Breaking

Friday, 12 April 2024

ಮಕ್ಕಳ ಕಥೆ: ಪರರ ಸ್ವತ್ತು ಪಾಷಾಣಕ್ಕೆ ಸಮ

 ಮಕ್ಕಳ ಕಥೆ: ಪರರ ಸ್ವತ್ತು ಪಾಷಾಣಕ್ಕೆ ಸಮ

ಮಕ್ಕಳ ನೀತಿ‌ಕಥೆಗಳು, ಮಕ್ಕಳ‌ ಕಥೆಗಳು, ಮಕ್ಕಳ ನೀತಿಬೋಧಕ ಕಥೆಗಳು, Children Stories, Moral Stories


ಒಮ್ಮೆ ಚಂದ್ರಗುಪ್ತ ಮೌರ್ಯನು ತನ್ನ ಮೇಧಾವಿ ಮಂತ್ರಿ ಚಾಣಕ್ಯನೊಂದಿಗೆ ರಾಜ್ಯದಲ್ಲಿ ಸಂಚಾರ ಗೈಯುತ್ತಾನೆ. ಅದು ತುಂಬಾ ಮೈಕೊರೆವ ಚಳಿಗಾಲವಾದ್ದರಿಂದ, ಬಡ ಜನರ ಕಷ್ಟ ಸುಖ ಅರಿಯಲೆಂದು ಮಾರುವೇಶದಲ್ಲಿ ಇರುತ್ತಾರೆ. ಬಹುತೇಕರು ರಾತ್ರಿ ಸರಿಯಾಗಿ ಹೊದ್ದುಕೊಳ್ಳಲು ಇಲ್ಲದೆ, ಕೊರೆವ ಚಳಿಯಲ್ಲಿ ನಡುಗುತ್ತಿರುತ್ತಾರೆ. ಇದನ್ನು ಕಂಡ ರಾಜ ನೊಂದುಕೊಳ್ಳುತ್ತಾರೆ. 'ಇಂಥ ಚಳಿಯಲ್ಲಿ ಸರಿಯಾಗಿ ಹೊದ್ದುಕೊಳ್ಳಲು ಇರದೆ ಪರಿತಪಿಸುವ ಈ ಜನಕ್ಕೆ ಹೊದ್ದುಕೊಳ್ಳಲು ನಾಳೆ ಕಂಬಳಿ ವ್ಯವಸ್ಥೆ ಮಾಡಬೇಕು' ಎಂದು ರಾಜನು ಚಾಣಕ್ಯನಿಗೆ ಆಜ್ಞಾಪಿಸುತ್ತಾನೆ.


ಜನರಿಗೆ ಹಂಚಲೆಂದು ಆ ದಿನ ರಾತ್ರಿ ಕಂಬಳಿಗಳನ್ನು ಚಾಣಕ್ಯನ ನೂರಾರು ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಇದನ್ನು ಹೇಗೋ ಅರಿತುಕೊಂಡ ಕಳ್ಳರು, ಕಂಬಳಿಗಳನ್ನು ದೋಚಲು ಚಾಣಕ್ಯನ ಮನೆಗೆ ಬರುತ್ತಾರೆ. ಅಲ್ಲಿ ಒಂದು ಚಾಪೆಯ ಮೇಲೆ ಚಾಣಕ್ಯನು ಹರುಕಲಾದ ಕಂಬಳಿ ಹೊದ್ದು ಕುಳಿತಿರುವುದನ್ನು ಕಂಡು ಗಾಬರಿಯಾದ ಕಳ್ಳರು ನಿಮ್ಮಲ್ಲಿ ಇಷ್ಟೊಂದು ಕಂಬಳಿ ಇದ್ದರೂ, ಹರುಕಲಾದ ಹಳೆ ಕಂಬಳಿ ಏಕೆ ಹೊದ್ದಿರುವಿರಿ?' ಎನ್ನುತ್ತಾರೆ. ಆಗ ಚಾಣಕ್ಯನು 'ಇಲ್ಲಿ ಸಂಗ್ರಹಿಸಿಟ್ಟ ಕಂಬಳಿಗಳು ಕಡುಬಡವರಿಗಾಗಿವೆ. ನನಗೆ ಹೊದ್ದುಕೊಳ್ಳಲು ಹರಕಲು ಕಂಬಳಿಯಾದರೂ ಇದೆ. ಅವರಿಗೆ ಇಂಥದ್ದೂ ಇಲ್ಲ. ಅಷ್ಟಕ್ಕೂ ಮಹಾರಾಜರು ನನ್ನನ್ನು ಪ್ರಾಮಾಣಿಕ ವ್ಯಕ್ತಿ ಎಂದು ಈ ಕಂಬಳಿಗಳನ್ನು ನನ್ನ ಮನೆಯಲ್ಲಿ ಇಟ್ಟಿದ್ದಾರೆ. ಇದರಲ್ಲಿ ಒಂದನ್ನು ತೆಗೆದುಕೊಂಡರೆ ನಾನು ರಾಜರಿಗೆ ಪ್ರಾಮಾಣಿಕನಾಗಿರಲು ಸಾಧ್ಯವೇ..?' ಎನ್ನುತ್ತಾನೆ.


