ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ SSLC Social Science Chapterwise MCQs in Kannada for All Competitive Exams: Chapter-01 Europeans Arrival in India MCQS
ಭಾರತಕ್ಕೆ ಯುರೋಪಿಯನ್ನರ ಆಗಮನ
1) 14-15ನೇ ಶತಮಾನದಲ್ಲಿ ಏಷ್ಯಾದ ದೇಶಗಳಲ್ಲಿ ವ್ಯಾಪಾರದ ಏಕಸ್ವಾಮ್ಯ ಗಳಿಸಿದ್ದವರು?
A) ಯುರೋಪಿಯನ್ನರು
B) ಅರಬ್ಬರು
C) ಭಾರತೀಯರು
D) ಈಜಿಪ್ತಿಯನ್ನರು
B) ಅರಬ್ಬರು
2) ಯುರೋಪ್ ವರ್ತಕರಿಗೆ 1453 ನಂತರ ವ್ಯಾಪಾರ ಹೆಚ್ಚು ಲಾಭದಾಯಕವಾಗದಿರಲು ಮುಖ್ಯ ಕಾರಣ?
A) 1453 ರ ಕಾನ್ಸ್ಟಾಂಟಿನೋಪಲ್ ಟರ್ಕರ ವಶ
B) ಟರ್ಕರು ತೀವ್ರ ತೆರಿಗೆ ವಿಧಿಸಿದರು
C) ಅರಬ್ಬರು ಯುರೋಪ್ ನವರಿಗೆ ಸ್ಪರ್ಧೆ ಒಡ್ಡಿದರು
D) ಭಾರತದವರು ಸರಕುಗಳ ಹೆಚ್ಚಿಸಿದರು
B) ಟರ್ಕರು ತೀವ್ರ ತೆರಿಗೆ ವಿಧಿಸಿದರು
3) ಭೂಮಿಯ ಮೇಲಿನ ಅಭಿಪ್ರಾಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯ ಪಡೆಯಲು 'ನೀಲಿ ನೀರಿನ ನೀತಿ' ಯನ್ನು ಜಾರಿಗೆ ತಂದ ಅಧಿಕಾರಿ?
A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
B) ವಾಸ್ಕೋ-ಡಾ-ಗಾಮಾ
C) ಅಲ್ಫೋನ್ಸೋ ಅಲ್ಬುಕರ್ಕ್
D) ಸರ್ ಥಾಮಸ್ ರೋ
A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
4) ಯುರೋಪಿನ ಹೆಬ್ಬಾಗಿಲ ಎಂದು ಹೆಸರುವಾಸಿಯಾದ ಪ್ರದೇಶ?
A) ಪ್ಯಾರಿಸ್
B) ಇಟಲಿ
C) ಕಾನ್ಸ್ಟಾಂಟಿನೋಪಲ್
D) ಲಂಡನ್
C) ಕಾನ್ಸ್ಟಾಂಟಿನೋಪಲ್
5) ಆಟೋಮನ್ ಟರ್ಕರಿಂದ ಕಾನ್ಸ್ಟಾಂಟಿನೋಪಲ್ ವಶವಾದದ್ದು?
A) 1543
B) 1453
C) 1553
D) 1443
B) 1453
6) ಭಾರತದಲ್ಲಿ ಬ್ರಿಟಿಷರ ರಾಜಧಾನಿಯಾಗಿದ್ದ ಸ್ಥಳ
A) ದೆಹಲಿ
B) ಮದ್ರಾಸ್
C) ಕಲ್ಕತ್ತಾ
D) ಮುಂಬೈ
C) ಕಲ್ಕತ್ತಾ
7) ಬ್ರಿಟಿಷರು 1639 ರಲ್ಲಿ ಕಟ್ಟಿಸಿದ ಮೊದಲ ಕೋಟೆಯಾದ 'ಸೇಂಟ್ ಫೋರ್ಟ್ ಜಾರ್ಜ್' ಇರುವ ಸ್ಥಳ?
