Breaking

Friday, 12 April 2024

ಮಕ್ಕಳ ಕಥೆ: ಪರರ ಸ್ವತ್ತು ಪಾಷಾಣಕ್ಕೆ ಸಮ

 ಮಕ್ಕಳ ಕಥೆ: ಪರರ ಸ್ವತ್ತು ಪಾಷಾಣಕ್ಕೆ ಸಮ

ಮಕ್ಕಳ ನೀತಿ‌ಕಥೆಗಳು, ಮಕ್ಕಳ‌ ಕಥೆಗಳು, ಮಕ್ಕಳ ನೀತಿಬೋಧಕ ಕಥೆಗಳು, Children Stories, Moral Stories


ಒಮ್ಮೆ ಚಂದ್ರಗುಪ್ತ ಮೌರ್ಯನು ತನ್ನ ಮೇಧಾವಿ ಮಂತ್ರಿ ಚಾಣಕ್ಯನೊಂದಿಗೆ ರಾಜ್ಯದಲ್ಲಿ ಸಂಚಾರ ಗೈಯುತ್ತಾನೆ. ಅದು ತುಂಬಾ ಮೈಕೊರೆವ ಚಳಿಗಾಲವಾದ್ದರಿಂದ, ಬಡ ಜನರ ಕಷ್ಟ ಸುಖ ಅರಿಯಲೆಂದು ಮಾರುವೇಶದಲ್ಲಿ ಇರುತ್ತಾರೆ. ಬಹುತೇಕರು ರಾತ್ರಿ ಸರಿಯಾಗಿ ಹೊದ್ದುಕೊಳ್ಳಲು ಇಲ್ಲದೆ, ಕೊರೆವ ಚಳಿಯಲ್ಲಿ ನಡುಗುತ್ತಿರುತ್ತಾರೆ. ಇದನ್ನು ಕಂಡ ರಾಜ ನೊಂದುಕೊಳ್ಳುತ್ತಾರೆ. 'ಇಂಥ ಚಳಿಯಲ್ಲಿ ಸರಿಯಾಗಿ ಹೊದ್ದುಕೊಳ್ಳಲು ಇರದೆ ಪರಿತಪಿಸುವ ಈ ಜನಕ್ಕೆ ಹೊದ್ದುಕೊಳ್ಳಲು ನಾಳೆ ಕಂಬಳಿ ವ್ಯವಸ್ಥೆ ಮಾಡಬೇಕು' ಎಂದು ರಾಜನು ಚಾಣಕ್ಯನಿಗೆ ಆಜ್ಞಾಪಿಸುತ್ತಾನೆ.


ಜನರಿಗೆ ಹಂಚಲೆಂದು ಆ ದಿನ ರಾತ್ರಿ ಕಂಬಳಿಗಳನ್ನು ಚಾಣಕ್ಯನ ನೂರಾರು ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಇದನ್ನು ಹೇಗೋ ಅರಿತುಕೊಂಡ ಕಳ್ಳರು, ಕಂಬಳಿಗಳನ್ನು ದೋಚಲು ಚಾಣಕ್ಯನ ಮನೆಗೆ ಬರುತ್ತಾರೆ. ಅಲ್ಲಿ ಒಂದು ಚಾಪೆಯ ಮೇಲೆ ಚಾಣಕ್ಯನು ಹರುಕಲಾದ ಕಂಬಳಿ ಹೊದ್ದು ಕುಳಿತಿರುವುದನ್ನು ಕಂಡು ಗಾಬರಿಯಾದ ಕಳ್ಳರು ನಿಮ್ಮಲ್ಲಿ ಇಷ್ಟೊಂದು ಕಂಬಳಿ ಇದ್ದರೂ, ಹರುಕಲಾದ ಹಳೆ ಕಂಬಳಿ ಏಕೆ ಹೊದ್ದಿರುವಿರಿ?' ಎನ್ನುತ್ತಾರೆ. ಆಗ ಚಾಣಕ್ಯನು 'ಇಲ್ಲಿ ಸಂಗ್ರಹಿಸಿಟ್ಟ ಕಂಬಳಿಗಳು ಕಡುಬಡವರಿಗಾಗಿವೆ. ನನಗೆ ಹೊದ್ದುಕೊಳ್ಳಲು ಹರಕಲು ಕಂಬಳಿಯಾದರೂ ಇದೆ. ಅವರಿಗೆ ಇಂಥದ್ದೂ ಇಲ್ಲ. ಅಷ್ಟಕ್ಕೂ ಮಹಾರಾಜರು ನನ್ನನ್ನು ಪ್ರಾಮಾಣಿಕ ವ್ಯಕ್ತಿ ಎಂದು ಈ ಕಂಬಳಿಗಳನ್ನು ನನ್ನ ಮನೆಯಲ್ಲಿ ಇಟ್ಟಿದ್ದಾರೆ. ಇದರಲ್ಲಿ ಒಂದನ್ನು ತೆಗೆದುಕೊಂಡರೆ ನಾನು ರಾಜರಿಗೆ ಪ್ರಾಮಾಣಿಕನಾಗಿರಲು ಸಾಧ್ಯವೇ..?' ಎನ್ನುತ್ತಾನೆ.


ಈ ಮಾತು ಕೇಳುತ್ತಲೆ ಕಳ್ಳರು, ನಾಚಿಕೆಯಿಂದ‌ ತಲೆ ತಗ್ಗಿಸುತ್ತಾರೆ. ಪ್ರಾಮಾಣಿಕತೆ ಹಾಗೂ ನಂಬಿಗಸ್ಥರಾಗಲು ಮನಸ್ಸು ಮಾಡುತ್ತಾರೆ. ಇಲ್ಲಿಯವರೆಗೆ ನಾವು ಪರರಿಂದ ಕಳುವು ಮಾಡಿ ವೃದ್ಧಿಸಿಕೊಂಡ ಸಂಪತ್ತು ಪಾಪದ ಮೂಟೆ ಎಂದು ಅರ್ಥೈಸಿಕೊಳ್ಳುತ್ತಾರೆ. ಪ್ರಾಮಾಣಿಕತೆ ಎಂಬುದು ಗೌರವಯುತ ಜೀವನ ನಡೆಸಲು ಸಹಕಾರಿ ಎಂದರಿತರು, ತಾವು ಕಳ್ಳತನ ಮಾಡಲು ಬಂದುದಕ್ಕಾಗಿ ಚಾಣಕ್ಯರಲ್ಲಿ ಕ್ಷಮೆಯಾಚಿಸಿ ಹೊರ ನಡೆಯುತ್ತಾರೆ.


ಈ ಕಥೆಯ ನೀತಿ ಇಷ್ಟೇ, ಪರರ ವಸ್ತುಗಳು ಪಾಷಾಣಕ್ಕೆ ಸಮವೆಂದು ಪ್ರತಿಯೊಬ್ಬರೂ ತಿಳಿಯಬೇಕು. ಹಾಗೂ ಅನ್ಯರ ವಸ್ತುಗಳಿಗಾಗಿ ಆಸೆ ಪಡದೇ ನಮ್ಮಿಂದ ಸಾಧ್ಯವಾದಷ್ಟು ಪರರಿಗೆ ಉಪಕಾರವಾಗುವಂತಹ ಕೆಲಸಗಳನ್ನು ಮಾಡುತ್ತಾ ಸಾಗಬೇಕು. ನೀವೇನಂತೀರಿ??


ಕಥಾ ಕೃಪೆ: ಚಾಣಕ್ಯ ನೀತಿಸಾರ


No comments:

Post a Comment

Important Notes

Random Posts

Important Notes

Popular Posts

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Today Top-10 General Knowledge Question Answers with Explanation in Kannada for All Competitive Exams-05

Today Top-10 General Knowledge Question Answers with Explanation in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!!  KPSC NOTES MCQS  ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ  ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ  ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು"  ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!!  Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-...

Top-100 History Question Answers in Kannada for All Competitive Exams-01

Top-100 History Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಇತಿಹಾಸ ದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recr...

01 November 2021 Detailed Daily Current Affairs in Kannada for All Competitive Exams

         01 November 2021 Detailed Daily Current Affairs in Kannada for All Competitive Exams ಹಾಯ್ ,  ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ  ಪ್ರಚಲಿತ ವಿದ್ಯಮಾನ ಗಳ  ಅರಿವು ಇರಲೇಬೇಕು. ತನ್ನ ಸಮುದಾಯ ,  ಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ  KPSC NOTES MCQS   ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳು ,  ಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. 💥  Click here to Read Daily Current Affairs in Kannada