Type Here to Get Search Results !

06 October 2021 Detailed daily Current Affairs in Kannada for All Competitive Exams

 

06 October 2021 Detailed daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 

ಕಾರ್ಲ್ಯಾಂಡ್ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ನದಿಗಳು ಸಮುದ್ರ ಸೇರುವ ಜಾಗದಲ್ಲಿ ತಡೆಗೋಡೆ ನಿರ್ಮಿಸುವ 7500 ಕೋಟಿ ರೂಪಾಯಿಗಳ “ಕಾರ್ಲ್ಯಾಂಡ್” ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಏನಿದು ಕಾರ್ಲ್ಯಾಂಡ್ ಯೋಜನೆ?

ಸಮುದ್ರದ ತೀರದಲ್ಲಿ ತಡೆಗೋಡೆ ನಿರ್ಮಿಸುವುದರ ಮೂಲಕ ಸಮುದ್ರದ ನೀರು ನದಿಗೆ ನುಗ್ಗಿ ಉಪ್ಪಾಗಿರುವುದನ್ನ ತಡೆಯಲಾಗುತ್ತದೆ. ಸಂಗ್ರಹವಾಗುವ ಸಿಹಿನೀರನ್ನು ಕೃಷಿ, ಸಿಗಡಿ ಸಾಕಾಣಿಕೆ & ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ.

* ಈ ಯೋಜನೆಯಡಿಯಲ್ಲಿ 300 ಕೋಟಿ ವ್ಯಯಿಸಲಾಗುತ್ತಿದ್ದು, ಇದು ಯಶಸ್ವಿಯಾದರೆ, ಮುಂದೆ “ಮಾಸ್ಟರ್ ಪ್ಲಾನ್” ಯೋಜನೆಯಡಿಯಲ್ಲಿ 1500 ಕೋಟಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.

 

ವಿಶ್ವಸಂಸ್ಥೆ ಶಾಂತಿ ಪ್ರಶಸ್ತಿ ಪ್ರಕಟ

ಗಲಭೆ ಪೀಡಿತ ದಕ್ಷಿಣ ಸೂಡಾನ್ ನಲ್ಲಿ ವಿಶ್ವಸಂಸ್ಥೆ ಹಮ್ಮಿಕೊಂಡಿರುವ “ಶಾಂತಿ ಪಾಲನಾ ಯೋಜನೆ” ಅಡಿ ಕರ್ತವ್ಯ ನಿರ್ವಹಿಸಿದ ಭಾರತದ 836 ಸೇನಾ ತುಕಡಿಗಳಿಗೆ ವಿಶ್ವ ಸಂಸ್ಥೆಯ ಶಾಂತಿ ಪ್ರಶಸ್ತಿ ಲಭಿಸಿದೆ.

ಸೂಡಾನ್‌ನ ಮಲಕಲ್‌ನಲ್ಲಿ ಭಾರತದ ಒಂದು ಬೆಟಾಲಿಯನ್ ಶಾಂತಿ ಪಾಲನೆ ಕಾರ್ಯದಲ್ಲಿ ಪಾಲ್ಗೊಂಡಿತ್ತು. ಈ ಯೋಜನೆಯ ಅಡಿಯಲ್ಲಿ ವಿಶ್ವಸಂಸ್ಥೆ ಪರ 18,300 ಸೇನಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಭಾರತದಲ್ಲಿ 2400 ಸೈನಿಕರಿದ್ದಾರೆ.

* ಸೂಡನ್‌ನಲ್ಲಿ ಶಾಂತಿ ಪಾಲನೆ ಮಾಡುತ್ತಿರುವ ವಿಶ್ವದ 2ನೇ ದೊಡ್ಡ ಪಡೆ ಭಾರತದ್ದಾಗಿದೆ.

