Type Here to Get Search Results !

Top History Multiple Choice Question Answers with Explanation in Kannada for All Competitive Exams-02

 

ಇತಿಹಾಸದ ಸೂಪರ್ ಪ್ರಶ್ನೋತ್ತರಗಳು-02

Top History Multiple Choice Question Answers with Explanation in Kannada for All Competitive Exams-02

💥💥💥

ಇವುಗಳನ್ನೂ ಓದಿ 












1. “ವೇದಮಾರ್ಗ ಪ್ರತಿಷ್ಠಾಪಕ" ಎಂಬ ಬಿರುದನ್ನು ಧರಿಸಿದ್ದ ವಿಜಯನಗರದ ದೊರೆ
ಎ) ಮೊದಲನೆ ಹರಿಹರ
ಬಿ) ಮೊದಲನೆ ಬುಕ್ಕರಾಯ
ಸಿ) ಎರಡನೆ ದೇವರಾಯ
ಡಿ) ಕೃಷ್ಣದೇವರಾಯ


ಸರಿಯಾದ ಉತ್ತರ: ಬಿ) ಮೊದಲನೆ ಬುಕ್ಕರಾಯ


ವಿವರಣೆ :- ಒಂದನೇ ಹರಿಹರನ ನಂತರ ಅವನ ಕಿರಿಯ ಸೋದರ ಒಂದನೇ ಬುಕ್ಕರಾಯನು ಸಿಂಹಾಸನವನ್ನೇರಿದನು. ಇವನು ಪರಾಕ್ರಮಿಯಾಗಿದ್ದು ಅನೇಕ ದಂಗೆಗಳನ್ನು ಅಡಗಿಸಿದನು. ಅಷ್ಟೇ ಅಲ್ಲದೆ ಧರ್ಮ ಸಹಿಷ್ಣುವಾಗಿದ್ದು, ಧರ್ಮದ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟನು. ಇವನ ಕಾಲದಲ್ಲಿ ವಿಜಯನಗರ ವೇದಾಧ್ಯಯನಗಳ ಕೇಂದ್ರವಾಗಿತ್ತು. ಸರ್ವಧರ್ಮಗಳ ನೆಲೆವೀಡಾಯಿತು. ಇವನ ಸಾಧನೆಗಳ ಫಲವಾಗಿ ಇವನಿಗೆ 'ವೈದಿಕ ಮಾರ್ಗ ಪ್ರವರ್ತಕ' ಎಂಬ ಪ್ರಶಸ್ತಿ ಸಂದಿತು ಎಡತೊರೆಯ ಶಾಸನವು 'ಮ್ಲೇಚ್ಛರಿಂದ ಭಾರತವನ್ನು ಉದ್ಧಾರಗೊಳಿಸಲು ಬಂದ ದೊರೆ' ಎಂಬುದಾಗಿ ವರ್ಣಿಸಿದೆ.

2. ಬೆಂಗಳೂರನ್ನು ಮೊಘಲರಿಂದ ಕೊಂಡುಕೊಂಡ ಮೈಸೂರಿನ ದೊರೆ.
ಎ) ರಾಜ ಒಡೆಯರು
ಬಿ) ಚಿಕ್ಕದೇವರಾಜ ಒಡೆಯರು
ಸಿ) ದೊಡ್ಡದೇವರಾಜ ಒಡೆಯರು
ಡಿ) ಮೂರನೆ ಕೃಷ್ಣರಾಜ ಒಡೆಯರು


