Breaking

Thursday, 24 February 2022

24 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

24 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

24 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಎ) 25ನೇ ಜನವರಿ
ಬಿ) 26ನೇ ಜನವರಿ 
ಸಿ) 15ನೇ ಅಗಸ್ಟ್ 
ಡಿ) 26ನೇ ನವೆಂಬರ್

ಸರಿಯಾದ ಉತ್ತರ:  ಎ) 25ನೇ ಜನವರಿ  



2. "ಬಿ. ಸಿ. ರಾಯ್ ಪ್ರಶಸ್ತಿ" ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ?
ಎ) ಸಂಗೀತ 
ಬಿ) ಪತ್ರಿಕೋದ್ಯಮ 
ಸಿ) ಔಷಧ
ಡಿ) ಪರಿಸರ

ಸರಿಯಾದ ಉತ್ತರ: ಸಿ) ಔಷಧ 



3. "ಚೆನಾಬ್" ಯಾವ ನದಿಯ ಉಪನದಿಯಾಗಿದೆ ?
ಎ) ಇಂಡಸ್
ಬಿ) ಗಂಗಾ 
ಸಿ) ಬ್ರಹ್ಮಪುತ್ರ 
ಡಿ) ಕಾವೇರಿ

ಸರಿಯಾದ ಉತ್ತರ: ಎ) ಇಂಡಸ್ 




4. "ಕ್ವಿಟ್ ಇಂಡಿಯಾ ಮೊಮೆಂಟ್" ಎಂದು ನಡೆಯಿತು?
ಎ) 1940
ಬಿ) 1945
ಸಿ) 1950
ಡಿ) 1942  

ಸರಿಯಾದ ಉತ್ತರ: ಡಿ) 1942




5. ಇತ್ತೀಚೆಗೆ ಸುದ್ಧಿಯಲ್ಲಿರುವ  "ಧವನ್-1"ಯಾವುದಕ್ಕೆ ಸಂಭಂಧಿಸಿದೆ?
ಎ) ಕ್ಷಿಪಣಿ
ಬಿ) ರಾಕೆಟ್ ಇಂಜಿನ್
ಸಿ) ಕೋವಿಡ್ ಲಸಿಕೆ
ಡಿ) ಕ್ರೀಡಾ ಕಾರಿಡಾರ್  

ಸರಿಯಾದ ಉತ್ತರ: ಬಿ) ರಾಕೆಟ್ ಇಂಜಿನ್ 

ವರಣೆ : 

ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಸಂಪೂರ್ಣ ಕ್ರಯೋಜೆನಿಕ್ "ರಾಕೆಟ್ ಎಂಜಿನ್ ಧವನ್ 1" ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.ಇದು ಮುಂಬರುವ ವಿಕ್ರಮ್ -2 ಕಕ್ಷೀಯ ಉಡಾವಣಾ ವಾಹನದ ಮೇಲಿನ ಹಂತಗಳಿಗೆ ಶಕ್ತಿ ನೀಡುತ್ತದೆ.ರಾಕೆಟ್ ಎಂಜಿನ್ ಧವನ್ 1 ಗೆ ಭಾರತೀಯ ರಾಕೆಟ್ ವಿಜ್ಞಾನಿ ಸತೀಶ್ ಧವನ್ ಅವರ ಹೆಸರನ್ನು ಇಡಲಾಗಿದೆ.ಧವನ್ -1 ಸಂಪೂರ್ಣವಾಗಿ "ಮೇಡ್ - ಇನ್ - ಇಂಡಿಯಾ" ಕ್ರಯೋಜೆನಿಕ್ ಎಂಜಿನ್ ಆಗಿದ್ದು,3D ಪ್ರಿಂಟಿಂಗ್ ಬಳಸಿ ಅಭಿವೃದ್ಧಿಪಡಿಸಲಾಗಿದೆ.



6. ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಯಾವ ನಗರದಲ್ಲಿದೆ?
ಎ) ಮೈಸೂರು
ಬಿ) ಬೆಂಗಳೂರು
ಸಿ) ಧಾರವಾಡ 
ಡಿ) ಉಡುಪಿ

ಸರಿಯಾದ ಉತ್ತರ: ಎ) ಮೈಸೂರು 



7. "ರಾಜ ರಾಮ್ ಮೋಹನ್ ರಾಯ್" ಯಾವುದರ ಸ್ಥಾಪಕರಾಗಿದ್ದಾರೆ?
ಎ) ಬ್ರಹ್ಮ ಸಮಾಜ
ಬಿ) ಪ್ರಾರ್ಥನಾ ಸಮಾಜ
ಸಿ) ರಾಮಕೃಷ್ಣ ಮಿಷನ್ 
ಡಿ) ಆರ್ಯ ಸಮಾಜ 

ಸರಿಯಾದ ಉತ್ತರ: ಎ) ಬ್ರಹ್ಮ ಸಮಾಜ 



8.  ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಯಾರು?
ಎ) ಆರ್ ಗುಂಡೂರಾವ್
ಬಿ) ಎಸ್‌ಆರ್ ಬೊಮ್ಮಯ್
ಸಿ) ಡಿ ದೇವರಾಜ ಅರಸ್
ಡಿ) ರಾಮಕೃಷ್ಣ ಹೆಗ್ಗಡೆ 

ಸರಿಯಾದ ಉತ್ತರ: ಸಿ) ಡಿ ದೇವರಾಜ ಅರಸ್ 




9. ರಾಷ್ಟ್ರೀಯ ಧ್ವಜದಲ್ಲಿ ಬಿಳಿ ಬಣ್ಣವು ಏನನ್ನು ಪ್ರತಿನಿಧಿಸುತ್ತದೆ?
ಎ) ತ್ಯಾಗ 
ಬಿ) ಸತ್ಯ ಮತ್ತು ಆಲೋಚನೆಗಳ ಶುದ್ಧತೆ
ಸಿ) ಜೀವನದ ಸಮೃದ್ಧಿ 
ಡಿ) ಯಾವುದು ಅಲ್ಲ   

ಸರಿಯಾದ ಉತ್ತರ: ಬಿ) ಸತ್ಯ ಮತ್ತು ಆಲೋಚನೆಗಳ ಶುದ್ಧತೆ 



10. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
 ಎ) ಕೆ ಹನುಮಂತಯ್ಯ
 ಬಿ) ಎಸ್ ನಿಜಲಿಂಗಪ್ಪ
 ಸಿ) ವೀರೇಂದ್ರ ಪಾಟೀಲ್
 ಡಿ) ಕೆ.ಸಿ. ರೆಡ್ಡಿ    

ಸರಿಯಾದ ಉತ್ತರ:  ಡಿ) ಕೆ.ಸಿ. ರೆಡ್ಡಿ




No comments:

Post a Comment

Important Notes

Random Posts

Important Notes

Popular Posts