ಈ ಮಾತು ಕೇಳುತ್ತಲೆ ಕಳ್ಳರು, ನಾಚಿಕೆಯಿಂದ‌ ತಲೆ ತಗ್ಗಿಸುತ್ತಾರೆ. ಪ್ರಾಮಾಣಿಕತೆ ಹಾಗೂ ನಂಬಿಗಸ್ಥರಾಗಲು ಮನಸ್ಸು ಮಾಡುತ್ತಾರೆ. ಇಲ್ಲಿಯವರೆಗೆ ನಾವು ಪರರಿಂದ ಕಳುವು ಮಾಡಿ ವೃದ್ಧಿಸಿಕೊಂಡ ಸಂಪತ್ತು ಪಾಪದ ಮೂಟೆ ಎಂದು ಅರ್ಥೈಸಿಕೊಳ್ಳುತ್ತಾರೆ. ಪ್ರಾಮಾಣಿಕತೆ ಎಂಬುದು ಗೌರವಯುತ ಜೀವನ ನಡೆಸಲು ಸಹಕಾರಿ ಎಂದರಿತರು, ತಾವು ಕಳ್ಳತನ ಮಾಡಲು ಬಂದುದಕ್ಕಾಗಿ ಚಾಣಕ್ಯರಲ್ಲಿ ಕ್ಷಮೆಯಾಚಿಸಿ ಹೊರ ನಡೆಯುತ್ತಾರೆ.


ಈ ಕಥೆಯ ನೀತಿ ಇಷ್ಟೇ, ಪರರ ವಸ್ತುಗಳು ಪಾಷಾಣಕ್ಕೆ ಸಮವೆಂದು ಪ್ರತಿಯೊಬ್ಬರೂ ತಿಳಿಯಬೇಕು. ಹಾಗೂ ಅನ್ಯರ ವಸ್ತುಗಳಿಗಾಗಿ ಆಸೆ ಪಡದೇ ನಮ್ಮಿಂದ ಸಾಧ್ಯವಾದಷ್ಟು ಪರರಿಗೆ ಉಪಕಾರವಾಗುವಂತಹ ಕೆಲಸಗಳನ್ನು ಮಾಡುತ್ತಾ ಸಾಗಬೇಕು. ನೀವೇನಂತೀರಿ??


ಕಥಾ ಕೃಪೆ: ಚಾಣಕ್ಯ ನೀತಿಸಾರ


No comments:

Post a Comment

Important Notes

Random Posts

Important Notes

Popular Posts

KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು

KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು "ನಿಮ್ಮ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಗತ್ಯವಾದ ತಾಜಾ ಮಾಹಿತಿಯನ್ನು ಇಲ್ಲಿ ಪಡೆಯಿರಿ. ಹೊಸ ಘಟನಾವಳಿ, ಸಿದ್ಧಾಂತಗಳು, ಮತ್ತು ವಿಶ್ಲೇಷಣೆಗಳೊಂದಿಗೆ ತಯಾರಿಗೊಳ್ಳಿ. ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯನ್ನು ಸೇರಿದಂತೆ ವಿಶೇಷವಾದ ವಿಷಯಾಧಾರಿತ ಲೇಖನಗಳು, ಟಿಪ್ಸ್, ಮತ್ತು ಉಪಾಯಗಳನ್ನು ಹೊಂದಿದ್ದು, ನಿಮ್ಮ ಯಶಸ್ಸಿಗೆ ದಾರಿಕೊಡುತ್ತದೆ. ಸುಲಭ ಮತ್ತು ಸ್ಪಷ್ಟ ಭಾಷೆಯಲ್ಲಿ ನಿರೂಪಣೆ, ಓದುಗರಿಗೆ ಅನುಕೂಲವಾಗುವ ರೀತಿಯ ಸಂಪೂರ್ಣ ಮಾರ್ಗದರ್ಶಕವಿದೆ." KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು. ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು: 1. ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಹೇರಿಕೆಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ? 1. ಮೊಟ್ಟಮೊದಲ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಬಾಹ್ಯ ಆಕ್ರಮಣದ ಕಾರಣದಿಂದ ಘೋಷಿಸಲಾಯಿತು. 2. ಅರುಣಾಚಲ ಪ್ರದೇಶದ ಮೇಲೆ ಚೀನಿಯರು ದಾಳಿ ಮಾಡಿದ ಸಂದರ್ಭದಲ್ಲಿ ಮೊದಲ ತುರ್ತುಪರಿಸ್ಥ...