ಸರಿಯಾದ ಉತ್ತರ: ಬಿ) ಚಿಕ್ಕದೇವರಾಜ ಒಡೆಯರು


ವಿವರಣೆ :- ಚಿಕ್ಕ ದೇವರಾಜ ಒಡೆಯರು ಮೈಸೂರಿನ ಮೊದಲ ಅರಸರಲ್ಲಿ ಪ್ರಮುಖರಾದವರು. ಇವರ ಕಾಲ ಕ್ರಿ.ಶ. 1672-1704. ಇವರು ಮರಾಠರ ದಾಳಿಗಳನ್ನು, 1675ರಲ್ಲಿ ಬಿಜಾಪುರದ ಜನರಲ್ ರಣದುಲ್ಲಾ ಖಾನನನ್ನು, 1679ರಲ್ಲಿ ತಿಮ್ಮಪ್ಪಗೌಡ ಮತ್ತು ರಾಮಪ್ಪಗೌಡ ಪಾಳೆಗಾರರನ್ನು ಸೋಲಿಸಿ ತನ್ನ ರಾಜ್ಯ ವಿಸ್ತರಿಸಿದನು. ನಂತರ ಶಿವಾಜಿ ಮತ್ತು ಅವನ ಮಗ ಸಂಭಾಜಿಯ ದಾಳಿಗಳನ್ನು ಹಿಮ್ಮೆಟ್ಟಿಸಿದನು. ಈ ಮಧ್ಯೆ ಔರಂಗಜೇಬ್ ಬಿಜಾಪುರ ಮತ್ತು ಶಿರಾಗಳನ್ನು ವಶಪಡಿಸಿಕೊಂಡು ಮೈಸೂರಿನ ಸಮೀಪದವರೆಗೂ ವಿಸ್ತರಿಸಿದನು. 1687ರಲ್ಲಿ ಔರಂಗಜೇಬಿನ ದಳಪತಿ ಖಾಸಿಮ್ ಖಾನ್ ಮರಾಠರಿಂದ ಬೆಂಗಳೂರನ್ನು ಗೆದ್ದುಕೊಂಡನು. ಸೇನೆಯ ಖರ್ಚು ಮೊದಲಾದ ಬಾಬ್ತುಗಳಿಂದಾಗಿ ಅವನು ಹಣದ ಅವಶ್ಯಕತೆಯಿಂದ ಬೆಂಗಳೂರನ್ನು ಚಿಕ್ಕದೇವರಾಜ ಒಡೆಯನಿಗೆ 3 ಲಕ್ಷಕ್ಕೆ ಮಾರಾಟ ಮಾಡಿದನು.

3. ಇಮ್ಮಡಿ ಪುಲಕೇಶಿ ತನ್ನ ಆಸ್ಥಾನದಲ್ಲಿ ಪರ್ಷಿಯಾದ ರಾಯಭಾರಿಗಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರುವ ಚಿತ್ರ ಈ ಸ್ಥಳದಲ್ಲಿದೆ
ಎ) ಐಹೊಳೆ
ಬಿ) ಬಾದಾಮಿ
ಸಿ) ಪಟ್ಟದಕಲ್ಲು
ಡಿ) ಅಜಂತಾ


ಸರಿಯಾದ ಉತ್ತರ: ಡಿ) ಅಜಂತಾ

ವಿವರಣೆ :- ಕರ್ನಾಟಕದ ಇತಿಹಾಸದಲ್ಲಿ ಬಾದಾಮಿಯ ಚಾಲುಕ್ಯರ ಆಳ್ವಿಕೆ ತುಂಬಾ ಪ್ರಸಿದ್ಧವಾದದ್ದು ಇವರ ಸಾಮ್ರಾಜ್ಯ ಉತ್ತರದ ನರ್ಮದಾ ತೀರದಿಂದ ದಕ್ಷಿಣದ ಕಾವೇರಿ ನದಿಯವರೆಗೆ ವಿಸ್ತರಿಸಿತ್ತು. ಇವರ ಖ್ಯಾತಿ ಚೀನ, ಪರ್ಶಿಯಾಗಳವರೆಗೂ ಹರಡಿತ್ತು. ಈ ವಂಶದ ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿ ಇವನು ಕ್ರಿ.ಶ. 610 ರಿಂದ 642 ರವರೆಗೆ ಆಳಿ ಕರ್ನಾಟಕದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಹಬ್ಬಸಿದನು. ಇವರ ಕಾಲದಲ್ಲಿ ಬಾದಾಮಿ ಮತ್ತು ಐಹೊಳೆ ಯ ದೇವಾಲಯಗಳು ನಿರ್ಮಿಸಲ್ಪಟ್ಟವು.

4. ಹರ್ಷವರ್ಧನನ ಮೊದಲ ರಾಜಧಾನಿ ಯಾವುದು?
ಎ) ಥಾನೇಶ್ವರ
ಬಿ) ಕನೋಜ್
ಸಿ) ಮಥುರಾ
ಡಿ) ಪ್ರಯಾಗ


ಸರಿಯಾದ ಉತ್ತರ: ಎ) ಥಾನೇಶ್ವರ


ವಿವರಣೆ :- ಹರ್ಷವರ್ಧನ ವರ್ಧನ ಸಾಮ್ರಾಜ್ಯದ ಪ್ರಖ್ಯಾತರಾಜ ಇವನು 16ನೇ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿದನು. ಆಗ ಇವನ ರಾಜಧಾನಿ ಥಾನೇಶ್ವರ ಆಗಿತ್ತು. ಹರ್ಷವರ್ಧನಿಗಿಂತ ಮೊದಲು ಬಂದ ದೊರೆಗಳು ಥಾನೇಶ್ವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹರ್ಷವರ್ಧನನು ಸಿಂಹಾಸನವನ್ನು ಏರಿದ ನಂತರ ಅನೇಕ ಅಂತಹ ಮತ್ತು ಬಾಹ್ಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಕೊನಗೆ ಕನೋಜನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

5. ಮಹಾಬಲಿಪುರಂನಲ್ಲಿರುವ ಕಡಲ ತೀರ ದೇವಾಲಯವನ್ನು ಕಟ್ಟಿಸಿದವನು
ಎ) ಮೊದಲನೆ ಮಹೇಂದ್ರವರ್ಮನ್
ಬಿ) ಎರಡನೆ ನರಸಿಂಹವರ್ಮನ್
ಸಿ) ಎರಡನೆ ಮಹೇಂದ್ರವರ್ಮನ್
ಡಿ) ಎರಡನೆ ನರಸಿಂಹವರ್ಮನ್

ಸರಿಯಾದ ಉತ್ತರ: ಬಿ) ಎರಡನೆ ನರಸಿಂಹವರ್ಮನ್


ವಿವರಣೆ :- ಪಲ್ಲವರು ದಕ್ಷಿಣ ಭಾರತದ ಒಂದು ಪ್ರಮುಖ ರಾಜವಂಶ, ಈ ವಂಶದ ದೊರೆ ನರಸಿಂಹವರ್ಮ, ಇವನ ಕಾಲ ಕ್ರಿ.ಶ. 630-668 ಇವನು ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದನು ಇವನು ಮಹಾಬಲಿಪುರಂನಲ್ಲಿ ಅನೇಕ ದೇವಾಲಯ ಹಾಗೂ ಏಕ ಶಿಲಾರಥಗಳನ್ನು ನಿರ್ಮಿಸಿದ್ದಾನೆ. ಈತನು 'ಮಹಾಮಲ್ಲ' ಎಂಬ ಬಿರುದನ್ನು ಹೊಂದಿದ್ದನು.

6 ಆಗ್ರಾ ನಗರದ ಸಂಸ್ಥಾಪಕ
ಎ) ಬಾಬರ್
ಬಿ) ಅಕ್ಟರ್‌
ಸಿ) ಷಹಜಹಾನ್
ಡಿ) ಸಿಕಂದರ್ ಲೋದಿ

ಸರಿಯಾದ ಉತ್ತರ: ಡಿ) ಸಿಕಂದರ್ ಲೋದಿ


ವಿವರಣೆ :- ಸಿಕಂದರ್ ಲೋದಿ, ಲೋದಿ ಸಂತತಿಯ ದೊರೆ. ಇವನು ತನ್ನ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿ ಆಗ್ರಾ ನಗರದ ನಿರ್ಮಾಣಕ್ಕೆ ನಾಂದಿ ಹಾಡಿದನು. ಇವನ ಆಳ್ವಿಕೆಯಲ್ಲಿ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತಂದನು.

