Breaking

Tuesday, 14 September 2021

Today Top-10 General Knowledge Question Answers with Explanation in Kannada for All Competitive Exams-03

Today Top-10 General Knowledge Question Answers with Explanation in  Kannada for All Competitive Exams-03

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನ ನಗರಗಳಲ್ಲಿರುವ ಯಾವುದನ್ನು 'ಭಾರತದ ಸಿಲಿಕಾನ್ ಕಣಿವೆ' ಎಂದು ಕರೆಯಲಾಗಿದೆ?
ಎ. ಬೆಂಗಳೂರು
ಬಿ. ಚೆನ್ನೈ
ಸಿ. ಹೈದರಾಬಾದ್
ಡಿ. ಮುಂಬಯಿ


ಸರಿಯಾದ ಉತ್ತರ : ಎ. ಬೆಂಗಳೂರು 

ವಿವರಣೆ : 'ಸಿಲಿಕಾನ್ ವ್ಯಾಲಿ' ಎನ್ನುವುದು ಅಮೇರಿಕದಲ್ಲಿನ ಸ್ಯಾನ್‌ಫ್ರಾನ್ಸಿಸ್ಕೋ ಸಾಫ್ಟ್‌ವೇರ್ ಕಂಪನಿಗಳ ಕಂಪ್ಯೂಟರ್‌ನ ಬಹುಮುಖ್ಯ ಭಾಗಗಳಾದ ಇಂಟಿಗ್ರೇಟೆಡ್ ಚಿಪ್‌ಗಳ ತಯಾರಿಕೆಯಲ್ಲಿ 'ಸಿಲಿಕಾನ್' ಎಂಬ ಅಲೋಹವನ್ನು ಬಳಸುತ್ತಾರೆ. ಆದ್ದರಿಂದ ಈ ಸ್ಥಳಕ್ಕೆ ಸಿಲಿಕಾನ್ ವ್ಯಾಲಿ ಎಂಬ ವಿಶೇಷ ಹೆಸರು ಬಂದಿದೆ. ಅದೇ ರೀತಿ ಕರ್ನಾಟಕದ ಬೆಂಗಳೂರನ್ನು ಭಾರತದ 'ಸಿಲಿಕಾನ್ ವ್ಯಾಲಿ', 'ಸಿಲಿಕಾನ್ ಸಿಟಿ' ಎಂದು ಕರೆಯುವರು. ಭಾರತದಲ್ಲಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳು ನಮ್ಮ ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

2,  ಇವುಗಳನ್ನು ವಿಷ್ಣವ (ಈಕ್ವಿನಾಕ್ಸ್) ದಿನಗಳೆಂದು ಕರೆಯಲಾಗಿದೆ.
ಎ. ಭಾರತದಲ್ಲಿ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯನ್ನು ಹೊಂದಿರುವ ದಿನಗಳು
ಬಿ. ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು
ಸಿ. ಹಗಲು ರಾತ್ರಿಗಿಂತ ಧೀರ್ಘವಾದ ಅವಧಿಯನ್ನು ಹೊಂದಿರುವ ದಿನಗಳು
ಡಿ. ರಾತ್ರಿ ಹಗಲಿಗಿಂತ ದೀರ್ಘವಾದ ಅವಧಿಯನ್ನು ಹೊಂದಿರುವ ದಿನಗಳು.


ಸರಿಯಾದ ಉತ್ತರ: ಬಿ. ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು

ವಿವರಣೆ : ಮಾಚ್ 21 ಹಾಗೂ ಸೆಪ್ಟೆಂಬರ್ 23ರಂದು ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮವಾಗಿರುತ್ತವೆ. ಈ ದಿನದಲ್ಲಿ ಸೂರ್ಯನ ನೇರವಾದ ಕಿರಣಗಳು ಸಮಭಾಜಕ ವೃತ್ತದ ಮೇಲೆ ಬೀಳುತ್ತವೆ. ಇವುಗಳನ್ನು ಈಕ್ವಿನಾಕ್ಸ್ ಎನ್ನುವರು.

3, ಭಾರತದ ಉಪರಾಷ್ಟ್ರಪತಿಯು ಇವರುಗಳನ್ನೊಳಗೊಂಡ ನಿರ್ವಾಚಕ ಗಣ (ಎಲೆಕ್ಟ್ರರಲ್ ಕಾಲೇಜ್) ದಿಂದ ಚುನಾಯಿಸಲ್ಪಡುತ್ತಾನೆ.
ಎ. ರಾಜ್ಯಸಭೆಯ ಸದಸ್ಯರು
ಬಿ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸದಸ್ಯರು
ಸಿ. ಲೋಕಸಭೆಯ ಸದಸ್ಯರು
ಡಿ. ರಾಜ್ಯಗಳ ವಿಧಾನಸಭೆಗಳ ಸದಸ್ಯರು.


