Breaking

Monday, 27 September 2021

ಜರೋಕ-ಇ-ದರ್ಶನ್ (Jarokha-i-Darshan) ಬಗ್ಗೆ ನಿಮಗೆಷ್ಟು ಗೊತ್ತು? How much you know about Jarokha-i-Darshan?

ಜರೋಕ-ಇ-ದರ್ಶನ್ (Jaroka-i-Darshan)



ಜರೋಕ-ಇ-ದರ್ಶನ್ ಎಂಬುದು ಭಾರತದ ಮಧ್ಯಕಾಲೀನ ರಾಜರುಗಳು ಕೋಟೆ ಮತ್ತು ಅರಮನೆಗಳ ಬಾಲ್ಕನಿಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರತಿನಿತ್ಯ ಭಾಷಣ ಮಾಡುವ ಪದ್ಧತಿಯಾಗಿತ್ತು. ಸಾರ್ವಜನಿಕರೊಂದಿಗೆ ನೇರವಾಗಿ ಮುಖಾಮುಖಿ ಸಂಪರ್ಕ ಸಾಧಿಸಲು ಬಳಸಿಕೊಂಡ ಪ್ರಮುಖ ವಿಧಾನವಾಗಿತ್ತು. ಇದನ್ನು ಮೊಘಲ್ ದೊರೆಗಳು ಆಚರಣೆಗೆ ತಂದಿದ್ದರು. ಈ ಪದ್ಧತಿಯು ಮೊಘಲ್ ದೊರೆ ಅಕ್ಬರನ ಪರಿಕಲ್ಪನೆಯಾಗಿದೆ. ಅಕ್ಬರನ ನಂತರ ಈ ಪದ್ಧತಿಯನ್ನು ಜಹಂಗೀರ್ ಮತ್ತು ಷೇರ್ ಷಾ ಮುಂದುವರೆಸಿದರು. ಈ ಪದ್ಧತಿಯನ್ನು ಮೊಘಲ್ ದೊರೆ ಔರಂಗಜೇಬನು ಸ್ಥಗಿತಗೊಳಿಸಿದನು. ಮೊಘಲರ ಕಾಲದಲ್ಲಿ ಜಾರಿಯಲ್ಲಿದ್ದ ತುಲಾಧನ (Tuladhan-ದೊರೆಯನ್ನು ಚಿನ್ನದಲ್ಲಿ ತೂಗುವ ಪದ್ಧತಿ) ಯನ್ನು ಔರಂಗಜೇಬನು ರದ್ದು ಮಾಡಿದನು.



ಅಕ್ಬರ್ ನ ಪ್ರಮುಖ ಕಟ್ಟಡಗಳು


ಅಕ್ಬರ್‌ನು ಕಲಾರಸಿಕನು, ಮಹಾನಿರ್ಮಾಪಕನೂ ಆಗಿದ್ದು ಮೊಗಲ್ ವಾಸ್ತುಶಿಲ್ಪಕ್ಕೆ ಭದ್ರವಾದ ಬುನಾದಿ ಹಾಕಿದನು. ಅಕ್ಟರ್‌ ತನ್ನ ಮನಸ್ಸಿನಲ್ಲಿ ಮೂಡಿದ ಕಲ್ಪನೆಯನ್ನು ಕಲ್ಲಿನಲ್ಲಿ ಅರಳಿಸಿಬಿಟ್ಟನು. ಈಗ ಕಲೆಯಲ್ಲಿ ಪ್ರಥಮಬಾರಿಗೆ ಹಿಂದೂ-ಮುಸ್ಲಿಂ ಶೈಲಿಗಳು ಸಮಾಗಮಗೊಂಡವು. ಅವನು ಅನೇಕ ಹಿಂದೂ ಶಿಲ್ಪಿಗಳನ್ನು ನೇಮಿಸಿಕೊಂಡನು. ಆತ ವಾಸ್ತುಶಿಲ್ಪಕ್ಕೆ ಕೆಂಪು ಮರಳುಕಲ್ಲನ್ನು ಬಳಸಿದನು. ಕಮಾನುಗಳು ಸುಂದರವಾಗಿವೆ. ಅವನ ಬಹುತೇಕ ಕಟ್ಟಡಗಳು ಅವರ ಕನಸಿನ ನಗರ  ಎಂದು ಕರೆಯಲಾಗಿದೆ. ಅದನ್ನು ಷೇಕ್ ಸಲೀಂ ಚಿಸ್ತಿಯ ಗೌರವ ಹಾಗೂ ಗುಜರಾತಿನ ವಿಜಯದ ನೆನಪಿಗಾಗಿ ನಿರ್ಮಿಸಿದನು. ಸಿಕ್ರಿ ನಿರ್ಮಾಣಕ್ಕೆ 11 ವರ್ಷಗಳು (1569-80) ಬೇಕಾದವು. ಫತೇಪುರ ಸಿಕ್ರಿ 2 ಮೈಲಿ ಉದ್ದ ಹಾಗೂ 1 ಮೈಲಿ ಆಗಲವಾಗಿದೆ. ಅದಕ್ಕೆ 9 ದ್ವಾರಗಳಿದ್ದವು. ಇಲ್ಲಿ ಅಕ್ಬರ್‌ ನಿರ್ಮಿಸಿದ ದಿವಾನ್-ಇ-ಖಾಸ್, ದಿವಾನ್-ಇ-ಆಮ್, ಪಂಚಮಹಲ್, ಜೋದ್ ಬಾಯ್ ಅರಮನೆ, ಬೀರ್‌ಬಲ್ ಮಹಲ್, ಖಾಸ್ ಮಹಲ್, ಹಿರಾನ್ ಮಹಲ್, ಇಬಾದತ್ ಖಾನ, ತುರ್ಕಿ ಸುಲ್ತಾನ್ ಅರಮನೆ (ವಾಸ್ತುಶಿಲ್ಪದ ಅನರ್ಘ್ಯ

