ಸ್ಥಾಪನೆ – 1909
  • ಸ್ಥಾಪಕರು - ಜೆಮ್‌ಶೆಡ್ ಜಿ ಟಾಟಾ
  • ಪ್ರಸ್ತುತ ನಿದೇರ್ಶಕರು - ಗೋವಿಂದ್ ರಂಗರಾಜನ್
  • ಕೇಂದ್ರ ಕಚೇರಿ - ಬೆಂಗಳೂರು

ಇಂಪ್ರೆಸ್ ಮೊಬೈಲ್ ಆ್ಯಪ್


  • ದೇಶದ ದಿನಸಿ ವ್ಯಾಪಾರಿಗಳು ವಹಿವಾಟು ಸುಲಭ ಗೊಳಿಸುವ ಸಲುವಾಗಿ ಅಭಿವೃದ್ಧಿ ಪಡಿಸಿರುವ 'ಇಂಪ್ರೆಸ್' ಎನ್ನುವ ಮೊಬೈಲ್ ಆ್ಯಪ್‌ನ್ನು ಜರ್ಮನಿಯ ಬುಕ್ಸ್' ಕಂಪೆನಿಯು ಬಿಡುಗಡೆ ಮಾಡಿದೆ.
  • ವ್ಯಾಪಾರಸ್ಥರು ತಮ್ಮ ಅಂಗಡಿ ವ್ಯಾಪಾರದಲ್ಲಿ ಪಾರದರ್ಶಕತೆ ದಾಸ್ತಾನು ನಿರ್ವಹಣೆ ಬಿಲ್ಲಿಂಗ್ ಪಾವತಿ ಸಂಗ್ರಹ ಗ್ರಾಹಕರ ಮಾಹಿತಿ ನಿರ್ವಹಣೆ ಸೇರಿದಂತೆ ಇನ್ನೂ ಹಲವು ಕೆಲಸಗಳನ್ನು ಈ ಆ್ಯಪ್‌ ಮೂಲಕ ಸುಲಭವಾಗಿ ಮಾಡಬಹುದಾಗಿದೆ.
  • ಉತ್ಪನ್ನಗಳ ಮೇಲೆ ಇರುವ ಬಾರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಬಿಲ್‌ನ ಪ್ರಿಂಟ್ ಔಟ್ ಅಥವಾ ಮೆಸೆಜ್ ಮಾಡುವ ಸೌಲಭ್ಯ ಇರಲಿದೆ.
  • ಈ ಆ್ಯಪ್‌ನಲ್ಲಿರುವ ಪಾಯಿಂಟ್ ಆಫ್ ಸೇಲ್ ವ್ಯವಸ್ಥೆಯು ವ್ಯಾಪಾರಸ್ಥರು & ಗ್ರಾಹಕರಿಗೆ ಉಪಯುಕ್ತವಾಗಿದೆ.
  • ಗ್ರಾಹಕರಿಗೆ ಉತ್ತಮ ಗ್ರಾಹಕ ಶಾಪಿಂಗ್ ಅನುಭವವನ್ನು ನೀಡುವುದರ ಜೊತೆಗೆ ಅವರ ದಿನನಿತ್ಯದ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಆ್ಯಪ್ ಸಹಾಯ ಮಾಡುತ್ತದೆ.

ಪ್ರಚಲಿತ ಘಟನೆಯ ಪ್ರಶೋತ್ತರಗಳು


1. 2021ನೇ ಸಾಲಿನ ತೋಂಟದ ಸಿದ್ದಲಿಂಗ ರಾಷ್ಟ್ರೀಯ ಪ್ರಶಸ್ತಿಗೆ ಈ ಕೆಳಗಿನ ಯಾರು ಭಾಜನರಾಗಿದ್ದಾರೆ?
ಎ) ನ್ಯಾ. ಸಂತೋಷ ಹೆಗ್ಡೆ
ಬಿ) ನ್ಯಾ. ಎನ್.ಎಂ.ವೆಂಕಟಾಚಲಯ್ಯ
ಸಿ) ನ್ಯಾ. ಎಚ್.ಎನ್.ನಾಗಮೋಹನದ ಐಎಎಸ್ &
ಡಿ) ನ್ಯಾ. ಸತೀಶ್ ಚಂದ್ರ

ವಿವರಣೆ : ನಾಗಮೋಹನದಾಸ್
  • ಜನನ ಫೆಬ್ರುವರಿ 12, 1952
  • ಜನ್ಮಸ್ಥಳ - ಕೋಲಾರ
  • ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.
  • 2004 ರ ಅಕ್ಟೋಬರ್‌ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ.
  • 2014 ರಲ್ಲಿ ದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ನೇಮಕ.
  • ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

2. ಪ್ರಸ್ತುತ ಪ್ರಧಾನ ಮಂತ್ರಿ ಸಲಹೆಗಾರರಾಗಿ ಈ ಕೆಳಗಿನ ಯಾರನ್ನು ನೇಮಕ ಮಾಡಲಾಗಿದೆ?
ಎ) ಅಮಿತ್ ಸಿಂಗ್ 
ಬಿ) ಅಮಿತ್‌ ಖರೆ
ಸಿ) ಅಮರ್ಜಿತ್ ಸಿನ್ಹಾ 
ಡಿ) ಪಿ.ಕೆ.ಸಿನ್ಹಾ

ವಿವರಣೆ : ಅಮಿತ್‌ ಖರೆ
  • ಜನನ - 1956
  • 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
  • 2019 ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಣದ ಕುರಿತು ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದರು.
  • ದೇಶದ ಗಮನ ಸೆಳೆದಿದ್ದ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ರವರ ಮೇವು ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

3. ಪಿ.ಎಂ.ಜೆ.ವೈ ಕ್ಲೋನ್ ಕವರ್ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ) ತೆರಿಗೆ ಸುಧಾರಣೆಗೆ ಸಂಬಂಧಿಸಿದ ಯೋಜನೆ
ಬಿ) ವಸೂಲಾಗದ ಸಾಲದ ಅಧ್ಯಯನಕ್ಕೆ ಸಂಬಂಧಿಸಿದೆ
ಸಿ) ಆರೋಗ್ಯ ವಿಮೆಗೆ ಸಂಬಂಧಿಸಿದ ಯೋಜನೆ
ಡಿ) ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದ ಯೋಜನೆಯಾಗಿದೆ

ವಿವರಣೆ : ಕ್ಲೋನ್ ಕವರ್ ಯೋಜನೆ ಸುಮಾರು 40 ಕೋಟಿ ಮಂದಿ ಆರ್ಥಿಕ ಸಂಕಷ್ಟದಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಈ ಯೋಜನೆ ಜಾರಿಗೆ ತರಲಾಗಿದ್ದು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಇರಲಿದೆ.
* ಸರ್ಕಾರವು ಈಗಾಗಲೇ ಗುರುತಿಸಿರುವ 21 ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿ ಮಾಡಲಾಗುತ್ತಿದೆ.


 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section