* ಇವನು ಭೂಮಿ ಅಳತೆ ಮಾಡರ್ 'ಘಜ್-ಇ-ಸಿಕಂದರಿ' ಎನ್ನುವ ಅಳತೆಗೋಲನ್ನು ಬಳಕೆಗೆ ತಂದನು.

• ಕೃಷಿ ಸಹಕಾರಿ ಸಂಸ್ಥೆ ಸ್ಥಾಪಿಸಿ ಇವುಗಳಿಂದ ಉತ್ತಮ ತಳಿ ಬೀಜಗಳನ್ನು ಹಂಚಿಕೆ ಮಾಡಿದನು.

* ಕಂದಾಯದ ಲೆಕ್ಕಾಚಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ಒಪ್ಪಿಸಲು ವ್ಯವಸ್ಥೆಯನ್ನು ರೂಪಿಸಿದನು.

* ನಿರ್ಗತಿಕರಿಗೆ ಪುಕ್ಕಟೆ ಆಹಾರ ಕಾಳುಗಳನ್ನು ಒದಗಿಸಲು ವ್ಯವಸ್ಥೆ ಮಾಡಿದನು.

* ಪಡಿತರ ಮತ್ತು ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದನು.

7. ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
ಎ) ಅಮೀರ್ ಖುಸ್ರೋ - ಪದ್ಮಾವತಿ
ಬಿ) ಚಾಂದ್ ಬರ್ದಾಯ - ಪೃಥ್ವಿರಾಜ್ ರಾಸೊ
ಸಿ) ಅಬುಲ್ ಫಜಲ್ - ಐನ್ ಇ ಅಕ್ಷರಿ
ಡಿ) ಬಾಬರ್ ತುಜುಕ್ ಇ ಬಾಬರಿ

ಸರಿಯಾದ ಉತ್ತರ: ಎ) ಅಮೀರ್ ಖುಸ್ರೋ-ಪದ್ಮಾವತಿ


ವಿವರಣೆ :-ಪ್ರಾಚೀನ ಕವಿಗಳು ಮತ್ತು ಅವರ ಕೃತಿಗಳು

1. ಬಾಬರ್ - ಬಾಬರ್ ನಾಮ ಅಥವಾ ತುಜಕಿ-ಎ-ಬಾಬರಿ

2. ತುಳಸಿದಾಸ್ - ರಾಮಾಚರಿತ ಮಾನಸ

3. ಅಬ್ದುಲ್ ಫಜಲ್ - ಅಕ್ಬರ್‌ ನಾಮ, ಐನ್-ಇ-ಅಕ್ಟರಿ

4. ಬದೌನಿ - ಖಾಬ್ ಉಕ್ ತವಾರಿಕ್

5. ಅಯೀನಾ ಜಬ್ಬಾನಿ - ಷಹಜಹಾನ್ ನಾಮ

6. ಅಬ್ದುಲ್ ಹಮೀದ್ - ಬಾದಷಹನಾಮ

7. ಜಹಾಂಗೀರ್ -  ತಜ್-ಎ-ಜಹಾಂಗಿರಿ

8. ಗುಲ್ಬದನ್ ಬೇಗಂ - ಹುಮಾಯುನ್ ನಾಮ

9. ಅಮೀರ್ ಖುಸ್ರು - ತುಘಲಕ್ ನಾಮ, ತಾರೀಖ್-ಎ-ಅಲಾಡಿ

10. ತುಳಸಿದಾಸ್ - ರಾಮಚರಿತ ಮಾನಸ

8. ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದಸ್ಥಳ
ಎ) ಮೈಸೂರು
ಬಿ) ಧಾರವಾಡ
ಸಿ) ಬೆಳಗಾವಿ
ಡಿ) ಬೆಂಗಳೂರು 