* ಸುಮಾರು 73 ದೇಶಗಳ ಜನ ಪೊಲೀಸರು ಹಾಗೂ ಮಿಲಿಟರಿ ಸಿಬ್ಬಂದಿ “ಯುನೈಟೆಡ್ ನೇಷನ್ಸ್ ಮಿಷನ್ ಇನ್ ಸೌತ್ ಸೂಡಾನ್” ಯೋಜನೆಯಲ್ಲಿದ್ದ ಆ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆ ಕಾಯ್ದೆ ಹಾಗೂ ಶಾಂತಿ ಕಾಪಾಡುತ್ತಿದ್ದಾರೆ.

ವಿಶ್ವಸಂಸ್ಥೆ :

ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್, ಇಂಗ್ಲೆಂಡಿನ ಚರ್ಚಿಲ್‌, ರಷ್ಯಾದ ಜೊಸೆಫ್ ಸ್ಟಾಲಿನ್‌ರ ಸತತ ಪ್ರಯತ್ನದಿಂದ ವಿಶ್ವ ಸಂಸ್ಥೆ ಸ್ಥಾಪನೆಯಾಯಿತು. 1945 ಅಕ್ಟೋಬರ್ 24 ರಂದು ಭದ್ರತಾ ಮಂಡಳಿ ಸ್ಥಾಪನೆಗೆ ಹೆಚ್ಚಿನ ಮತಗಳು ಬಿದ್ದವು. 1946 ಜನವರಿ 17 ರಂದು ಸಮಿತಿಯ ಮೊದಲ ಸಭೆಯು ಲಂಡನ್‌ನ ಚರ್ಚ್ ಹೌಸ್‌ನಲ್ಲಿ ನಡೆಯುತು.

Ø  ಸ್ಥಾಪನೆ : 1945 ಅಕ್ಟೋಬರ್ 24

Ø  ಕೇಂದ್ರ ಕಚೇರಿ : ನ್ಯೂಯಾರ್ಕ್

Ø  ಸ್ಥಾಪನೆಯಾದ ಸಮ್ಮೇಳನ : 1945 ಏಪ್ರಿಲ್ 25 ರಿಂದ ಜೂನ್ 26 ರ ವರೆಗಿನ ಸ್ಯಾನ್ ಫ್ರಾನ್ಸಿಸ್ಕೊ ಸಮ್ಮೇಳನ

* ಪ್ರಾಥಮಿಕ ಸದಸ್ಯ ರಾಷ್ಟ್ರಗಳು : 193

§  193 ನೇ ರಾಷ್ಟ್ರ - ದಕ್ಷಿಣ ಸೂಡಾನ್

§  192 ನೇ ರಾಷ್ಟ್ರ - ಮಾಂಟಿನೆ

§  191 ನೇ ರಾಷ್ಟ್ರ - ತೈಮೂರ್

§  190 ನೇ ರಾಷ್ಟ್ರ - ಸ್ವಿಟ್ಜರ್‌ಲ್ಯಾಂಡ್

* ಭಾರತವು 1945 ರಲ್ಲಿಯೇ ಸದಸ್ಯತ್ವ ಪಡೆದಿದ್ದು (1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದು ಮತ್ತೆ ಸೇರ್ಪಡೆಯಾಯಿತು).

 

ಭೌತಶಾಸ್ತ್ರ ನೊಬೆಲ್ ಪ್ರಕಟ

2021ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಕಟವಾಗಿದ್ದು, ಒಟ್ಟು ಮೂವರು ವಿಜ್ಞಾನಿಗಳು ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಪ್ರಶಸ್ತಿ ವಿಜೇತರು

1. ಜಪಾನ್‌ನ ಸೈಯುಕುರೇ ಮನಾಬೆ

2. ಜರ್ಮನಿಯ ಕ್ಲಸ್ ಹ್ಯಾಸೆಲ್

3. ಇಟಲಿಯ ಜಾರ್ಜಿಯಾ ಪ್ಯಾರಿಸಿ

 