ರತ್ನ), ವೈದ್ಯಾಲಯ, ಮಾರಿಯಂ ಮಹಲ್, ರಾಯಲ್ ಸ್ಕೂಲ್, ಕೋಶಗಾರ, ಬಾದಶಹ ಮಲಗುವ ಕೊಠಡಿಗಳು, ಜಾಮೀ ಮಸೀದಿ, ಷೇಕ್ ಸಲೀಂ ಚಿಸ್ತಿ ಸಮಾಧಿ, ಬುಲಂದ್ ದದ್ವಾಜ್ (ಗುಜರಾತ್ ದಿಗ್ವಿಜಯದ ನೆನಪಿಗಾಗಿ ನಿರ್ಮಿಸಿದ ವಿಜಯದ ಬಾಗಿಲು) ಮುಂತಾದ ಕಟ್ಟಡಗಳಿವೆ. ಬುಲಂದ್ ದರ್ವಾಜಾ ದ್ವಾರವು ಭಾರತದಲ್ಲೇ ಅತ್ಯಂತ ಎತ್ತರವಾದ ಬಾಗಿಲಾಗಿದೆ. ಅದು 176 ಅಡಿ ಎತ್ತರ ಹಾಗೂ 130 ಅಡಿ ಅಗಲವಾಗಿದೆ. ಅದು ಭಾರತದ ಅತ್ಯುತ್ತಮ ವಾಸ್ತುಶಿಲ್ಪ ಕೃತಿಗಳಲ್ಲಿ ಒಂದಾಗಿದೆ. ಅದಕ್ಕೆ ಜೈನ ಶೈಲಿಯ ಗುಮ್ಮಟ ಕಳಸಗಳಿವೆ. ನಡುಗುಮ್ಮಟ 41 ಅಡಿ ಎತ್ತರವಾಗಿದೆ. 288 ಅಡಿ ಉದ್ದ, 66, ಅಗಲವಾಗಿರುವ ಗುಜರಾತ್ ದಿಗ್ವಿಜಯದ ನೆನಪಿಗೆ ಅದನ್ನು ನಿರ್ಮಿಸಲಾಯಿತು. ಜಾಮೀಮಸೀದಿ ಭಾರತದ ಸುಂದರ ಮಸೀದಿಗಳಲ್ಲಿ ಒಂದಾಗಿದೆ. ಫರ್ಗ್ಯುಸನ್‌ರು ಜಾಮೀಮಸೀದಿಯನ್ನು 'ಶಿಲೆಯಲ್ಲಿನ ಕಲ್ಪನಾ ಪ್ರಪಂಚದ ವಿಹಾರವೆಂದು' 'ಸಕ್ರಿಯ ಭದ್ರತೆಯ ಸಂಕೇತ' ಎಂದು ವರ್ಣಿಸಲಾಗಿದೆ. ಅಕ್ಬರ್‌ನು ನಿರ್ಮಿಸಿದ ಸಕ್ರಿಯ ಷೇಕ್ ಸಲೀಂ ಚಿಸ್ತಿಯ ಸಮಾಧಿಯ ಬಿಳಿ ಅಮೃತಶಿಲೆಗಳಿಂದ ಕಟ್ಟಿದ್ದು ಅದರ ಗುಮ್ಮಟ ಆಕರ್ಷಣೀಯವಾಗಿದೆ.


ವಿ.ಎ. ಸ್ಮಿತ್‌ರು ಫತೇಪುರ ಸಿಕ್ರಿಯನ್ನು “ಶಿಲೆಯಲ್ಲಿನ ಅದ್ಭುತ ರಮ್ಯ ಕಾವ್ಯ” ಹಾಗೂ ವಾಸ್ತುಶಿಲ್ಪದ ವಜ್ರ, ಹಿಂದೆಂದೂ ಸೃಷ್ಟಿಯಾಗದ ಅಥವಾ ಮತ್ತೆ ಸೃಷ್ಟಿಸಲಾಗದು ಎಂತಲೂ ಫರ್ಗ್ಯುಸನ್‌ರು 'ಒಬ್ಬ ಮಹಾಶಯ ಮನಸ್ಸಿನ ದರ್ಪಣವಾಗಿದೆ' ಬಣ್ಣಿಸಿದ್ದಾರೆ. ಪಂಚಮಹಲ್ ಮಹಡಿಗಳ ಕಟ್ಟಡವಾಗಿದ್ದು, 84 ಸ್ತಂಭಗಳಿಂದ ಕೂಡಿದೆ. ಫತೇಪುರ ಸಿಕ್ರಿ 1585 ರವರೆಗೂ ರಾಜಧಾನಿಯಾಗಿದ್ದು, ಅನಂತರ ಆಗ್ರಾ ರಾಜಧಾನಿಯಾಯಿತು ಆಗ್ರದ ಕೋಟೆ 2.4 ಕಿ.ಮೀ ಉದ್ದ ಹಾಗೂ 75 ಅಡಿ ಎತ್ತರ (25 ಮೀ) ವಾಗಿತ್ತು. ಅದಕ್ಕೆ ಆನೆದ್ವಾರ ಅಥವಾ ದೆಹಲಿದ್ವಾರ ಮತ್ತು ಅಮರ್‌ಸಿಂಗ್ ದ್ವಾರ ಎಂಬ 2 ದ್ವಾರಗಳಿದ್ದವು. ಆಗ್ರದಲ್ಲಿ ಅಕ್ಬರ್‌ ನಿರ್ಮಿಸಿದ ಅಕ್ಟರ್ ಮಹಲ್, ಮೋತಿ ಮಹಲ್, ದಿವಾನ್ -ಇ-ಆಮ್, ದಿವಾನ್-ಇ-ಖಾಸ್, ನಗೀನಾ ಮಸೀದಿ, ಜನಾನ ಅರಮನೆ, ಜಹಂಗೀರ್ ಮಹಲ್ ಕಟ್ಟಡಗಳಿವೆ ಅಕ್ಬರನು ಸಿಕಂದರ್‌ನಲ್ಲಿ ತನ್ನ ಗೋರಿಯ ನಿರ್ಮಾಣ ಕಾರ್ಯ ಆರಂಭಿಸಿದನು. “ಅಕ್ಬರ್‌ನ ಗೋರಿ ಭಾರತದ ಪ್ರಸಿದ್ದ ಚಕ್ರವರ್ತಿಯ ಪ್ರಸಿದ್ಧ ಅರ್ಹ ಸ್ಮಾರಕ” ಎಂದು ಹ್ಯಾವೆಲ್ ಹೇಳಿದ್ದಾರೆ. ಅದರ ನಿರ್ಮಾಣ ವೆಚ್ಚ 15 ಲಕ್ಷ ರೂ ಇಡೀ ಏಷ್ಯಾದಲ್ಲೇ ಅತ್ಯಂತ ಸುಂದರ ಗೋರಿ ಇದಾಗಿದೆ.