ಸರಿಯಾದ ಉತ್ತರ : ಬಿ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸದಸ್ಯರು

ವಿವರಣೆ : ಸಂವಿಧಾನದ ಅನುಚ್ಛೇದ 66 ಉಪರಾಷ್ಟ್ರಪತಿಯ ಆಯ್ಕೆಯ ಬಗ್ಗೆ ವಿವರಿಸುತ್ತದೆ. ಭಾರತದ ಉಪ ರಾಷ್ಟ್ರಪತಿಯು ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನದ ಎಲ್ಲಾ ಸದಸ್ಯರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.  ಆದರೆ ರಾಷ್ಟ್ರಪತಿಯವರನ್ನು ಚುನಾಯಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ಮತ್ತು ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರು ಮಾತ್ರ ಅರ್ಹರಾಗಿರುತ್ತಾರೆ.

4. "ಭಾರತೀಯ ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಭಾರತ ಸಂವಿಧಾನದ ಸುಗಮ ಕಾರ್ಯನಿರ್ವಹಣೆಗೆ ಸಾಮಾಜಿಕ ನ್ಯಾಯ ಅತ್ಯಗತ್ಯ" ವೆಂದು ಪ್ರತಿಪಾದಿಸಿದ ರಾಷ್ಟ್ರೀಯ ನಾಯಕರು
ಎ. ಡಾ. ರಾಜೇಂದ್ರ ಪ್ರಸಾದ್
ಬಿ. ಗಾಂಧೀಜಿ
ಸಿ. ಜವಾಹರಲಾಲ ನೆಹರು
ಡಿ. ಡಾ. ಬಿ. ಆರ್. ಅಂಬೇಡ್ಕರ್


ಸರಿಯಾದ ಉತ್ತರ : ಡಿ. ಡಾ. ಬಿ. ಆರ್. ಅಂಬೇಡ್ಕರ್

ವಿವರಣೆ : ಡಾ|| ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದ ಶಿಲ್ಪಿಯೆಂದು ಖ್ಯಾತಿಯಾಗಿದ್ದಾರೆ. ಇವರು ಭಾರತದ ಪ್ರಥಮ ಕಾನೂನು ಮಂತ್ರಿ ಹಾಗೂ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು.

5. ಕರ್ನಾಟಕ ರಾಜ್ಯದ ಯೋಜನಾಮಂಡಳಿಯ ಉಪಾಧ್ಯಕ್ಷರು.
ಎ. ಡಾ. ಜಿ. ತಿಮ್ಮಯ್ಯ
ಬಿ. ಡಾ. ಡಿ. ಎಂ. ನಂಜುಂಡಪ್ಪ
ಸಿ. ಡಾ. ಅಬ್ದುಲ್ ಅಜೀಜ್
ಡಿ. ಪ್ರೊ.ಬಿ.ಕೆ. ಚಂದ್ರಶೇಖರ್


ಸರಿಯಾದ ಉತ್ತರ : ಬಿ. ಡಾ. ಡಿ. ಎಂ. ನಂಜುಂಡಪ್ಪ

ವಿವರಣೆ : ಕರ್ನಾಟಕ ರಾಜ್ಯದ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದವರು. ಡಾ| ಡಿ.ಎಂ. ನಂಜುಂಡಪ್ಪನವರು ಇವರು ಖ್ಯಾತ ಅರ್ಥಶಾಸ್ತ್ರಜ್ಞರು ಇವರು ಸರ್ಕಾರದ ಆದೇಶದಂತೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯ ಬಗ್ಗೆ ವರದಿಯನ್ನು ತಯಾರಿಸಿ 2003ರಲ್ಲಿ ಸಲ್ಲಿಸಿದರು. ಇದನ್ನೇ ಹಿಂದುಳಿದ ಪ್ರದೇಶಗಳ ಡಿ. ಎಂ. ನಂಜುಂಡಪ್ಪ ಸಮಿತಿಯ ವರದಿ ಎನ್ನುವುದು.

