Breaking

Tuesday, 15 February 2022

15 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

15 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

15 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಉಚ್ಚ ನ್ಯಾಯಾಲಯದಲ್ಲಿ ಎಷ್ಟು ವರ್ಷಗಳ ಸೇವೆಯ ನಂತರ ಒಬ್ಬ ವ್ಯಕ್ತಿಯು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹನಾಗುತ್ತಾನೆ ?
ಎ ) 10 ವರ್ಷಗಳು 
ಬಿ ) 12 ವರ್ಷಗಳು 
ಸಿ ) 15 ವರ್ಷಗಳು 
ಡಿ ) 20 ವರ್ಷಗಳು   

ಸರಿಯಾದ ಉತ್ತರ:  ಎ ) 10 ವರ್ಷಗಳು    



2. ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ಅನುಬಂಧವನ್ನು ಹೊಸ ರಾಜ್ಯದ ರಚನೆಗಾಗಿ ತಿದ್ದುಪಡಿ ಮಾಡಲಾಯಿತು ?
ಎ ) ಮೊದಲ ಅನುಬಂಧ
ಬಿ ) ಎರಡನೆಯ ಅನುಬಂಧ 
ಸಿ ) ಮೂರನೆಯ ಅನುಬಂಧ 
ಡಿ ) ಏಳನೆಯ ಅನುಬಂಧ    

ಸರಿಯಾದ ಉತ್ತರ: ಎ ) ಮೊದಲ ಅನುಬಂಧ 



3. ಭಾರತೀಯ ಸಂವಿಧಾನದ ಪರಿಚ್ಛೇದ 66 ಇದಕ್ಕೆ ಸಂಬಂಧಿಸಿದೆ .
ಎ ) ರಾಷ್ಟ್ರಪತಿ ಚುನಾವಣೆ 
ಬಿ ) ಉಪರಾಷ್ಟ್ರಪತಿ ಚುನಾವಣೆ
ಸಿ ) ಪಂಚಾಯತ್‌ಗಳು 
ಡಿ ) ನಗರಸಭೆಗಳ ಚುನಾವಣೆ   

ಸರಿಯಾದ ಉತ್ತರ: ಬಿ ) ಉಪರಾಷ್ಟ್ರಪತಿ ಚುನಾವಣೆ  




4. ನೀತಿ ( Niti ) ಆಯೋಗದ ಅಧ್ಯಕ್ಷರಾಗಿ ಅದರ ಮುಖ್ಯಸ್ಥ ಯಾರು ?
ಎ ) ಭಾರತದ ರಾಷ್ಟ್ರಪತಿ 
ಬಿ ) ಪ್ರಧಾನಮಂತ್ರಿ
ಸಿ ) ವಿತ್ತ ಸಚಿವರು 
ಡಿ ) ಯೋಜನಾ ಸಚಿವರು 

ಸರಿಯಾದ ಉತ್ತರ: ಬಿ ) ಪ್ರಧಾನಮಂತ್ರಿ    




5. ಸರಿಯಲ್ಲದ ಹೇಳಿಕೆಯನ್ನು ಮಾತ್ರ ಹೊರತನ್ನಿರಿ
ಎ) ಸಂವಿಧಾನ ತಿದ್ದುಪಡಿ ಮಸೂದೆಯು ರಾಷ್ಟ್ರಪತಿಯಿಂದ ಮಾತ್ರ ಅಂಗೀಕರಿಸಲ್ಪಡುತ್ತದೆ,ಆದರೆ ಹಿಂದಿರುಗಿಸಲಾಗುವುದಿಲ್ಲ. 
ಬಿ) ಪ-lll ರಲ್ಲಿ ನೀಡಲ್ಪಟ್ಟ ಅಧಿಕಾರದಿಂದ ರಾಷ್ಟ್ರಪತಿಯು ಮಸೂದೆಗೆ ಅವನ/ಅವಳ ಸಮ್ಮತಿಯನ್ನು ತಡೆಹಿಡಿದಿಟ್ಟುಕೊಳ್ಳಬಹುದು
ಸಿ ) ಒಬ್ಬ ಹೈಕೋರ್ಟ್ ಜಡ್ಡನು ಅವನು / ಅವಳ ರಾಜೀನಾಮೆಯನ್ನು ಭಾರತದ ಪ್ರಧಾನ ನ್ಯಾಯಾಧೀಶರಿಗೆ ಸಂಬೋಧಿಸಬಹುದು.
ಡಿ ) ಸಮಾನತೆಯ ಹಕ್ಕಿನಲ್ಲಿ ಅಸ್ಪೃಶ್ಯತೆಯ ನಿರ್ಮೂಲನವೂ ಒಳಗೊಂಡಿದೆ.    

ಸರಿಯಾದ ಉತ್ತರ: ಸಿ ) ಒಬ್ಬ ಹೈಕೋರ್ಟ್ ಜಡ್ಡನು ಅವನು/ಅವಳ ರಾಜೀನಾಮೆಯನ್ನು ಭಾರತದ ಪ್ರಧಾನ ನ್ಯಾಯಾಧೀಶರಿಗೆ ಸಂಬೋಧಿಸಬಹುದು 



6. ರಾಜ್‍ಘಾಟ್  ನದಿ ಕಣಿವೆ ಯೋಜನೆಯು ಯಾವ ನದಿಗೆ ಸಂಬಂಧಿಸಿದೆ?
ಎ) ಯಮುನಾನದಿ
ಬಿ) ಚಂಬಲ್‍ನದಿ 
ಸಿ) ಬೆಟ್ವಾ
ಡಿ) ಸೋನ್   

ಸರಿಯಾದ ಉತ್ತರ: ಸಿ) ಬೆಟ್ವಾ 



7. ಈ ಕೆಳಗಿನ ಯಾವ ನಗರವನ್ನು ಕರ್ನಾಟಕದ ಉಕ್ಕಿನ ನಗರ ಎನ್ನುವರು?
ಎ) ತುಮಕೂರು
ಬಿ) ಶಿವಮೊಗ್ಗ
ಸಿ) ಬೆಳಗಾವಿ
ಡಿ) ಬಳ್ಳಾರಿ

ಸರಿಯಾದ ಉತ್ತರ: ಡಿ) ಬಳ್ಳಾರಿ   



8. ಕೂಡಲಸಂಗಮದಲ್ಲಿ ಈ ಕೆಳಗಿನ ಯಾವ ನದಿಗಳು ಸಂಗಮವಾಗಿವೆ?
ಎ) ಕೃಷ್ಣಾನದಿ ಮತ್ತು ಮಲಪ್ರಭಾ
ಬಿ) ಕೃಷ್ಣಾನದಿ ಮತ್ತು ಘಟಪ್ರಭಾ
ಸಿ) ಘಟಪ್ರಭಾ ಮತ್ತು ಮಲಪ್ರಭಾ
ಡಿ) ದೋಣಿ ಮತ್ತು ಮಲಪ್ರಭಾ 

ಸರಿಯಾದ ಉತ್ತರ: ಎ) ಕೃಷ್ಣಾನದಿ ಮತ್ತು ಮಲಪ್ರಭಾ 




9. ಜೋಳದ ಉತ್ಪಾದನೆಯಲ್ಲಿ ಭಾರತದಲ್ಲಿ ಕರ್ನಾಟಕದ ಸ್ಥಾನ_______.
ಎ) ಮೊದಲನೇ ಸ್ಥಾನ
ಬಿ) ಎರಡನೇ ಸ್ಥಾನ
ಸಿ) ಮೂರನೇ ಸ್ಥಾನ
ಡಿ) ನಾಲ್ಕನೇ ಸ್ಥಾನ

ಸರಿಯಾದ ಉತ್ತರ: ಬಿ) ಎರಡನೇ ಸ್ಥಾನ   



10. ಕೆಳಗಿನ ಯಾವ ಖಂಡದಲ್ಲಿ ವಿಜ್ಞಾನಿಗಳು ಅಪರೂಪದ  ಕಬ್ಬಿಣದ ಐಸೋಟ್ರೋಪ್ (Fe-60) ಕಂಡುಹಿಡಿದಿದ್ದಾರೆ?
ಎ) ಆಫ್ರಿಕಾ
ಬಿ) ಅಂಟಾರ್ಟಿಕಾ
ಸಿ) ಯುರೋಪ್
ಡಿ) ಏಷ್ಯಾ    

ಸರಿಯಾದ ಉತ್ತರ: ಬಿ) ಅಂಟಾರ್ಟಿಕಾ 




No comments:

Post a Comment

Important Notes

Random Posts

Important Notes

Popular Posts