Ø  ಮನಾಬೆ & ಹ್ಯಾಸೆಲ್ ರವರು ಜಂಟಿಯಾಗಿ ಹವಾಮಾನ ವೈಪರೀತ್ಯಗಳ ಅಧ್ಯಯನದ ಮಾದರಿಗಳು ಭೂಮಿಯ ಮಾಡೆಲ್‌ಗಳು ಜಾಗತಿಕ ತಾಪಮಾನ ಹೆಚ್ಚಳದ ನಿಖರ ದಾಖಲೆಗಳಿಗೆ ಸಂಬಂಧಿಸಿದ ಸಮೀಕ್ಷೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Ø  ಇಟಲಿ ಮೂಲದ ಜಾರ್ಜಿಯಾರವರ ಅಟೋಮಿಕ್‌ನಿಂದ ಫೆನೆಟರಿ ವಿಸ್ತಾರ ವೈಪರೀತ್ಯಗಳ ಭಾರತ ವ್ಯವಸ್ಥೆ ಆವಿಷ್ಕಾರಕ್ಕೆ ಈ ಪ್ರಶಸ್ತಿ ಸಂದಿದೆ. ಈ ಎರಡು ಮಹತ್ವದ ಸಂಶೋಧನೆಗಳಿಂದ ಭೂಮಿಯಲ್ಲಿನ ಹವಾಮಾನ & ಇಲ್ಲಿನ ನಿವಾಸಿಗಳ ಮೇಲೆ ಅದರ ಪರಿಣಾಮ ಉಂಟು ಮಾಡುತ್ತಿವೆ ಎನ್ನವುದನ್ನು ಕೂಡ ಆವಿಷ್ಕಾರಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಪ್ರಶಸ್ತಿಯು 8.5 ಕೋಟಿ ರೂ ಮೊತ್ತವನ್ನು ಒಳಗೊಂಡಿರುತ್ತದೆ.

 

ಕಾರ್ಬನ್ ಕಣಗಳ ದುಷ್ಪರಿಣಾಮಗಳನ್ನು ಹತ್ತಿಕ್ಕುವ ಸಂಬಂಧ ಕೈಗೊಳ್ಳಬೇಕಾಗಿರುವ ಜಾಗತಿಕ ಮಟ್ಟದ ಮುನ್ನೆಚ್ಚರಿಕೆಗಳ ನಿರ್ಣಯ ಸಂಬಂಧ “ಗ್ಲಾಸ್ಕೋದಲ್ಲಿ” ನಡೆಯುವ “Cop 26 ಹವಾಮಾನ ಶೃಂಗಸಭೆ ನಡೆಯಲಿದ್ದು, ಇದರ ಮುಂಚಿತವಾಗಿ ಹಾವಾಮಾನ ವೈಪರೀತ್ಯದ ಅಧ್ಯಯನದ ಮಹತ್ವದ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿರುವುದು ವಿಶೇಷವಾಗಿದೆ.

 

ಭೌತ ವಿಜ್ಞಾನದ ನೋಬೆಲ್

 

§  ಸ್ಥಾಪನೆ : 1901 

§  ಸ್ಥಳ : ಸ್ಟಾಕ್ ಹೋಂ (ಸ್ವೀಡನ್)

§  ನೀಡುವವರು ರಾಯಲ್ ಸ್ವೀಡಿಷ್ ಅಕಾಡೆಮಿ

2020 ರ ಪ್ರಶಸ್ತಿ ವಿಜೇತರು

1. ರೋಜರ್ ಫೆಸ್

2. ರೈನ್‌ಹಾರ್ಡ್ ಫೆಂಜೆಲ್

3. ಆ್ಯಂಡ್ರ.ಎಂ. ಫೇಜ್

 💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 

ಸಂಧ್ಯಾ ಸುರಕ್ಷಾ ಪಿಂಚಣಿ ಹೆಚ್ಚಳ

ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಹಿರಿಯ ನಾಗರಿಕರ ಪಿಂಚಣಿಯಲ್ಲಿ 200 ರೂ ಏರಿಕೆ ಮಾಡುವ ತೀರ್ಮಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

* 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ 600 ರೂ. ಪಿಂಚಣಿಯನ್ನು 800 ರೂ. ಗಳಿಗೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 1,000 ರೂ. ಗಳಿಂದ 1,200 ರೂ. ಗಳಿಗೆ ಏರಿಸುವ ತೀರ್ಮಾನಕ್ಕೆ ಸಂಪುಟ ಅಸ್ತು ಎಂದಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ 207 ಕೋಟಿ ರೂ. ಗಳ ಹೊರೆಯಾಗಲಿದೆ.

ಸಂಧ್ಯಾ ಸುರಕ್ಷಾ ಯೋಜನೆ

§  ಪ್ರಾರಂಭ - 2007

§  ಜಾರಿಗೆ ತಂದ ಮುಖ್ಯಮಂತ್ರಿ - ಸಿದ್ಧರಾಮಯ್ಯ

§  ಮೇಲ್ವಿಚಾರಣೆ ಇಲಾಖೆ - ಕರ್ನಾಟಕ ರಾಜ್ಯ ಸರಕಾರದ ಕಂದಾಯ ಇಲಾಖೆ

 

ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಕಟ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 2020-21 ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಎ.ವಿ. ಆನಂದ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಅಕ್ಟೋಬರ್ 7 ರಂದು ನಡೆಯುವ ದಸರಾ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆನಂದ್ ಅವರಿಗೆ ಪ್ರಧಾನ ಮಾಡಲಿದ್ದಾರೆ. ಆನಂದ್ ಅವರು ಮೃದಂಗವಾದಕರಾಗಿದ್ದು, 1950 ರಿಂದಲೂ ಅವರು ಖ್ಯಾತ ಪೀಟಿಲು ವಾದಕ ಚೌಡಯ್ಯ, ಚಂಬೈ ಟಿ.ಆರ್. ಮಹಾಲಿಂಗಣ, ಸುಂದರಂ ಬಾಲಸುಂದರಂ ಮತ್ತು ದೊರೈಸ್ವಾಮಿ ಅಯ್ಯಂಗಾರ್ ಅವರಂತಹ ಕರ್ನಾಟಕ ಸಂಗೀತ ದಿಗ್ಗಜರೊಂದಿಗೆ ಮೃದಂಗ ನುಡಿಸಿದವರು. ಈಗಾಗಲೇ ಅವರು ಕರ್ನಾಟಕ ಕಲಾಶ್ರೀ. ಗುರುಕಲಾ ಭೂಷಣ್, ಸಂಗೀತ ಕಲಾಭೂಷಣ್ ಸೇರಿದಂತೆ ಹಲವಾರು ಪ್ರಶಸ್ತಿ ವಿಜೇತರು.

 

ಮುಖ್ಯ ಚುನಾವಣಾ ಅಧಿಕಾರಿಯಾಗಿ ಮನೋಜ್ ಕುಮಾರ್ ಮೀನಾ ಆಯ್ಕೆ

ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಸಂಜೀವ್ ಕುಮಾರ್ ನಿವೃತ್ತಿ ಹೊಂದಿದ ಹಿನ್ನೆಲೆ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರ ನೇಮಕವು ಬಹುತೇಕ ಖಚಿತವಾಗಿದೆ. 2003 ರ ಬ್ಯಾಚ್‌ನ ರಾಜ್ಯದ ಐಎಎಸ್ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪ್ರಸ್ತುತ ವಸತಿ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಂಜೀವ್ ಕುಮಾರ್ ಅವರು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಸಂಜೀವ್ ಕುಮಾರ್ ಅವರು 2018 ರ ವಿಧಾನಸಭಾ ಚುನಾವಣೆ ಹಾಗೂ 2019 ರ ಲೋಕಸಭಾ ಚುನಾವಣೆ ಮತ್ತು ಉಪಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಚುನಾವಣೆ ವೇಳೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸದಿದ್ದಕ್ಕೆ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಮತ್ತು ಇವಿಎಂ, ವಿವಿ ಪ್ಯಾಟ್‌ಗಳ ಬಳಕೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿಯೂ ಅವರು ಪ್ರಶಸ್ತಿ ಪಡೆದುಕೊಂಡಿದ್ದರು.

 ಇವುಗಳನ್ನೂ ಓದಿ 












Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section