6. ಕರ್ನಾಟಕದಲ್ಲಿ “ನಿರ್ಮಲ ಗ್ರಾಮ” ಯೋಜನೆ ಪ್ರಾರಂಭವಾದ ವರ್ಷ.
ಎ. 1995
ಬಿ. 1996
ಸಿ. 1997
ಡಿ. 1998


ಸರಿಯಾದ ಉತ್ತರ : ಎ. 1995

ವಿವರಣೆ : ನಿರ್ಮಲ ಗ್ರಾಮ ಯೋಜನೆಯನ್ನು 1995ರಲ್ಲಿ ಪ್ರಾರಂಭಿಸಲಾಯಿತು. ಬಯಲು ಬಹಿರ್ದೆಸೆಯನ್ನು ನಿಷೇಧಿಸಿ ಶೌಚಾಲಯವನ್ನು ಕಟ್ಟಿಕೊಳ್ಳಲು ಸರ್ಕಾರವು ಅನುದಾನವನ್ನು ನೀಡುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ. ಇದನ್ನು ಮೊದಲು 1995ರ ಅಕ್ಟೋಬರ್ 2 ರಂದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಅಂದಿನ ಮುಖ್ಯ ಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ಉದ್ಘಾಟನೆ ಮಾಡಿದರು.

7. ರಫ್ತು ಮಾರುಕಟ್ಟೆಯಲ್ಲಿ ಭಾರತದ ರಫ್ತುಗಳ ಶೇ. 63 ಭಾಗ ಇವು ಆಗಿವೆ.
ಎ. ಆಹಾರ ಧಾನ್ಯಗಳು
ಬಿ. ಎಣ್ಣೆ ಬೀಜಗಳು
ಸಿ. ಕಾಳುಗಳು (ದ್ವಿದಳ ಧಾನ್ಯಗಳು)
ಡಿ. ಹಣ್ಣು ಮತ್ತು ತರಕಾರಿಗಳು


ಸರಿಯಾದ ಉತ್ತರ : ಬಿ. ಎಣ್ಣೆ ಬೀಜಗಳು

ವಿವರಣೆ : ಭಾರತವು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿದೆ. 2013-14ನೇ ಸಾಲಿನಲ್ಲಿ ಒಟ್ಟು 26.73 ಮಿಲಿಯನ್ ಟನ್‌ಗಳಷ್ಟು ಎಣ್ಣೆ ಕಾಳುಗಳನ್ನು ಉತ್ಪಾದನೆ ಮಾಡಿದೆ.

 8. ಗದರ್ ಪಕ್ಷವೆಂಬ ಕ್ರಾಂತಿಕಾರಿ ರಾಷ್ಟ್ರೀಯ ಸಂಘಟನೆಯ ಕೇಂದ್ರ
ಎ. ಸ್ಯಾನ್ ಫ್ರಾನ್ಸಿಸ್ಕೋ
ಬಿ. ಮಾಸ್ಕೋ
ಡಿ. ಲಾಹೋರ್
ಸಿ. ಕಲ್ಕತ್ತಾ


ಸರಿಯಾದ ಉತ್ತರ : ಎ. ಸ್ಯಾನ್ ಫ್ರಾನ್ಸಿಸ್ಕೋ

ವಿವರಣೆ : 1913 ರಲ್ಲಿ ಅಮೇರಿಕಾ ಮತ್ತು ಕೆನಡಾದಲ್ಲಿ ವಾಸಿಸುತ್ತಿದ್ದ ಭಾರತೀಯ ಪಂಜಾಬಿಗಳಿಂದ ಗದರ್ ಪಕ್ಷವು ಸ್ಥಾಪಿಸಲ್ಪಟ್ಟಿತು. ಇದರ ಸ್ಥಾಪನೆಯ ಮುಖ್ಯ ಉದ್ದೇಶ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡುಸುವುದಾಗಿತ್ತು. ಈ ಪಕ್ಷದ ಪ್ರಮುಖ ಸ್ಥಾಪಕ  ಸದಸ್ಯರೆಂದರೆ ಲಾಲ ಹರ್ ದಯಾಳ್, ಸೋಹನ್ ಸಿಂಗ್ ಬಕ್ನಾ, ಕರ್ತಾರ್ ಸಿಂಗ್ ಮತ್ತು ರಾಸ್‌ಬಿಹಾರಿ ಬೋಸ್, ಪ್ರಪಂಚದ ಮೊದಲನೇ ಮಹಾ ಯುದ್ಧದ ನಂತರ ಇವರು ಭಾರತಕ್ಕೆ ಹಿಂದಿರುಗಿದ್ದರಿಂದ 1919ರಲ್ಲಿ ಈ ಪಕ್ಷವು ರದ್ದಾಯಿತು. 

9. ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆಧಾರದ ಮೇಲೆ ಆಯಿತು
ಎ. ವೇವಲ್ ಯೋಜನೆ
ಬಿ. ಕ್ಯಾಬಿನೆಟ್ ಮಿಷನ್ ಯೋಜನೆ
ಸಿ. ಮೌಂಟ್‌ಬ್ಯಾಟನ್ ಯೋಜನೆ
ಡಿ. ರಾಡ್‌ಕ್ಲಿಫ್ ಯೋಜನೆ


ಸರಿಯಾದ ಉತ್ತರ : ಡಿ. ರಾಡ್‌ಕ್ಲಿಫ್ ಯೋಜನೆ

ವಿವರಣೆ : ಭಾರತದ ಉಪಖಂಡವನ್ನು ವಿಭಜಿಸಲು ಹಾಗೂ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳ ಗಡಿರೇಖೆಯನ್ನು ಗುರುತಿಸಲು ಪಂಜಾಬ್ ಮತ್ತು ಬಂಗಾಳ ಗಡಿ ಆಯೋಗಗಳೆಂಬ ಎರಡು ಗಡಿ ಆಯೋಗಗಳನ್ನು ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್‌ರು 1947ರ ಜೂನ್ 30 ರಂದು ನೇಮಿಸಿದರು. ಈ ಎರಡು ಆಯೋಗಗಳಿಗೆ ಸರ್ ಸಿರಿಲ್ ರಾಡ್‌ಕ್ಲಿಫ್ ರನ್ನು ಅಧ್ಯಕ್ಷರನ್ನಾಗಿ ನೇಮಕಮಾಡಿತು. ರಾಡ್‌ಕ್ಲಿಫ್ ನು ತನಗೆ ನಿಗದಿಗೊಳಿಸಿದ್ಧ ಕಾರ್ಯವನ್ನು 1947ರ ಆಗಸ್ಟ್ 9 ರಂದು ಬಂಗಾಳದ ವರದಿಯನ್ನು ಆಗಸ್ಟ್ 11 ರಂದು ಪಂಜಾಬ್ ವರದಿಯನ್ನು ಸಿದ್ಧಪಡಿಸಿ  ಮೌಂಟ್ ಬ್ಯಾಟನ್ ರವರ ಕೈಗೊಪ್ಪಿಸಿ ಆಗಸ್ಟ್ 15 ರಂದು ಬ್ರಿಟನ್‌ಗೆ ತೆರಳಿದ. 1947ರ ಆಗಸ್ಟ್ 17 ರಂದು ಈ ವರದಿಯನ್ನು ಪ್ರಕಟಿಸಲಾಯಿತು.

10, ವಿದ್ಯುತ್ ಬಲ್ಸ್‌ನಲ್ಲಿರುವ ಫಿಲಮೆಂಟನ್ನು ಇದರಿಂದ
ಮಾಡಲಾಗಿದೆ.
ಎ. ತಾಮ್ರ
ಬಿ. ಮೆದು ಕಬ್ಬಿಣ
ಸಿ. ಟಂಗ್‌ಸ್ಟನ್
ಡಿ. ಸತುವು


ಸರಿಯಾದ ಉತ್ತರ : ಸಿ. ಟಂಗ್‌ಸ್ಟನ್

ವಿವರಣೆ : ವಿದ್ಯುತ್ ಬಲ್ಪನ್ನು 1879ರಲ್ಲಿ ಥಾಮಸ್ ಆಲ್ವಾ ಎಡಿಸನ್ ಎಂಬ ವಿಜ್ಞಾನಿ ಕಂಡುಹಿಡಿದನು. ಇದರಲ್ಲಿ ಸಾಮಾನ್ಯವಾಗಿ ಬಳಸುವ ಅನಿಲ ನೈಟ್ರೋಜನ್ ಬಣ್ಣದ ಬಲ್ಪಗಳಲ್ಲಿ ಇದಕ್ಕೆ ಬದಲಿಯಾಗಿ ಜಡ ಅನಿಲಗಳಾದ ಆರ್ಗಾನ್, ನಿಯಾನ್‌ಗಳನ್ನು ತುಂಬಿಸಿರುತ್ತಾರೆ. ಟಂಗಸ್ಟನ್ (W) ಅಧಿಕ ವಿದ್ಯುತ್ ರೋಧಕತ್ವ ಹೊಂದಿರುವ ಲೋಹ. ಇದರ ಮೂಲಕ ವಿದ್ಯುತ್ ಸುಲಭವಾಗಿ ಹರಿಯುವುದಿಲ್ಲ. ಆಗ ಶಾಖ ಹೆಚ್ಚಾಗಿ, ಬೆಳಕು ಬಿಡುಗಡೆಯಾಗುತ್ತದೆ.

No comments:

Post a Comment

Important Notes

Random Posts

Important Notes

Popular Posts

Top-100 General Knowledge (GK) Question Answers in Kannada for All Competitive Exams-01

Top-100 General Knowledge (GK) Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's E...

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್...

16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು

          16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

06th April 2025 Daily Current Affairs Quiz in Kannada for All Competitive Exams

          06th April 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-06th April 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

19-10-2021 Daily Top-20 General Knowledge Question Answers Quiz for All Competitive Exams

  19-10-2021 Daily Top-20 General Knowledge Question Answers Quiz for All Competitive Exams 🌺 Latest KPSC All Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Current Affairs 2021 Series Mock Test-01 Quiz  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Today Top-10 General Knowledge Question Answers in Kannada for All Competitive Exams-23

Today Top-10 General Knowledge Question Answers in Kannada for All Competitive Exams-23 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teache...

Top History Question Answers in Kannada for All Competitive Exams-01

  ಇತಿಹಾಸದ ಸೂಪರ್ ಪ್ರಶ್ನೋತ್ತರಗಳು-01 1. ದಕ್ಷಿಣ ಪಥೇಶ್ವರ ಎಂಬ ಬಿರುದಿನಿಂದ ಯಾರನ್ನು ಕರೆಯಲಾಗುತ್ತದೆ? ಸರಿಯಾದ ಉತ್ತರ: ಇಮ್ಮಡಿ ಪುಲಿಕೇಶಿ 2. ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ ಯಾವುದು? ಸರಿಯಾದ ಉತ್ತರ: ಗುಲ್ಬರ್ಗ್ 3. ತಾಳಿಕೋಟೆ ಕದನ ನಡೆದದ್ದು ಯಾರ ನಡುವೆ? ಸರಿಯಾದ ಉತ್ತರ: ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದವರು 4. ಮೈಸೂರು ಆಳಿದ ಯಾವ ರಾಜರ ಹೆಸರನ್ನು ಕೃಷ್ಣರಾಜಸಾಗರ ಅಣೆಕಟ್ಟಿಗೆ ಇಡಲಾಗಿದೆ? ಸರಿಯಾದ ಉತ್ತರ: ನಾಲ್ವಡಿ ಕೃಷ್ಣರಾಜ್ ಒಡೆಯರ್ 5. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಿಸಿದ ಆಧ್ಯಾತ್ಮಿಕ ನಾಯಕರು ಯಾರು? ಸರಿಯಾದ ಉತ್ತರ: ವಿದ್ಯಾರಣ್ಯ 6. ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಯಾರ ಕಾಲದಲ್ಲಿ ಸೇವೆಯನ್ನು ಸಲ್ಲಿಸಿದರು? ಸರಿಯಾದ ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್ 7. ಕೃಷ್ಣರಾಜಸಾಗರದಲ್ಲಿ ಬೃಂದಾವನ ಉದ್ಯಾನಗಳ ನಿರ್ಮಾಣಕ್ಕೆ ಕಾರಣರಾದ ಮೈಸೂರಿನ ದಿವಾನರು ಯಾರು? ಸರಿಯಾದ ಉತ್ತರ: ಮಿರ್ಜಾ ಇಸ್ಮಾಯಿಲ್ 8. ನವ ಮೈಸೂರು ರಾಜ್ಯದ ಮೊದಲ ಮುಖ್ಯ ಮುಖ್ಯಮಂತ್ರಿ ಯಾರು? ಸರಿಯಾದ ಉತ್ತರ: ಕೆ.ಸಿ.ರೆಡ್ಡಿ 9. ಚಾಳುಕ್ಯರ ಸೈನ್ಯವು ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು? ಸರಿಯಾದ ಉತ್ತರ: ಕರ್ಣಾಟ ಬಲ 10. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನ ನಡೆದ ವರ್ಷ ಯಾವುದು? ಸರಿಯಾದ ಉತ್ತರ: 1924 ಇವುಗಳನ್ನೂ ಓದಿ  💥  Best ...

29th March 2025 Daily Current Affairs Quiz in Kannada for All Competitive Exams

          29th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-29th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top-10 General Knowledge Question Answers Quiz for All Competitive Exams-02

  Top-10 General Knowledge Question Answers Quiz for All Competitive Exams-02 🌺 Latest KPSC All Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ General Knowledge 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs