Type Here to Get Search Results !

Today Top-10 General Knowledge Question Answers in Kannada for All Competitive Exams-16

Today Top-10 General Knowledge Question Answers in Kannada for All Competitive Exams-16

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಈ ಕೆಳಗಿನ ಯಾವ ಭಾಷೆಗೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನವನ್ನು ನೀಡಲಾಗಿದೆ?
1) ಓಡಿಯಾ
2) ಕೊಂಕಣಿ
3) ಭೋಜಪುರಿ 
4) ಅಸ್ಸಾಮಿ


ಸರಿಯಾದ ಉತ್ತರ : 1) ಓಡಿಯಾ 

2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಬಣಗಳಾಗಲು ತನ್ಮೂಲಕ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂದು ಎರಡು ಹೋಳಾಗಲು ಈ ಕೆಳಗಿನ ಯಾವ ಆಂದೋಲನ ಕಾರಣವಾಯಿತು?
1) ಸ್ವದೇಶೀ ಚಳವಳಿ
2) ಭಾರತ ಬಿಟ್ಟು ತೊಲಗಿ ಚಳವಳಿ
3) ಅಸಹಕಾರ ಚಳವಳಿ
4) ನಾಗರಿಕ ಕಾನೂನುಭಂಗ ಚಳವಳಿ


ಸರಿಯಾದ ಉತ್ತರ: 1) ಸ್ವದೇಶೀ ಚಳವಳಿ    

3. “ಭಾರತದ ಅಖಂಡತೆ, ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಮತ್ತು ರಕ್ಷಿಸುವುದು ಇದನ್ನು ಈ ಕೆಳಗಿನ ಯಾವುದರಲ್ಲಿ ಹೇಳಲಾಗಿದೆ?
1) ಸಂವಿಧಾನದ ಪೀಠಿಕೆ
2) ರಾಜ್ಯದ ನೀತಿ ನಿರ್ದೇಶಕ ತತ್ವಗಳು
3) ಮೂಲಭೂತ ಹಕ್ಕುಗಳು
4) ಮೂಲಭೂತ ಕರ್ತವ್ಯಗಳು

ಸರಿಯಾದ ಉತ್ತರ : 4) ಮೂಲಭೂತ ಕರ್ತವ್ಯಗಳು 

4. ಭಾರತೀಯ ಸಂವಿಧಾನದ ಐದನೇ ಶೆಡ್ಯೂಲ್ ಈ ಕೆಳಗಿನ ಯಾವ ಉದ್ದೇಶಕ್ಕಾಗಿ ಮಾಡಲಾಗಿದೆ?
1) ಪರಿಶಿಷ್ಟ ಹಾಗೂ ಆದಿವಾಸಿ ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣಕ್ಕಾಗಿ
2) ರಾಜ್ಯಗಳ ನಡುವಿನ ಗಡಿಗಳನ್ನು ಗುರುತಿಸಲಿಕ್ಕಾಗಿ
3) ಪಂಚಾಯತ್‌ಗಳ ಅಧಿಕಾರಗಳು, ಪ್ರಾಧಿಕಾರ ಮತ್ತು ಜವಾಬ್ದಾರಿಗಳನ್ನು ಗುರುತಿಸಲು.
4) ಎಲ್ಲ ಗಡಿ ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸಲಿಕ್ಕಾಗಿ,


ಸರಿಯಾದ ಉತ್ತರ : 1) ಪರಿಶಿಷ್ಟ ಹಾಗೂ ಆದಿವಾಸಿ ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣಕ್ಕಾಗಿ    

5. "ಮಾಡು ಇಲ್ಲವೇ ಮಡಿ” ಘೋಷಣೆ ಈ ಕೆಳಗಿನ ಯಾವ ಚಳುವಳಿಗೆ ಸಂಬಂಧಿಸಿದೆ?
1) ಸ್ವದೇಶಿ ಚಳವಳಿ
2) ಅಸಹಕಾರ ಚಳವಳಿ
3) ನಾಗರಿಕ ಅಸಹಕಾರ ಚಳವಳಿ
4) ಭಾರತ ಬಿಟ್ಟು ತೊಲಗಿ ಚಳವಳಿ

ಸರಿಯಾದ ಉತ್ತರ: 4) ಭಾರತ ಬಿಟ್ಟು ತೊಲಗಿ ಚಳವಳಿ    

6.ಯಾರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲಾಗಿದೆ?
1) ಡಾ|| ನಾರ್ಮನ್ ಇ ಬೋರ್ಲಾ
2) ಡಾ|| ಎಸ್. ಎ. ಪಾಟೀಲ್
3) ಡಾ|| ಎಮ್.ಎಸ್. ಸ್ವಾಮಿನಾಥನ್
4) ಡಾ|| ಎಮ್. ಮಹದೇವಪ್ಪ

ಸರಿಯಾದ ಉತ್ತರ : 3) ಡಾ|| ಎಮ್.ಎಸ್. ಸ್ವಾಮಿನಾಥನ್  

7. ಐಎನ್‌ಎಸ್ ವಿಕ್ರಾಂತ್ ಎಂಬ ಯುದ್ಧನೌಕೆಯನ್ನು ಭಾರತ ಯಾವ ದೇಶದಿಂದ ಖರೀದಿಸಿತ್ತು?
1) ಫ್ರಾನ್ಸ್
2) ರಷ್ಯಾ
3) ಬ್ರಿಟನ್ 
4) ಚೀನಾ

ಸರಿಯಾದ ಉತ್ತರ: 3) ಬ್ರಿಟನ್  

8. ಫ್ಲಾರೆನ್ಸ್ ನೈಟಿಂಗೇಲ್ ಅಂತರರಾಷ್ಟ್ರೀಯ ಪ್ರತಿಷ್ಠಾನವು ಯಾವ ಕ್ಷೇತ್ರದವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತದೆ?
1) ಶಿಕ್ಷಕ
2) ವೈದ್ಯರಿಗೆ
3) ದಾದಿಯರಿಗೆ
4) ವಿಜ್ಞಾನಿಗಳಿಗೆ

ಸರಿಯಾದ ಉತ್ತರ: 3) ದಾದಿಯರಿಗೆ  

9. 'ವಂಶ ವೃಕ್ಷ' ಸಿನಿಮಾದ ನಿರ್ದೇಶಕರು ಯಾರು?
1) ಪಿ.ಲಂಕೇಶ್
2) ಗಿರೀಶ್ ಕಾರ್ನಾಡ್ 
3) ಟಿ.ಎಸ್. ನಾಗಾಭರಣ  
4) ಯಾರೂ ಅಲ್ಲ 

ಸರಿಯಾದ ಉತ್ತರ: 2) ಗಿರೀಶ್ ಕಾರ್ನಾಡ್  

10. ಈ ಕೆಳಗಿನ ಯಾವ ಸಂಸ್ಥೆ ಬೆಂಗಳೂರಿನಲ್ಲಿ ಇಲ್ಲ?
1) ಸಿ.ವಿ. ರಾಮನ್ ಸಂಶೋಧನಾ ಸಂಸ್ಥೆ
2) ಭಾರತೀಯ ವಿಜ್ಞಾನ ಸಂಸ್ಥೆ 
3) ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ
4) ಕೇಂದ್ರ ಆಹಾರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 

ಸರಿಯಾದ ಉತ್ತರ : 4) ಕೇಂದ್ರ ಆಹಾರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ    



 ಇವುಗಳನ್ನೂ ಓದಿ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section