ಸರಿಯಾದ ಉತ್ತರ: ಸಿ) ಬೆಳಗಾವಿ


ವಿವರಣೆ :-

ಬ್ರಹ್ಮ ಸಮಾಜ - ರಾಜಾರಾಮ್ ಮೋಹನ್ ರಾಯ್

ಆರ್ಯ ಸಮಾಜ - ದಯಾನಂದ ಸರಸ್ವತಿ

ಪ್ರಾರ್ಥನಾ ಸಮಾಜ - ಆತ್ಮಾರಾಂ ಪಾಂಡುರಂಗ

ಸತ್ಯಶೋಧಕ ಸಮಾಜ - ಜ್ಯೋತಿಭಾ ಫುಲೆ

ರಾಮಕೃಷ್ಣ ಮಿಷನ್ - ಸ್ವಾಮಿ ವಿವೇಕಾನಂದ

ಥಿಯಾಸಾಫಿಕಲ್ ಸೊಸೈಟಿ - ಮ್ಯಾಡಮ್ ಬ್ಲಾವಟಿ ಮತ್ತು ಕರ್ನಲ್ ಹೆಚ್.ಎಸ್. ಅಲ್ಕಾಟ್ (ಮೂಲ ಸ್ಥಾಪಕರು, ಆನಿಬೆಸೆಂಟ್ ಭಾರತದಲ್ಲಿ)

9. ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು
ಎ) ಅಸಹಕಾರ ಚಳುವಳಿ
ಬಿ) ಉಪ್ಪಿನ ಸತ್ಯಾಗ್ರಹ
ಸಿ) ಧ್ವಜ ಸತ್ಯಾಗ್ರಹ
ಡಿ) 'ಭಾರತ ಬಿಟ್ಟು ತೊಲಗಿ' ಚಳುವಳಿ

ಸರಿಯಾದ ಉತ್ತರ: ಬಿ) ಉಪ್ಪಿನ ಸತ್ಯಾಗ್ರಹ


ವಿವರಣೆ :-

ಭಾರತೀಯರು ಉಪ್ಪು ತಯಾರಿಸಬಾರದೆಂಬ ಬ್ರಿಟೀಷರ ಕಾಯ್ದೆಯನ್ನು ಮುರಿದು ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಂತೆ, ಕರ್ನಾಟಕದಲ್ಲೂ ಮೈಲಾರ ಮಹದೇವಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಸತ್ಯಾಗ್ರಹ ಪ್ರಾರಂಭವಾಯಿತು. ಅಂಕೋಲದಲ್ಲಿ ಏಪ್ರಿಲ್ 13, 1930 ರಂದು ಉಪ್ಪು ತಯಾರಿಸಿ ಕಾಯಿದೆಯನ್ನು ಭಗ್ನಗೊಳಿಸಿದರು. 

10. ಕಾನ್ಪುರದಲ್ಲಿ 1837ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದನು
ಎ) ತಾಂತ್ಯ ಟೋಪಿ
ಬಿ) ನಾನಾ ಸಾಹೇಬ
ಸಿ) ಕುಂವರ್ ಸಿಂಗ್
ಡಿ) ಮಂಗಲ್ ಪಾಂಡೆ

ಸರಿಯಾದ ಉತ್ತರ: ಬಿ) ನಾನಾ ಸಾಹೇಬ


ವಿವರಣೆ :-

1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿದ್ದವರು

ಝಾನ್ಸಿ - ರಾಣಿ ಲಕ್ಷ್ಮಿ ಬಾಯಿ

ಔದ್ - ಅಬ್ದುಲ್ ಬೇಗಂ

ಕಾನ್ಪುರ - ನಾನಾಸಾಹೇಬ್,  ತಾತ್ಯಾಟೋಪಿ

ಜಗದೀಶಪುರ - ಕುವರ್ ಸಿಂಗ್

ಫೈರುಜಾಬಾದ್ - ಫಿರೋಜ್ ಷಾ ಮೌಲ್ವಿ ಮಹಮದ್

ಫೈಜಾಬಾದ್ - ಮಹಮದುಲ್ಲಾ

ದೆಹಲಿ - ಮಹಮದ್ ಷಾ 2



ಇವುಗಳನ್ನೂ ಓದಿ 













Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section