A) ಕಲ್ಕತ್ತಾ
B) ಮುಂಬೈ
C) ಪಾಂಡಿಚೇರಿ
D) ಮದ್ರಾಸ್
D) ಮದ್ರಾಸ್
8) ವಾಸ್ಕೋ-ಡ-ಗಾಮಾ ಭಾರತಕ್ಕೆ ಮೊದಲು ಒಂದು ತಲುಪಿದ ಸ್ಥಳ?
A) ಕಾಪ್ಪಡ್
B) ಕೊಚ್ಚಿ
C) ಮುಂಬೈ
D) ಜಾರವಾರ
A) ಕಾಪ್ಪಡ್
9) ಫ್ರಾನ್ಸಿಸ್ಕೋ ಡಿ ಅಲ್ಮೇಡಾ ನೀಲಿ ನೀರಿನ ನೀತಿ ಜಾರಿಗೆ ತಂದ ಉದ್ದೇಶ?
A) ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆ
B) ವಸಾಹತು ಸ್ಥಾಪನೆ
C) ಭೂಮಿಯ ಮೇಲಿನ ಅಧಿಪತ್ಯಕ್ಕಾಗಿ
D) ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ
D) ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ
10) ಭಾರತದಲ್ಲಿ ಪೋರ್ಚುಗೀಸರ ನಿಜವಾದ ಸಾಮ್ರಾಜ್ಯ ಸ್ಥಾಪಕ ಎಂದು ಗುರುತಿಸಲ್ಪಟ್ಟ ಅಧಿಕಾರಿ?
A) ವಾಸ್ಕೋ-ಡಾ-ಗಾಮಾ
B) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
C) ಅಲ್ಫೋನ್ಸೋ ಡಿ ಅಲ್ಬುಕರ್ಕ್
D) ಡೂಪ್ಲೆ
C) ಅಲ್ಫೋನ್ಸೋ ಡಿ ಅಲ್ಬುಕರ್
11) ಭಾರತದಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು?
A) ಇಂಗ್ಲೀಷರು
B) ಡಚ್ಚರು
C) ಫ್ರೆಂಚರು
D) ಅರಬ್ಬರು
B) ಡಚ್ಚರು
12) 1617 ರಲ್ಲಿ ಇಂಗ್ಲೆಂಡ್ ರಾಜನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು?
A) ವಾಸ್ಕೋಡಗಾಮ
B) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
C) ಸರ್ ಐರ್ ಕೂಟ್
D) ಸರ್ ಥಾಮಸ್ ರೋ
D) ಸರ್ ಥಾಮಸ್ ರೋ
13) ಇಂಗ್ಲೀಷರಿಗೆ ಭಾರತದಲ್ಲಿ ದಾಸ್ತಾನು ಮಳಿಗೆ ಸ್ಥಾಪಿಸಲು ಪರವಾನಿಗೆ ನೀಡಿದ ರಾಜ?
A) ಜಹಾಂಗೀರ್
B) ಪರೂಕ್ ಷಾ
C) ಶಹಜಹಾನ್
D) ಎರಡನೇ ಬಹದ್ದೂರ್ ಷಾ
A) ಜಹಾಂಗೀರ್
14) ಭಾರತದಲ್ಲಿ ಫ್ರೆಂಚರ ರಾಜಧಾನಿಯಾಗಿದ್ದ ಸ್ಥಳ?
A) ಮದ್ರಾಸ್
B) ಪಾಂಡಿಚೇರಿ/ಪುದುಚೇರಿ
C) ಕಲ್ಕತ್ತಾ
D) ಮುಂಬೈ
B) ಪಾಂಡಿಚೇರಿ/ಪುದುಚೇರಿ
15) ಪ್ಲಾಸಿ ಕದನ : 1757 :: ಬಕ್ಸಾರ್ ಕದನ :
A) 1756
B) 1857
C) 1764
D) 1575
C) 1764
16) ಆಗಿನ 'ದಿವಾನಿ ಹಕ್ಕು' ಎಂದರೆ?
A) ನ್ಯಾಯದಾನ ಮಾಡುವ ಹಕ್ಕು
B) ರಾಜಾಡಳಿತ ನಡೆಸುವ ಹಕ್ಕು
C) ಭೂ ಕಂದಾಯ ವಸೂಲಿ ಮಾಡುವ ಹಕ್ಕು
D) ದೇಶದ ಎಲ್ಲಾ ಅಧಿಕಾರ
C) ಭೂ ಕಂದಾಯ ವಸೂಲಿ ಮಾಡುವ ಹಕ್
17) 1764 ರ ಬಕ್ಸಾರ್ ಕದನದಲ್ಲಿ ಮೂರು ಸಂಯುಕ್ತ ಸೇನೆಯನ್ನು ಸೋಲಿಸಿದ ಬ್ರಿಟಿಷ್ ಅಧಿಕಾರಿ?
A) ಲಾರ್ಡ್ ಡಾಲ್ ಹೌಸಿ
B) ರಾಬರ್ಟ್ ಕ್ಲೈವ್
C) ಸರ್ ಐರ್ ಕೂಟ್
D) ಹೆಕ್ಟರ್ ಮನ್ರೋ
D) ಹೆಕ್ಟರ್ ಮನ್
18) ಭಾರತಕ್ಕೆ ಬಂದ ಐರೋಪ್ಯರ ಕಾಲಾನುಕ್ರಮಣಿಕೆ?
A) ಪೋರ್ಚುಗೀಸರು ಪ್ರೆಂಚರು ಡಚ್ಚರು ಇಂಗ್ಲಿಷರ
B) ಪೋರ್ಚುಗೀಸರು ಇಂಗ್ಲೀಷರು ಡಚ್ಚರು ಫ್ರೆಂಚರು
C) ಫ್ರೆಂಚರು ಪೋರ್ಚುಗೀಸರು ಡಚ್ಚರು ಇಂಗ್ಲಿಷರು
D) ಪೋರ್ಚುಗೀಸರು ಡಚ್ಚರು ಇಂಗ್ಲಿಷರು ಫ್ರೆಂಚರು
D) ಪೋರ್ಚುಗೀಸರು ಡಚ್ಚರು ಇಂಗ್ಲಿಷರು ಫ್ರೆಂಚರು
19) ಬಂಗಾಳದಲ್ಲಿ 'ದ್ವಿ ಪ್ರಭುತ್ವ ಪದ್ಧತಿ' ಯನ್ನು ಜಾರಿಗೆ ತಂದವರು ಯಾರು?
A) ಅಲ್ಫೋನ್ಸೋ ಡಿ ಆಲ್ಬುಕರ್ಕ್
B) ಡೂಪ್ಲೇ
C) ರಾಬರ್ಟ್ ಕ್ಲೈವ್
D) ಫ್ರಾನ್ಸಿಸ್ಕೋ ಡಿ ಅಲ್ಮೇಡ
C) ರಾಬರ್ಟ್ ಕ್ಲೈವ್
20) ಬಕ್ಸಾರ್ ಕದನವು ಬ್ರಿಟಿಷರು ಈ ಕೆಳಗಿನ ಯಾವ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು?
A) ಗುಜರಾತ್ ಬಿಹಾರ್ ಮತ್ತು ಮದ್ರಾಸ್
B) ಬಂಗಾಳ ಪಂಜಾಬ್ ಮತ್ತು ಒರಿಸ್ಸಾ
C) ಬಂಗಾಳ ಬಿಹಾರ ಮತ್ತು ಒರಿಸ್ಸಾ
D) ಮೈಸೂರು ಬಿಹಾರ ಮತ್ತು ಮಹಾರಾಷ್ಟ್ರ
C) ಬಂಗಾಳ ಬಿಹಾರ ಮತ್ತು ಒರಿಸ್ಸಾ