ಅದರ ಮೇಲೆ ಮರಗಿಡ ಪುಷ್ಪ ಪತಂಗ ಕೆತ್ತನೆಗಳ ಅಲಂಕಾರಗಳಿವೆ. ಅದರ ಮುಂದೆ ಸುಂದರ ತೋಟವಿದೆ. ಅಕ್ಟರ್‌ ಅಲಹಾಬಾದಿನಲ್ಲಿ 40 ಸ್ತಂಭಗಳುಳ್ಳ ಅರಮನೆಯನ್ನು ನಿರ್ಮಿಸಿದನು. ಜೊತೆಗೆ ಅಜೀರ್, ಬಿಕನೀರ್, ಜೋದ್ ಪುರ ಅರಮನೆಗಳು ಆಗ್ರ, ಅಲಹಾಬಾದ್, ಅಟ್ರೋಕ್, ಲಾಹೋರ್‌ನ ಕೋಟೆಗಳು ಅಟ್ರೋಕ್ ಮಸೀದಿ, ಮೆರ್ತಾ ಮಸೀದಿ, ಅನೇಕ ಸರಾಯಿಗಳು, ಕೆರೆಗಳು, ಮದರಸಗಳು ಕೋಟೆಗಳಾದ ಅಗ್ರಮ, ಲಾಹೋರ್ ಮತ್ತು ಅಲಹಾಬಾದ್ ಕೋಟೆಗಳನ್ನು ನಿರ್ಮಿಸಿದನು.

No comments:

Post a Comment

Important Notes

Random Posts

Important Notes

Popular Posts

18-09-2021 Current Affairs in Kannada for All Competitive Exams

18-09-2021 Current Affairs in Kannada for All Competitive Exams ವಿಶ್ವ ಓಜೋನ್ ದಿನ : ಸೆಪ್ಟಂಬರ್-16 ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಜೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಮಹತ್ವದ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್-16ನ್ನು 'ವಿಶ್ವ ಓಜೋನ್ ದಿನ' ಎಂದು ಆಚರಿಸಲಾಗುತ್ತದೆ. 2021ರ ಧೈಯವಾಕ್ಯ : 'ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ ಕೂಲ್' ಎಂಬ ಧೈಯದೊಂದಿಗೆ ಆಚರಿಸಲಾಗುತ್ತಿದೆ. ಇದರ ಅರ್ಥ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ. ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರುವಾಗಿ 50 ಕಿ.ಮೀ. ವರೆಗೂ ವ್ಯಾಪಿಸಿರುವ ಓಜೋನ್ ಪದರದ ಇರುವಿಕೆಯನ್ನು 1839ರಲ್ಲಿ ಕಂಡುಹಿಡಿಯಲಾಯಿತು. ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ. 1880ರಲ್ಲಿ ಓಜೋನ್ ಅತೀ ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲವೆಂದು ಸಂಶೋಧಿಸಲಾಗಿದೆ. ಓಜೋನ್ ಪದರ ಅಳತೆಯನ್ನು ಡಾಬ್ಬನ್ ಯುನಿಟ್‌ನಿಂದ ಅಳೆಯುತ್ತಾರೆ. ಈ ತರಹದ ವಿಶೇಷತೆ ಹೊಂದಿದ ಓಜೋನ್ ಪದರು ಮೊದಲ ಸಲ ಅಂಟಾರ್ಕ್ಟಿಕದ ಮೇಲೆ ವಾಯುಮಂಡಲ ಓಜೋನ್ ಪದರಕ್ಕೆ ತೂತಾಗಿದೆ ಎಂದು ತಿಳಿದ ವಿಜ್ಞಾನಿಗಳು ಅದಕ್ಕ...

06th April 2025 Daily Current Affairs Quiz in Kannada for All Competitive Exams

          06th April 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-06th April 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Unit-1-A Study of Cells: Useful Science Chapterwise Questionnaires for All Competitive Exams

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಅಧ್ಯಾಯವಾರು ವಿಜ್ಞಾನ ಪ್ರಶ್ನೋತ್ತರಗಳು :  ಘಟಕ -1 ಜೀವಕೋಶಗಳ ಅಧ್ಯಯನ Unit-1-A Study of Cells: Useful Science Chapterwise Questionnaires  for All Competitive Exams ಹಾಯ್, ಎಲ್ಲರಿಗೂ ನಮಸ್ಕಾರ..!!  KPSC NOTES MCQS  ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ವಿಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಎಸ್ಎಸ್ಸಿ, ರೈಲ್ವೆ ನೇಮಕಾತಿ ಪರೀಕ್ಷೆಗಳು, ಐಬಿಪಿಎಸ್ ಪರೀಕ್ಷೆಗಳು, ಹಾಗೂ  ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ  ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹಿಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ  "ಸಾಮಾನ್ಯ ವಿಜ್ಞಾನದ ಎಲ್ಲ ಪ್ರಮುಖ ಪ್ರಶ್ನೋತ್ತರಗಳು"  ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾ...